ಆ್ಯಪ್ನಗರ

ಚಿಕ್ಕಮಗಳೂರು: ಕಾಫಿನಾಡಿಗರಿಗೆ ಭೂಕಂಪದ ಅನುಭವ..? ಭಾರೀ ಶಬ್ಧಕ್ಕೆ ಬೆಚ್ಚಿಬಿದ್ದ ಜನ

ಕಾಫಿ ನಾಡು ಚಿಕ್ಕಮಗಳೂರಿನ ಕೊಪ್ಪ, ಎನ್ಆರ್ ಪುರ ಹಾಗೂ ತರಿಕೇರೆ ತಾಲೂಕುಗಳಲ್ಲಿ ಭೂಮಿ ಕಂಪಿಸಿದ ಅನುಭವ ಜನರಿಗಾಗಿದೆ. ಇದು ಭೂಕಂಪನವೋ ಅಥವಾ ಸೂಪರ್‌ ಸಾನಿಕ್‌ ಜೆಟ್‌ ಶಬ್ಧವೋ ಎಂಬುದರ ಬಗ್ಗೆ ಯಾವುದೇ ಖಚಿತತೆ ಸಿಕ್ಕಿಲ್ಲ.

Vijaya Karnataka Web 21 Jan 2021, 11:43 pm
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಗುರುವಾರ ತಡರಾತ್ರಿ ಜನರಿಗೆ ಭೂಕಂಪದ ಅನುಭವವಾಗಿದೆ. ಕೊಪ್ಪ, ಎನ್ಆರ್ ಪುರ ಹಾಗೂ ತರಿಕೇರೆ ತಾಲೂಕುಗಳಲ್ಲಿ ಭೂಮಿ ಕಂಪಿಸಿದ ಅನುಭವ ಜನರಿಗಾಗಿದೆ.
Vijaya Karnataka Web Earthquake Rep
Representative image


ಕೊಪ್ಪ, ಎನ್ಆರ್ ಪುರ ಹಾಗೂ ತರಿಕೇರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಭಾರೀ ಸದ್ದು ಕೇಳಿಬಂದಿದ್ದು, ಶಬ್ಧ ಕೇಳುತ್ತಲೇ ಅತಂಕಗೊಂಡ ಜನ ಮನೆಯಿಂದ ಹೊರಬಂದಿದ್ದಾರೆ. ಸುಮಾರು 10.20 ರಿಂದ 10.25ರ ನಡುವೆ ಎರಡು ಬಾರಿ ಭೂಕಂಪದ ಅನುಭವವಾಗಿದೆ.

ಬಾಂಬ್‌ ಬ್ಲಾಸ್ಟ್‌ ಆದಂತೆ ಭೂಮಿಯೊಳಗಿನಿಂದ ಭಾರೀ ಶಬ್ಧ ಕೇಳಿಬಂದಿದೆ. ಇದೇ ರೀತಿ ಶಿವಮೊಗ್ಗ ಜಿಲ್ಲೆಯ ಅನೇಕ ಕಡೆ ಭಾರೀ ಶಬ್ಧ ಕೇಳಿಬಂದಿದ್ದು, ಕೆಲವು ಕಟ್ಟಡಗಳ ಗಾಜುಗಳು ಪುಡಿಪುಡಿಯಾಗಿವೆ. ಈ ಹಿಂದೆ ಬೆಂಗಳೂರಿನಲ್ಲೂ ಇದೇ ರೀತಿ ಶಬ್ಧ ಕೇಳಿ ಬಂದಿದ್ದು, ನಂತರ ಅದು ಸೂಪರ್‌ ಸಾನಿಕ್‌ ಜೆಟ್‌ ಶಬ್ಧ ಎನ್ನಲಾಗಿತ್ತು. ಶಿವಮೊಗ್ಗದಲ್ಲಿ ಮಧ್ಯರಾತ್ರಿ ಭೂಕಂಪದ ಅನುಭವ: ಬೆಚ್ಚಿ ಬೀದಿಗೆ ಬಂದ ಜನ!ಚಿಕ್ಕಮಗಳೂರು ಜಿಲ್ಲೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬರುವುದರಿಂದ ಇಲ್ಲಿ ಭೂಕಂಪನದ ಸಾಧ್ಯತೆ ಕಡಿಮೆ. ಶಿವಮೊಗ್ಗ ಬಳಿಯ ರೈಲ್ವೇ ಕ್ರಷರ್‌ನಲ್ಲಿ ಸ್ಫೋಟ ಸಂಭವಿಸಿದ್ದರಿಂದ ಭಾರೀ ಶಬ್ಧ ಕೇಳಿ ಬಂದಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ