ಆ್ಯಪ್ನಗರ

ಶಂಕರಾಚಾರ್ಯರ ಪುತ್ಥಳಿ ಮೇಲೆ ಎಸ್‌ಡಿಪಿಐ ಬಾವುಟ ಹಾಕಿದ್ದ ಆರೋಪಿ ಬಂಧನ

ಇದೀಗ ಪೊಲೀಸರ ಸಮಯಪ್ರಜ್ಞೆಯಿಂದ ಆರೋಪಿಯನ್ನು ಶೀಘ್ರವೇ ಬಂಧಿಸಲಾಗಿದ್ದು, ಆತ ಕುಡಿದು ಬಾರ್‌ನಿಂದ ಬರುವುದು, ಎಲ್ಲಾದರೂ ಮಲಗಲು ಜಾಗ ಹುಡುಕುವುದು, ಮಸೀದಿ ಹತ್ತಿರ ಹೋಗಿ ಚಾಪೆ ತರುವುದು, ನಂತರ ಕಟ್ಟೆಯ ಮೇಲಿದ್ದ ಬ್ಯಾನರ್ ತರುವುದು, 100 ಮೀಟರ್ ದೂರದಲ್ಲಿರುವ ಪುತ್ಥಳಿ ಬಳಿ ಭಯದಿಂದ ಬರುವುದು, ಹೆದರಿ ಬ್ಯಾನರ್ ನ್ನು ಅಲ್ಲಿ ಬಿಸಾಕುವುದು ಎಲ್ಲವೂ ಸಿಸಿ ಟಿವಿಯಲ್ಲಿ ದಾಖಲಾಗಿದೆ.

Vijaya Karnataka Web 14 Aug 2020, 2:09 pm
ಚಿಕ್ಕಮಗಳೂರು: ಶೃಂಗೇರಿಯ ಶಂಕರಾಚಾರ್ಯರ ಪುತ್ಥಳಿ ಮೇಲೆ ಎಸ್‌ಡಿಪಿಐ ಬಾವುಟ ಹಾಕುವ ಮೂಲಕ ಗುರುವಾರ ಕಿಡಿಗೇಡಿಗಳು ಕೋಮು ಸಾಮರಸ್ಯ ಕದಡುವ ಯತ್ನವನ್ನ ಮಾಡಿದ್ದರು. ಇದೀಗ ಪೊಲೀಸರ ಸಮಯಪ್ರಜ್ಙೆಯಿಂದ ಕೋಮುಗಲಭೆ ಆಗುವ ಸಾಧ್ಯತೆ ತಪ್ಪಿದೆ.
Vijaya Karnataka Web Chikkamagalur


ಹಲವು ಮನೆಗಳು ಜಲಾವೃತ, ರಸ್ತೆಗಳ ಸಂಪರ್ಕ ಕಡಿತ, ಕಾಫಿನಾಡಿನಲ್ಲಿ ಜನಜೀವನ

ಶಂಕರಾಚಾರ್ಯರ ಪುತ್ಥಳಿ ಮೇಲೆ ಬಾವುಟ ಹಾಕಿದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದು, ಆತನ ಹೆಸರು ಮಿಲಿಂದ್ ಎಂದು ತಿಳಿದುಬಂದಿದೆ. ಬಿಲಗದ್ದೆಯ ಈಡಿಗ ಸಮುದಾಯಕ್ಕೆ ಸೇರಿದ ಪೂಜಾರ್ ಎಂಬುವರ ಮಗನಾದ ಮಿಲಿಂದ್ ಈ ಕೃತ್ಯ ಎಸಗಿದ್ದಾನೆ. ಬೆಂಗಳೂರಿನಲ್ಲಿ ಗಲಭೆ ಆದ ಬೆನ್ನಲ್ಲೇ ಶೃಂಗೇರಿಯಲ್ಲಿ ಈ ರೀತಿಯ ಕುಕೃತ್ಯ ಎಸಗಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿತ್ತು. ಸಾಮರಸ್ಯ ಕದಡಲು ಈ ರೀತಿಯ ಕುಕೃತ್ಯಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿತ್ತು.

ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆಗೆ ನೆರೆ ಸಂತ್ರಸ್ತರಿಂದ ಕ್ಲಾಸ್‌..!

ಇದೀಗ ಪೊಲೀಸರ ಸಮಯಪ್ರಜ್ಞೆಯಿಂದ ಆರೋಪಿಯನ್ನು ಶೀಘ್ರವೇ ಬಂಧಿಸಲಾಗಿದ್ದು, ಆತ ಕುಡಿದು ಬಾರ್‌ನಿಂದ ಬರುವುದು, ಎಲ್ಲಾದರೂ ಮಲಗಲು ಜಾಗ ಹುಡುಕುವುದು, ಮಸೀದಿ ಹತ್ತಿರ ಹೋಗಿ ಚಾಪೆ ತರುವುದು, ನಂತರ ಕಟ್ಟೆಯ ಮೇಲಿದ್ದ ಬ್ಯಾನರ್ ತರುವುದು, 100 ಮೀಟರ್ ದೂರದಲ್ಲಿರುವ ಪುತ್ಥಳಿ ಬಳಿ ಭಯದಿಂದ ಬರುವುದು, ಹೆದರಿ ಬ್ಯಾನರ್ ನ್ನು ಅಲ್ಲಿ ಬಿಸಾಕುವುದು ಎಲ್ಲವೂ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಚಿಕ್ಕಮಗಳೂರು: ಶಂಕರಾಚಾರ್ಯರ ಪುತ್ಥಳಿ ಮೇಲೆ ಎಸ್‌ಡಿಪಿಐ ಬಾವುಟ, ಕಿಡಿಗೇಡಿಗಳ ಕುಕೃತ್ಯಕ್ಕೆ ಆಕ್ರೋಶ!
ಅಲ್ಲದೇ ಆತ ಆತ ಯಾವ ಸಂಘಟನೆಯಲ್ಲೂ ಇಲ್ಲ. ಅವತ್ತು ರಾತ್ರಿ ಆತ ಲಾರಿಗಳನ್ನು ನಿಲ್ಲಿಸುವ ಸ್ಥಳದಲ್ಲಿ ಮಲಗಿದ್ದ. 2012, 2017 ರಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನಿಗೆ ಯಾವುದೇ ದುರುದ್ದೇಶ, ಸಂಘಟನೆಗಳ ಸಂಬಂಧ ಇಲ್ಲ ಎಂದು ಎಸ್ಪಿ ಅಕ್ಷಯ್ ಎಂ.ಹಕಾ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ