ಅಜ್ಜಂಪುರ: ಸಿದ್ದರಾಮ ಜಯಂತಿ ಪ್ರಯುಕ್ತ ಹೊರತರುತ್ತಿರುವ ಸ್ಮರಣ ಸಂಚಿಕೆ ಒಂದು ಸಾಂಸ್ಕೃತಿಕ ದಾಖಲೆಯಾಗಬೇಕು ಎಂದು ಸಿದ್ದರಾಮ ಜಯಂತಿ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಸಲಹೆ ನೀಡಿದರು.
ಸಮೀಪದ ಸೊಲ್ಲಾಪುರದ ವಿಕಾಸಂ ಕಾರ್ಯಾಲಯದಲ್ಲಿಬುಧವಾರ ನಡೆದ ಸಿದ್ದರಾಮ ಜಯಂತಿ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಪೂರ್ವಭಾವಿ ಸಭೆಯಲ್ಲಿಅವರು ಮಾತನಾಡಿದರು. ಹನ್ನೆರಡನೇ ಶತಮಾನದ ಶರಣ, ವಚನಕಾರ ಸಿದ್ದರಾಮರ ಬಗ್ಗೆ ಪರಿಪೂರ್ಣವಾದ ಸ್ಮರಣ ಸಂಚಿಕೆ ಹೊರತರಬೇಕು. ಅದು ಸಂಗ್ರಹಯೋಗ್ಯ ಸಂಚಿಕೆಯಾಗಿರಬೇಕು ಎಂದರು.
ಜಾನಪದ ತಜ್ಞ ಡಾ. ಬಸವರಾಜ ನೆಲ್ಲಿಸರ ಮಾತನಾಡಿ, ಸೊಲ್ಲಾಪುರದಲ್ಲಿ2020ರ ಜನವರಿ 15ರಂದು ರಾಜ್ಯಮಟ್ಟದ 847ನೇ ಸಿದ್ದರಾಮ ಜಯಂತಿ ನಡೆಯಲಿರುವ ಸಂದರ್ಭದಲ್ಲಿಈ ಸ್ಮರಣ ಸಂಚಿಕೆ ಬಿಡುಗಡೆಯಾಗಬೇಕಿದೆ. ಅವಸರದ ಅಡುಗೆಯಾಗಬಾರದು. ಆದ್ದರಿಂದ ಈ ಪೂರ್ವಭಾವಿ ಸಭೆಯಲ್ಲಿಸಂಚಿಕೆಯ ಸ್ವರೂಪ, ಅದರಲ್ಲಿಪ್ರಕಟವಾಗಬೇಕಾದ ಮಹತ್ವದ ಲೇಖನಗಳು ಸಮಗ್ರವಾಗಿ ಯೋಜಿಸಬೇಕು ಎಂದರು.
ಲೇಖಕ ದಂದೂರು ರಾಜಣ್ಣ ಮಾತನಾಡಿ, ಜಯಂತಿಯು ಸಿದ್ದರಾಮನ ಗದ್ದುಗೆ, ದೇವಾಲಯ ಇರುವ ನಮ್ಮ ಭಾಗದ ಸುಕ್ಷೇತ್ರ ಸೊಲ್ಲಾಪುರದಲ್ಲಿನಡೆಯುವ ಕಾರಣ ಕ್ಷೇತ್ರದ ಪರಿಚಯ ಲೇಖನ ಇರಬೇಕು ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮೇಶ್ವರಸ್ವಾಮಿ ದೇವಾಲಯ ಸಮಿತಿಯ ಕೆ.ಎಸ್. ಶಿವಣ್ಣ ಮತ್ತು ಸಿದ್ದರಾಮ ಜಯಂತಿ ಸ್ವಾಗತ ಸಮಿತಿಯ ಖಜಾಂಚಿ ಎಂ. ಕೃಷ್ಣಮೂರ್ತಿ, ಸಿದ್ದರಾಮ ಐತಿಹಾಸಿಕ ವ್ಯಕ್ತಿಯಾದರೂ ಈ ಭಾಗದ ಜನರಿಗೆ ಸಿದ್ದರಾಮ ದೇವರಾಗಿದ್ದಾರೆ. ಆ ನಂಬಿಕೆಗೆ ಅಪಚಾರವಾಗದಂತೆ ಸಂಚಿಕೆ ಇರಲಿ ಎಂದು ಸಲಹೆ ನೀಡಿದರು.ಸ್ಮರಣ ಸಂಚಿಕೆ ಸಮಿತಿಯ ಸದಸ್ಯರಾದ ಚಿಕ್ಕನಲ್ಲೂರು ರಾಜಪ್ಪ ಮತ್ತು ಲೇಖಕ ಅಜ್ಜಂಪುರ ಅಪೂರ್ವ ಉಪಸ್ಥಿತರಿದ್ದರು.
===================
ಶಾಸನದಲ್ಲಿನೊಳಂಬರು, ಸಿದ್ದರಾಮನ ಹೊಸ ಓದು, ಸಿದ್ದರಾಮನ ವಚನಗಳಲ್ಲಿಬಸವಣ್ಣನವರ ಪ್ರಭಾವ, ಸಿದ್ದರಾಮನ ಅಂಕಿತದ ಮೇಲೆ ಹೊಸ ಬೆಳಕು ಮುಂತಾದ ಹೊಸ ಬಗೆಯ ಲೇಖನಗಳನ್ನು ಈಗಾಗಲೇ ಸಂಪಾದಿಸಲಾಗಿದೆ.
-ಡಾ. ಬಸವರಾಜ ನೆಲ್ಲಿಸರ,ಜಾನಪದ ತಜ್ಞ
ಸಮೀಪದ ಸೊಲ್ಲಾಪುರದ ವಿಕಾಸಂ ಕಾರ್ಯಾಲಯದಲ್ಲಿಬುಧವಾರ ನಡೆದ ಸಿದ್ದರಾಮ ಜಯಂತಿ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಪೂರ್ವಭಾವಿ ಸಭೆಯಲ್ಲಿಅವರು ಮಾತನಾಡಿದರು. ಹನ್ನೆರಡನೇ ಶತಮಾನದ ಶರಣ, ವಚನಕಾರ ಸಿದ್ದರಾಮರ ಬಗ್ಗೆ ಪರಿಪೂರ್ಣವಾದ ಸ್ಮರಣ ಸಂಚಿಕೆ ಹೊರತರಬೇಕು. ಅದು ಸಂಗ್ರಹಯೋಗ್ಯ ಸಂಚಿಕೆಯಾಗಿರಬೇಕು ಎಂದರು.
ಜಾನಪದ ತಜ್ಞ ಡಾ. ಬಸವರಾಜ ನೆಲ್ಲಿಸರ ಮಾತನಾಡಿ, ಸೊಲ್ಲಾಪುರದಲ್ಲಿ2020ರ ಜನವರಿ 15ರಂದು ರಾಜ್ಯಮಟ್ಟದ 847ನೇ ಸಿದ್ದರಾಮ ಜಯಂತಿ ನಡೆಯಲಿರುವ ಸಂದರ್ಭದಲ್ಲಿಈ ಸ್ಮರಣ ಸಂಚಿಕೆ ಬಿಡುಗಡೆಯಾಗಬೇಕಿದೆ. ಅವಸರದ ಅಡುಗೆಯಾಗಬಾರದು. ಆದ್ದರಿಂದ ಈ ಪೂರ್ವಭಾವಿ ಸಭೆಯಲ್ಲಿಸಂಚಿಕೆಯ ಸ್ವರೂಪ, ಅದರಲ್ಲಿಪ್ರಕಟವಾಗಬೇಕಾದ ಮಹತ್ವದ ಲೇಖನಗಳು ಸಮಗ್ರವಾಗಿ ಯೋಜಿಸಬೇಕು ಎಂದರು.
ಲೇಖಕ ದಂದೂರು ರಾಜಣ್ಣ ಮಾತನಾಡಿ, ಜಯಂತಿಯು ಸಿದ್ದರಾಮನ ಗದ್ದುಗೆ, ದೇವಾಲಯ ಇರುವ ನಮ್ಮ ಭಾಗದ ಸುಕ್ಷೇತ್ರ ಸೊಲ್ಲಾಪುರದಲ್ಲಿನಡೆಯುವ ಕಾರಣ ಕ್ಷೇತ್ರದ ಪರಿಚಯ ಲೇಖನ ಇರಬೇಕು ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮೇಶ್ವರಸ್ವಾಮಿ ದೇವಾಲಯ ಸಮಿತಿಯ ಕೆ.ಎಸ್. ಶಿವಣ್ಣ ಮತ್ತು ಸಿದ್ದರಾಮ ಜಯಂತಿ ಸ್ವಾಗತ ಸಮಿತಿಯ ಖಜಾಂಚಿ ಎಂ. ಕೃಷ್ಣಮೂರ್ತಿ, ಸಿದ್ದರಾಮ ಐತಿಹಾಸಿಕ ವ್ಯಕ್ತಿಯಾದರೂ ಈ ಭಾಗದ ಜನರಿಗೆ ಸಿದ್ದರಾಮ ದೇವರಾಗಿದ್ದಾರೆ. ಆ ನಂಬಿಕೆಗೆ ಅಪಚಾರವಾಗದಂತೆ ಸಂಚಿಕೆ ಇರಲಿ ಎಂದು ಸಲಹೆ ನೀಡಿದರು.ಸ್ಮರಣ ಸಂಚಿಕೆ ಸಮಿತಿಯ ಸದಸ್ಯರಾದ ಚಿಕ್ಕನಲ್ಲೂರು ರಾಜಪ್ಪ ಮತ್ತು ಲೇಖಕ ಅಜ್ಜಂಪುರ ಅಪೂರ್ವ ಉಪಸ್ಥಿತರಿದ್ದರು.
===================
ಶಾಸನದಲ್ಲಿನೊಳಂಬರು, ಸಿದ್ದರಾಮನ ಹೊಸ ಓದು, ಸಿದ್ದರಾಮನ ವಚನಗಳಲ್ಲಿಬಸವಣ್ಣನವರ ಪ್ರಭಾವ, ಸಿದ್ದರಾಮನ ಅಂಕಿತದ ಮೇಲೆ ಹೊಸ ಬೆಳಕು ಮುಂತಾದ ಹೊಸ ಬಗೆಯ ಲೇಖನಗಳನ್ನು ಈಗಾಗಲೇ ಸಂಪಾದಿಸಲಾಗಿದೆ.
-ಡಾ. ಬಸವರಾಜ ನೆಲ್ಲಿಸರ,ಜಾನಪದ ತಜ್ಞ