ಆ್ಯಪ್ನಗರ

ಶಾಸಕ ರವಿ ಹುಟ್ಟುಹಬ್ಬ ಆಚರಣೆ

ಶಾಸಕ ಸಿ.ಟಿ.ರವಿ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ, ಜಿಲ್ಲಾ ಸ್ಲಂ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ಗ್ರಾಮಾಂತರ ಮೋರ್ಚಾಗಳಿಂದ ಬುಧವಾರ ಹಲವು ಸಮಾಜಮುಖಿ ಕಾರ‍್ಯಕ್ರಮ ನಡೆಸಲಾಯಿತು.

Vijaya Karnataka 19 Jul 2018, 5:00 am
ಚಿಕ್ಕಮಗಳೂರು : ಶಾಸಕ ಸಿ.ಟಿ.ರವಿ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ, ಜಿಲ್ಲಾ ಸ್ಲಂ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ಗ್ರಾಮಾಂತರ ಮೋರ್ಚಾಗಳಿಂದ ಬುಧವಾರ ಹಲವು ಸಮಾಜಮುಖಿ ಕಾರ‍್ಯಕ್ರಮ ನಡೆಸಲಾಯಿತು.
Vijaya Karnataka Web mla ravi birthday celebration
ಶಾಸಕ ರವಿ ಹುಟ್ಟುಹಬ್ಬ ಆಚರಣೆ

ಜಿಲ್ಲಾ ಸ್ಲಂ ಮೋರ್ಚಾದಿಂದ ಬೆಳಗ್ಗೆ ಹೆರಿಗೆ ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿ ಹಣ್ಣು ವಿತರಿಸಲಾಯಿತು. ಅಲ್ಪಸಂಖ್ಯಾತ ಮೋರ್ಚಾದಿಂದ ಕಾರ್ಮಿಕರಿಗೆ ಸಹಿ ಹಂಚಿದರೆ, ಗ್ರಾಮಾಂತರ ಮೋರ್ಚಾದಿಂದ ನಗರದ ಅನ್ನಪೂರ್ಣ ವೃದ್ಧಾಶ್ರಮಕ್ಕೆ ರೆಫ್ರಿಜರೇಟರ್‌ ಕೊಡುಗೆ ನೀಡಲಾಯಿತು. ಕೆಂಪನಹಳ್ಳಿಯ ಆಶಾಕಿರಣ ಶಾಲೆಯಲ್ಲಿ ಅನ್ನದಾನ, ಎಂ.ಜಿ.ರಸ್ತೆಯ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು.
ನಗರಸಭೆ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ಕವಿತಾ ಶೇಖರ್‌ ಮಾತನಾಡಿ, ಜನಸಾಮಾನ್ಯರ ಸೇವೆಯಲ್ಲಿ ನಿತ್ಯ ತೊಡಗಿಸಿಕೊಂಡಿರುವ ಶಾಸಕ ಸಿ.ಟಿ.ರವಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ನಾಲ್ಕನೇ ಬಾರಿ ಅವರನ್ನು ಜನ ಆಯ್ಕೆ ಮಾಡಿದ್ದು, ಜನಸಾಮಾನ್ಯರ ಮನದಲ್ಲಿ ನೆಲೆಸಿದ್ದಾರೆ. ಶಾಸಕರ ಹುಟ್ಟು ಹಬ್ಬಕ್ಕೆ ಆಡಂಬರ ತೋರದೆ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.
ಅನ್ನಪೂರ್ಣ ವೃದ್ಧಾಶ್ರಮದಲ್ಲಿ ಅನ್ನದಾನಕ್ಕೆ ಪಲ್ಲವಿ ರವಿ ಚಾಲನೆ ನೀಡಿದರು. ಪುಷ್ಪಾ ಮೋಹನ್‌, ರಾಜ್ಯ ಕಾರ‍್ಯಕಾರಿಣಿ ಸದಸ್ಯ ಎಚ್‌.ಸಿ.ಕಲ್ಮರುಡಪ್ಪ, ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಎಚ್‌.ಡಿ.ತಮ್ಮಯ್ಯ, ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್‌, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಜಿ.ಶಂಕರ್‌, ಮುಖಂಡರಾದ ಬಿ.ರಾಜಪ್ಪ, ಅಪ್ಸರ್‌ ಅಹಮದ್‌, ಅನಿಲ್‌ಕುಮಾರ್‌, ರಂಗನಾಥ್‌, ಮಧುಕುಮಾರ್‌ರಾಜ್‌ ಅರಸ್‌, ಜಿ.ಪಂ. ಸದಸ್ಯ ರವೀಂದ್ರ ಬೆಳವಾಡಿ, ತಾ.ಪಂ. ಅಧ್ಯಕ್ಷ ಜಯಣ್ಣ, ಸೀತಾರಾಂ ಭರಣ್ಯ, ರವೀಂದ್ರ ಪ್ರಭು, ದೇವರಾಜ ಶೆಟ್ಟಿ, ಟಿ.ರಾಜಶೇಖರ್‌, ರವಿ, ದಿನೇಶ್‌ ಗುಪ್ತ, ಜಗದೀಶ್‌, ಮುತ್ತಯ್ಯ, ವನಿತಾ, ಹಿತಾಕ್ಷಿ, ಆಯೆಷಾ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ