ಆ್ಯಪ್ನಗರ

ಹೆಣ್ಣು ಮಕ್ಕಳ ಅನುಪಾತ ಹೆಚ್ಚಿಸಲು ಕ್ರಮ

ಭ್ರೂಣಹತ್ಯೆ ತಡೆಯಲು ಆರೋಗ್ಯ ಇಲಾಖೆಗ ಜತೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ಹೇಳಿದರು.

Vijaya Karnataka 31 Aug 2019, 5:00 am
ಚಿಕ್ಕಮಗಳೂರು: ಭ್ರೂಣಹತ್ಯೆ ತಡೆಯಲು ಆರೋಗ್ಯ ಇಲಾಖೆಗ ಜತೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ಹೇಳಿದರು.
Vijaya Karnataka Web measures to increase the ratio of females
ಹೆಣ್ಣು ಮಕ್ಕಳ ಅನುಪಾತ ಹೆಚ್ಚಿಸಲು ಕ್ರಮ


ಡಿಎಚ್‌ಒ ಕಚೇರಿ ಸಭಾಂಗಣದಲ್ಲಿಶುಕ್ರವಾರ ಏರ್ಪಡಿಸಿದ್ದ ಜಿಲ್ಲಾಸಲಹಾ ಸಮಿತಿ ಸಭೆಯಲ್ಲಿಅವರು ಮಾತನಾಡಿದರು. ಭ್ರೂಣಹತ್ಯೆ ತಡೆಯಲು ಇಲಾಖೆ ಹಲವಾರು ಮುಂಜಾಗ್ರತ ಕ್ರಮ ಕೈಗೊಂಡಿದೆ. ಇಲಾಖೆ ಸಿಬ್ಬಂದಿ ಜತೆ ಸಾರ್ವಜನಿಕರು ಸಹಕಾರ ನೀಡಬೇಕು. ಜಿಲ್ಲೆಯಲ್ಲಿ53 ಸ್ಕಾತ್ರ್ಯನಿಂಗ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಿಯಮಿತವಾಗಿ ಎಲ್ಲಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಯಾವುದೇ ಕಾನೂನು ಬಾಹಿರ ಕೇಸುಗಳು ದಾಖಲಾಗಿಲ್ಲ. ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಕಾಯಿದೆ ಉಲ್ಲಂಘನೆಯಾಗದಂತೆ ಹಾಗೂ ಭ್ರೂಣ ಹತ್ಯೆಯಾಗದಂತೆ ಜಾಗೃತಿ ವಹಿಸಲಾಗುತ್ತಿದೆ. ಸ್ಕಾತ್ರ್ಯನಿಂಗ್‌ ಕೇಂದ್ರಗಳ ಲೈಸನ್ಸ್‌ ನವೀಕರಣ ಸಂಬಂಧ ಎರಡು ಅರ್ಜಿಗಳು ಬಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಭಗೆ ಮಾಹಿತಿ ನೀಡಿದರು.

ನಿವೃತ್ತ ಜಿಲ್ಲಾಸರ್ಜನ್‌ ಡಾ.ರಾಮಕೃಷ್ಣ ಮಾತನಾಡಿ, ಹೆಣ್ಣು ಮಕ್ಕಳ ಅನುಪಾತ ಹೆಚ್ಚಿಸಲು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿಕಾರ್ಯನಿರ್ವಹಿಸುತ್ತಿರುವ ಸ್ಕಾತ್ರ್ಯನಿಂಗ್‌ ಸೆಂಟರ್‌ಗಳ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯ ಚಿಕ್ಕಮಗಳೂರು, ಕೊಪ್ಪ, ತರೀಕರೆ ಭಾಗದಲ್ಲಿಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿದ್ದು, ಈ ಬಗ್ಗೆ ಕ್ರಮ ವಹಿÓುವಂತೆ ಹಾಗೂ ಸ್ಕಾತ್ರ್ಯನಿಂಗ್‌ ಕೇಂದ್ರಗಳ ಮೇಲೆ ಸಕ್ರಿಯವಾಗಿ ಗಮನ ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು. ಸಮಿತಿ ಸದಸ್ಯರಾದ ಡಾ. ರವಿಶಂಕರ್‌, ಡಾ. ಶುಭ ವಿಜಯಕುಮಾರ್‌, ವಸಂತ ಸೋಮೇಗೌಡ ಮತ್ತು ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಹಾಜರಿದ್ದರು.ಡಿ.ಎಂ. ಉದ್ದೇಗೌಡ ಸ್ವಾಗತಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ