ಆ್ಯಪ್ನಗರ

ವೃದ್ಧಾಪ್ಯದ ಒಂಟಿತನ ನಿವಾರಣೆ ಅಗತ್ಯ

ವೃದ್ಧಾಪ್ಯದಲ್ಲಿಕಾಡುವ ಒಂಟಿತನ ನಿವಾರಣೆ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ರಾಜಸ್ಥಾನದ ಮೌಂಟ್‌ ಅಬುವಿನ ಬ್ರಹ್ಮಾಕುಮಾರೀಸ್‌ ಅಂತಾರಾಷ್ಟ್ರೀಯ ಮುಖ್ಯಾಲಯದ ಡಾ.ಮಹೇಶ್‌ ಹೇಮಾದ್ರಿ ಹೇಳಿದರು.

Vijaya Karnataka 4 Sep 2019, 5:00 am
ಚಿಕ್ಕಮಗಳೂರು: ವೃದ್ಧಾಪ್ಯದಲ್ಲಿಕಾಡುವ ಒಂಟಿತನ ನಿವಾರಣೆ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ರಾಜಸ್ಥಾನದ ಮೌಂಟ್‌ ಅಬುವಿನ ಬ್ರಹ್ಮಾಕುಮಾರೀಸ್‌ ಅಂತಾರಾಷ್ಟ್ರೀಯ ಮುಖ್ಯಾಲಯದ ಡಾ.ಮಹೇಶ್‌ ಹೇಮಾದ್ರಿ ಹೇಳಿದರು.
Vijaya Karnataka Web loneliness of old age is necessary
ವೃದ್ಧಾಪ್ಯದ ಒಂಟಿತನ ನಿವಾರಣೆ ಅಗತ್ಯ


ನಗರ ಹೊರವಲಯದ ಕದ್ರಿಮಿದ್ರಿಯಲ್ಲಿಬ್ರಹ್ಮಾಕುಮಾರೀಸ್‌ನಿಂದ ಸೋಮವಾರ ಆಯೋಜಿಸಿದ್ದ ವೃದ್ಧಾಪ್ಯದಲ್ಲಿಆರೋಗ್ಯ ನಿರ್ವಹಣೆ-ಆಧ್ಯಾತ್ಮಿಕ ಶಕ್ತಿಯಿಂದ ಆನಂದಮಯ ಸುಖೀ ವೃದ್ಧ ಜೀವನಕ್ಕೆ ಸತ್ಪ್ರೇರಣೆ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಕೃತಿಕ ಸೌಂದರ‍್ಯ ವೀಕ್ಷಣೆ, ಕೈತೋಟಗಳ ನಿರ್ಮಾಣ, ಗಿಡಗಳ ಆರೈಕೆ, ಮಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸಾಮೂಹಿಕ ಪ್ರಾರ್ಥನೆ, ಧ್ಯಾನದ ಮೂಲಕ ಒಂಟಿತನ ನಿವಾರಿಸಿಕೊಳ್ಳಬಹುದು ಎಂದರು.

ಫಿಸಿಯೋಥೆರಪಿಸ್ಟ್‌ ಡಾ.ಹನುಮಂತ ಭಾರಶೆಟ್ಟಿ ಹಿರಿಯ ನಾಗರಿಕರಿಗೆ ಸರಳ, ಸಹಜ ವ್ಯಾಯಾಮಗಳನ್ನು ಅಭ್ಯಾಸ ಮಾಡಿಸಿ, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು.

ಜೀವನ ಸಂಧ್ಯಾ ಅಧ್ಯಕ್ಷ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಎಲ್ಲಸೌಲಭ್ಯ ನೀಡಲಾಗಿದೆ. ನೈರ್ಮಲ್ಯ ಕಾಪಾಡಿಕೊಂಡಿದ್ದು, ಶುಚಿಯಾದ ಆಹಾರ, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಬಿ.ಕೆ.ಭಾಗ್ಯ, ಬಿ.ಕೆ.ಪಾರ್ವತಿ ಮಾತನಾಡಿದರು. ಲೋಕೇಶ್‌ ಸ್ವಾಗತಿಸಿ, ಮಹಾಲಕ್ಷ್ಮಿ ವಂದಿಸಿದರು. ಡಾ.ನಾಗೇಶ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ