ಆ್ಯಪ್ನಗರ

ಯುವ ಸಂಘಗಳ ನಿರ್ವಹಣೆ ಅಗತ್ಯ

ಯುವಕ ಸಂಘಗಳು, ಮಂಡಳಿಗಳು ಅಗತ್ಯ ದಾಖಲೆಗಳನ್ನು ನಿರ್ವಹಿಸುವ ಜತೆಗೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು ಎಂದು ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆಯುಕ್ತ ಎ.ಎನ್‌.ಮಹೇಶ್‌ ಸಲಹೆ ಮಾಡಿದರು.

Vijaya Karnataka 24 Aug 2018, 5:00 am
ಚಿಕ್ಕಮಗಳೂರು: ಯುವಕ ಸಂಘಗಳು, ಮಂಡಳಿಗಳು ಅಗತ್ಯ ದಾಖಲೆಗಳನ್ನು ನಿರ್ವಹಿಸುವ ಜತೆಗೆ ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು ಎಂದು ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆಯುಕ್ತ ಎ.ಎನ್‌.ಮಹೇಶ್‌ ಸಲಹೆ ಮಾಡಿದರು.
Vijaya Karnataka Web maintenance of youth unions is essential
ಯುವ ಸಂಘಗಳ ನಿರ್ವಹಣೆ ಅಗತ್ಯ


ನಗರದ ನೆಹರು ಯುವ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಯುವ ಸಂಘಗಳ ಅಭಿವೃದ್ಧಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕ ಸಂಘ, ಮಹಿಳಾ ಮಂಡಳಿಗಳು ಸೌಲಭ್ಯ ಮತ್ತು ಮಾಹಿತಿ ಕೊರತೆ ಎದುರಿಸುತ್ತಿದೆ. ಬಹಳಷ್ಟು ಸಂಘ, ಮಂಡಳಿಗಳು ನವೀಕರಣವಾಗದೆ ನಶಿಸುತ್ತಿವೆ. ದಾಖಲೆಗಳನ್ನೂ ಸಮರ್ಪಕವಾಗಿ ನಿರ್ವಹಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ನೆಹರು ಯುವ ಕೇಂದ್ರ ಯುವ ಸಂಘ, ಮಂಡಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ಅಕ್ಕನ ಬಳಗ ಅಧ್ಯಕ್ಷೆ ಹೇಮಲತ ಮಾತನಾಡಿ, ಯುವಕ ಸಂಘ, ಮಂಡಳಿಗಳಿಗೆ ನಿರಂತರವಾಗಿ ಕ್ರಿಯಾತ್ಮಕ ಕಾರ‍್ಯಕ್ರಮಗಳನ್ನು ದೊರಕಿಸಿ ಅವು ಅಭಿವೃದ್ಧಿ ಹೊಂದಲು ನೆಹರು ಯುವ ಕೇಂದ್ರ ಶ್ರಮಿಸುತ್ತಿದೆ ಎಂದು ಹೇಳಿದರು.

ಶಾಂತಿನಿಕೇತನ ಚಿತ್ರಕಲಾ ಮಹಾ ವಿದ್ಯಾಲಯ ಪ್ರಾಂಶುಪಾಲ ವಿಶ್ವಕರ್ಮ ಆಚಾರ‍್ಯ ಮಾತನಾಡಿ, ಯುವಜನರ ಬೆಳವಣಿಗೆಯಲ್ಲಿ ನೆಹರು ಯುವ ಕೇಂದ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಯುವ ಸಂಘ, ಮಂಡಳಿಗಳು ನೆಹರು ಯುವ ಕೇಂದ್ರದಿಂದ ಅಗತ್ಯ ಮಾಹಿತಿ, ಸವಲತ್ತುಗಳನ್ನು ಪಡೆದುಕೊಂಡು ಪ್ರಗತಿ ಸಾಧಿಸಬೇಕು ಎಂದರು.ನೆಹರು ಯುವ ಕೇಂದ್ರದ ಎಂ.ಎನ್‌.ಮಂಜುನಾಥರಾವ್‌ ಪ್ರಾಸ್ತಾವಿಕ ಮಾತನಾಡಿದರು. ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಸಂಘಟಕ ಬಿ.ಎನ್‌.ಕಿರಣ್‌ಕುಮಾರ್‌, ಮಲ್ಲೇಶಪ್ಪ ಹಾಜರಿದ್ದರು. ತಾಲೂಕು ರಾಷ್ಟ್ರೀಯ ಯುವದಳ ಕಾರ‍್ಯಕರ್ತೆ ಎಚ್‌.ಕೆ.ವಿದ್ಯಾಶ್ರೀ ಸ್ವಾಗತಿಸಿ, ರವಿಚಂದ್ರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ