ಆ್ಯಪ್ನಗರ

ಚಿಕ್ಕಮಗಳೂರು: ಎಲೆಕ್ಷನ್‌ ದ್ವೇಷಕ್ಕೆ ದನದ ಕೊಟ್ಟಿಗೆಗೆ ಬೆಂಕಿ..! ಪಾಪಿಗಳ ಕೃತ್ಯಕ್ಕೆ ಎರಡು ರಾಸುಗಳ ಸಾವು

ಗ್ರಾಮ ಪಂಚಾಯತಿ ಚುನಾವಣೆ ಸಾಮರಸ್ಯಕ್ಕಿಂತ ದ್ವೇಷ ಹುಟ್ಟುಹಾಕುವುದೇ ಹೆಚ್ಚು. ಚಿಕ್ಕಮಗಳೂರು ತಾಲೂಕಿನ ಸಗಣಿಪುರದಲ್ಲಿ ಗುರುವಾರ ರಾತ್ರಿ ಗೆದ್ದ, ಸೋತ ಗುಂಪುಗಳ ನಡುವೆ ಗುಂಪು ಘರ್ಷಣೆ ನಡೆದ ಬೆನ್ನಲ್ಲೇ ಅಜ್ಜಂಪುರ ತಾಲೂಕಿನ ಜಾವೂರು ಹೊಸಳ್ಳಿಯಲ್ಲಿ ಚುನಾವಣೆ ದ್ವೇಷಕ್ಕೆ ಕೊಟ್ಟಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.

Vijaya Karnataka Web 2 Jan 2021, 9:50 am
ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿ 3 ದಿನ ಕಳೆಯುತ್ತಾ ಬಂದಿದ್ದರೂ, ಅದರ ಕಿಚ್ಚು ಮಾತ್ರ ಇನ್ನು ಆರಿಲ್ಲ. ಜಿಲ್ಲೆಯ ಅಜ್ಜಂಪುರ ತಾಲೂಕಿನ ಜಾವೂರು ಹೊಸಳ್ಳಿಯಲ್ಲಿ ಚುನಾವಣೆ ದ್ವೇಷಕ್ಕೆ ಕೊಟ್ಟಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಎರಡು ರಾಸುಗಳು ಮೃತಪಟ್ಟಿವೆ.
Vijaya Karnataka Web CHIKKAMAGALURU
ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ದ್ವೇಷಕ್ಕೆ ಕೊಟ್ಟಿಗೆಯನ್ನು ಸುಟ್ಟಿರುವುದು.


ಜಾವೂರು ಹೊಸಳ್ಳಿಯ ಚಂದ್ರಪ್ಪ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆ ಇದಾಗಿದ್ದು, ಬೆಂಕಿಯ ತೀವ್ರತೆಗೆ ಸಂಪೂರ್ಣ ಭಸ್ಮವಾಗಿದೆ. ಘಟನೆಯಲ್ಲಿ ಎರಡು ರಾಸುಗಳು ಮೃಪಟ್ಟಿದ್ದರೆ, ನಾಲ್ಕೈದು ಜಾನುವಾರುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ನರಳಾಡುತ್ತಿವೆ.

ಕೊಟ್ಟಿಗೆಯಲ್ಲಿದ್ದ ಕೊಬ್ಬರಿ, ತೆಂಗಿನಕಾಯಿಗಳೂ ಭಸ್ಮವಾಗಿವೆ. ರಾತ್ರಿ 1 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. 5 ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ. ಜನರ ನಡುವಿನ ದ್ವೇಷಕ್ಕೆ ಜಾನುವಾರುಗಳನ್ನು ಸಜೀವ ದಹನ ಮಾಡಿದ ಬಗ್ಗೆ ಗ್ರಾಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಾಜಿ ಐಪಿಎಸ್ ಆದ್ರೂ ಕುಂದಿಲ್ಲ ಸಿಂಗಂ ಹವಾ..! ಅಣ್ಣಾಮಲೈ ಜೊತೆ ಸೆಲ್ಫಿಗೆ ಮುಗಿಬಿದ್ದ ಚಿಕ್ಕಮಗಳೂರು ಜನ..!

ಇದಕ್ಕೂ ಮುನ್ನ ಚಿಕ್ಕಮಗಳೂರು ತಾಲೂಕಿನ ಸಗಣಿಪುರದಲ್ಲಿ ಗುರುವಾರ ರಾತ್ರಿ ಗೆದ್ದ, ಸೋತ ಗುಂಪುಗಳ ನಡುವೆ ಗುಂಪು ಘರ್ಷಣೆ ನಡೆದಿತ್ತು. ಕೇಕ್ ಕತ್ತರಿಸುವ ವಿಚಾರಕ್ಕೆ ಮಾರಾಮಾರಿ ನಡೆದು, ಹತ್ತಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದರು. ಈ ಎರಡು ಘಟನೆಗಳನ್ನು ಗಮನಿಸಿದರೆ ಗ್ರಾಮ ಪಂಚಾಯಿತಿ ಚುನಾವಣೆ ಸಾಮರಸ್ಯಕ್ಕಿಂತ ದ್ವೇಷ ಹುಟ್ಟುಹಾಕುವುದೇ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.

ಸಿದ್ಧಾರ್ಥ ಅಣ್ಣ ಹೇಳಿದ್ದಕ್ಕೆ ರಿಸೈನ್‌ ಮಾಡಿದೆ: ರಾಜೀನಾಮೆಯ ಸತ್ಯ ಬಿಚ್ಚಿಟ್ಟ ಅಣ್ಣಾಮಲೈ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ