ಆ್ಯಪ್ನಗರ

ವೃತ್ತಿ ಬಗ್ಗೆ ಪ್ರೀತಿ, ಅಭಿಮಾನವಿರಲಿ

ವೃತ್ತಿಯ ಬಗ್ಗೆ ಪ್ರೀತಿ, ಅಭಿಮಾನವಿದ್ದರೆ ಮಾಡುವ ವೃತ್ತಿ ಕೂಡ ಪರಿಣಾಮಕಾರಿಯಾಗಿರುತ್ತದೆ ಎಂದು ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೊಸದುರ್ಗದ ಎಚ್‌.ಎಸ್‌. ನವೀನ್‌ಕುಮಾರ್‌ ಅಭಿಪ್ರಾಯಪಟ್ಟರು.

Vijaya Karnataka 21 Sep 2019, 5:00 am
ಅಜ್ಜಂಪುರ: ವೃತ್ತಿಯ ಬಗ್ಗೆ ಪ್ರೀತಿ, ಅಭಿಮಾನವಿದ್ದರೆ ಮಾಡುವ ವೃತ್ತಿ ಕೂಡ ಪರಿಣಾಮಕಾರಿಯಾಗಿರುತ್ತದೆ ಎಂದು ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೊಸದುರ್ಗದ ಎಚ್‌.ಎಸ್‌. ನವೀನ್‌ಕುಮಾರ್‌ ಅಭಿಪ್ರಾಯಪಟ್ಟರು.
Vijaya Karnataka Web 17AJP01_35


ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿಸೋಮವಾರ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆ ಆಯೋಜಿಸಿದ್ದ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭದಲ್ಲಿ'ವೃತ್ತಿಯಲ್ಲಿಯಶಸ್ಸು' ಕುರಿತು ಅವರು ಉಪನ್ಯಾಸ ನೀಡಿದರು.

ಪರಿಣಾಮಕಾರಿ ವೃತ್ತಿಯಿಂದ ಯಶಸ್ಸು ಶತಸಿದ್ಧ. ಇದಕ್ಕೆಲ್ಲಧನಾತ್ಮಕ ಮನೋಭಾವ ಮುಖ್ಯ. ಯಾವುದೇ ವೃತ್ತಿಯಲ್ಲಿಧನಾತ್ಮಕ ಮನೋಭಾವ, ಶಿಸ್ತು ಮತ್ತು ಪ್ರಾಮಾಣಿಕತೆ ಬೇಕು. ಸರಕಾರಿ ನೌಕರ ಕಾರಾರ‍ಯಂಗದ ಬಹು ಮುಖ್ಯ ಅಂಗ. ಸರಕಾರದ ಅನೇಕ ಯೋಜನೆ, ಜನಪರ ಕಾರ್ಯಗಳು ಅನುಷ್ಠಾನಗೊಳ್ಳುವುದು ನೌಕರ, ಅಧಿಕಾರಿಗಳಿಂದ. ಹಾಗಾಗಿ, ನನ್ನೊಬ್ಬನಿಂದ ಏನು ಸಾಧ್ಯ ಎಂದುಕೊಳ್ಳದೆ ಕರ್ತವ್ಯದಲ್ಲಿನನ್ನ ಪಾಲೂ ಇದೆ ಎಂಬ ಮನೋಭಾವದಿಂದ ಕೆಲಸ ನಿರ್ವಹಿಸಬೇಕು. ನೂರಕ್ಕೆ ನೂರು ಧನಾತ್ಮಕ ಮನೋಭಾವದಿಂದ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಣೆ ಮಾಡಿ. ಇದರಿಂದ ವೃತ್ತಿಯಲ್ಲಿಆತ್ಮತೃಪ್ತಿ ಸಿಗುತ್ತದೆ ಎಂದು ಅವರು ಸಲಹೆ ನೀಡಿದರು.

ಸಂಘದ ತಾಲೂಕು ಅಧ್ಯಕ್ಷ ಜಿ.ಎನ್‌. ಈಶ್ವರಪ್ಪ ಮಾತನಾಡಿ, ಸರಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ತಮ್ಮ ಕರ್ತವ್ಯ ನಿರ್ವಹಣೆ ಜತೆಗೆ ಸಂಪನ್ನವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಕೂಡ ಅಗತ್ಯ. ಹಾಗಾಗಿ, ವ್ಯಕ್ತಿತ್ವ ವಿಕಸನದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ