ಆ್ಯಪ್ನಗರ

ಮೆಸ್ಕಾಂನಿಂದ ತಪ್ಪಿಲ್ಲ ಜನರಿಗೆ ತೊಂದರೆ

ಪಟ್ಟಣದ ತಾ.ಪಂ. ಸಭಾಂಗಣದಲ್ಲಿತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಅಧ್ಯಕ್ಷತೆಯಲ್ಲಿಶನಿವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿಶುದ್ಧಗಂಗಾ ಘಟಕ ಉದ್ಘಾಟನೆ ಮತ್ತು ಮೆಸ್ಕಾಂ ಇಲಾಖೆ ನಿರ್ಲಕ್ಷತ್ರ್ಯ ಕುರಿತು ಗಂಭೀರ ಚರ್ಚೆ ನಡೆಯಿತು.

Vijaya Karnataka 8 Sep 2019, 5:00 am
ಮೂಡಿಗೆರೆ : ಪಟ್ಟಣದ ತಾ.ಪಂ. ಸಭಾಂಗಣದಲ್ಲಿತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಅಧ್ಯಕ್ಷತೆಯಲ್ಲಿಶನಿವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿಶುದ್ಧಗಂಗಾ ಘಟಕ ಉದ್ಘಾಟನೆ ಮತ್ತು ಮೆಸ್ಕಾಂ ಇಲಾಖೆ ನಿರ್ಲಕ್ಷತ್ರ್ಯ ಕುರಿತು ಗಂಭೀರ ಚರ್ಚೆ ನಡೆಯಿತು.
Vijaya Karnataka Web 7MDG-P2_35


ಕಳೆದ 5 ವರ್ಷದಿಂದ ಶುದ್ಧಗಂಗಾ ಘಟಕ ಯಾವುದೂ ಉದ್ಘಾಟನೆಗೊಂಡಿಲ್ಲ. ಕಳೆದ 5 ವರ್ಷದಿಂದ ಪ್ರತಿ ಸಭೆಯಲ್ಲಿಉದ್ಘಾಟನೆ ಬಗ್ಗೆ ಪ್ರಸ್ತಾಪ ಮಾಡಿದರೂ ಶಾಸಕರ ದಿನಾಂಕ ನಿಗದಿಯಾಗಿಲ್ಲವೆಂದು ಕಿವಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಸಭೆಯಲ್ಲಿಚರ್ಚಿಸಿದ ವಿಷಯದ ಬಗ್ಗೆ ಅಧಿಕಾರಿಗಳು ಕೆಲಸ ಮಾಡದಿದ್ದರೆ ಸಭೆ ನಡೆಸಿ ಏನು ಪ್ರಯೋಜನ? ಜನರಿಗೆ ಉತ್ತರ ಹೇಗೆ ಕೊಡುವುದು? ಹೀಗೆ ಮುಂದುವರಿದರೆ ಸಭೆಗೆ ನಾವು ಹಾಜರಾಗುವುದಿಲ್ಲಎಂದು ತಾ.ಪಂ. ಸದಸ್ಯ ರಂಜನ್‌ ಅಜಿತ್‌ ಕುಮಾರ್‌ ಜಿ.ಪಂ. ಎಂಜಿನಿಯರ್‌ಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕಿನಲ್ಲಿ15 ಶುದ್ಧಗಂಗಾ ಘಟಕ ಸ್ಥಾಪಿಸಲು ಲಕ್ಷಾಂತರ ಹಣ ಖರ್ಚು ಮಾಡಲಾಗಿದೆ. ಇದೀಗ ಯಾವುದೇ ಶುದ್ಧಗಂಗಾ ಘಟಕದಿಂದ ಶುದ್ಧ ನೀರು ಕುಡಿಯುತ್ತಿಲ್ಲ. ಲಕ್ಷಾಂತರ ಹಣ ದೇವರ ಹುಂಡಿಗೆ ಹಾಕಿದಂತಾಗಿದೆ. ಶುದ್ಧಗಂಗಾ ಘಟಕ ಉದ್ಘಾಟನೆ ಮಾಡಲು ಹಿಂದೆ ಇದ್ದ ಶಾಸಕ ಬಿ.ಬಿ.ನಿಂಗಯ್ಯ ಇದ್ದ ವೇಳೆಯಿಂದಲೂ ಶಾಸಕರ ದಿನಾಂಕ ನಿಗದಿಯಾಗಿಲ್ಲವೆಂದೇ ಹೇಳಿಕೊಂಡು ಬಂದಿದ್ದಾರೆ. ಇದೀಗ ಎಂ.ಪಿ.ಕುಮಾರಸ್ವಾಮಿ ಶಾಸಕರಾಗಿ ಒಂದು ವರ್ಷ ಕಳೆದಿದೆ. ಅವರ ಮೇಲೆ ಗೂಬೆ ಕೂರಿಸುವುದು ಬೇಕಾಗಿಲ್ಲ. ಇಂದು ದಿನಾಂಕ ನಿಗದಿಯಾಗದಿದ್ದರೆ ಸಭೆಯನ್ನು ಬಹಿಷ್ಕರಿಸಿ ಹೊರ ಹೋಗುತ್ತೇವೆಂದು ರಂಜನ್‌ ಅಜಿತ್‌ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯರಾದ ಸವಿತಾ ರಮೇಶ್‌, ಹಿತ್ತಲಮಕ್ಕಿ ರಾಜೇಂದ್ರ ಧ್ವನಿಗೂಡಿಸಿದರು. ನಂತರ ಸೆಪ್ಟೆಂಬರ್‌ ಅಂತ್ಯದೊಳಗೆ ಶುದ್ಧಗಂಗಾ ಘಟಕ ಉದ್ಘಾಟನೆ ಮಾಡಲು ಸಭೆಯಲ್ಲಿತೀರ್ಮಾನ ಕೈಗೊಳ್ಳಲಾಯಿತು.

ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಮಾತನಾಡಿ, ಮೆಸ್ಕಾಂ ಇಲಾಖೆಯಿಂದ ಕುಡಿಯುವ ನೀರಿಗೆ ತೀವ್ರ ರೀತಿಯಲ್ಲಿತೊಂದರೆ ನೀಡುತ್ತಿದ್ದಾರೆ. ಇವರು ಕಚೇರಿಯಲ್ಲಿಯೇ ಕುಳಿತು ಕೆಲಸ ಮಾಡುವುದೆಂದು ತಿಳಿದುಕೊಂಡಿದ್ದಾರೆ. ಹಂಡುಗುಳಿಯಲ್ಲಿಕುಡಿಯುವ ನೀರಿನ ಕಾಮಗಾರಿ ಲೈನನ್ನು ರಕ್ಷಣ ಇಲಾಖೆ ಸಹಕರ ಪಡೆದು ಕುಡಿಯುವ ನೀರಿನ ಸೌಕರ್ಯ ಒದಗಿಸಬೇಕೆಂದು ಪ್ರತಿ ಸಭೆಯಲ್ಲೂತಿಳಿಸಿದ್ದರೂ ಕೆಲಸ ಮಡಿಲ್ಲ. ಮನೆಯಲ್ಲಿವಿದ್ಯುತ್‌ ಬಿಲ್‌ ಕಟ್ಟಿಲ್ಲವೆಂದು ವಿದ್ಯುತ್‌ ಸಂಪರ್ಕ ಕಟ್‌ ಮಾಡುತ್ತೀರಿ. ಕುಡಿಯುವ ನೀರಿಗೆ ಯರಾದರೂ ತೊಂದರೆ ಮಾಡಿದಾಗಅದನ್ನು ಸರಿಪಡಿಸಿಕೊಂಡು ವಿದ್ಯುತ್‌ ನೀಡಲು ಸಮಸ್ಯೆಯೇನು? ಕೆಲಸ ಮಾಡದಿದ್ದರೆ ನಿಮ್ಮ ಅಗತ್ಯವಿಲ್ಲ. ನಿಮ್ಮಿಂದ ಸಭೆಯ ಗೌರವ ಹಾಳಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಒಕ್ಕೊರಲ ಅಗ್ರಹ
ಊರುಬಗೆ ಗ್ರಾ.ಪಂ.ಯ ಬೈರಾಪುರ, ಹೊಸಕೆರೆ ಸೇರಿದಂತೆ ಅನೇಕ ಭಾಗದಲ್ಲಿಕಳೆದ 1 ವರ್ಷದಿಂದ ವಿದ್ಯುತ್‌ ಸಮಸ್ಯೆ ಇದೆ. ಯಾವಾಗಲೂ ವಿದ್ಯುತ್‌ ಇರೋದಿಲ್ಲ. ವಿದ್ಯಾರ್ಥಿಗಳಿಗೆ ಬಾರಿ ತೊಂದರೆಯಾಗಿದೆ. ಇತ್ತೀಚೆಗೆ ಊರುಬಗೆ ಗ್ರಾ.ಪಂ. ನಡೆದ ಗ್ರಾಮಸಭೆಯಲ್ಲಿಜನರು ಮೆಸ್ಕಾಂ ಅಧಿಕಾರಿಗಳಿಗೆ ಹೊಡೆಯಲು ಮುಂದಾಗಿದ್ದರು. ಬಣಕಲ್‌ನಲ್ಲಿಇದೇ ಸಮಸ್ಯೆಯಿದೆ. ಚೇಗ್‌ ಗ್ರಾಮದಲ್ಲಿವಿದ್ಯುತ್‌ ತಂತಿಗಳು ಕೈಗೆಟುಕುವಂತೆ ನೇತಾಡುತ್ತಿದೆ. ಇದನ್ನು ಸರಿಪಡಿಸಲು ಒಂದು ವರ್ಷದಿಂದ ಸಭೆಯಲ್ಲಿತಿಳಿಸುತ್ತಿದ್ದರೂ ತಲೆ ಕೆಡಿಸಿಕೊಂಡಿಲ್ಲ. ಅನಾಹುತವಾದರೆ ಹೊಣೆ ಯಾರು? ಕೆಲಸ ಮಾಡಲು ಮನಸ್ಸಿದ್ದರೆ ಮಾತ್ರ ಇಲ್ಲಿಕೆಲಸ ಮಾಡಿ. ಇಲ್ಲವದರೆ ತೊಲಗಿ ಎಂದು ಎಲ್ಲಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ