ಆ್ಯಪ್ನಗರ

ಮೋದಿ ನಾಯಕತ್ವಕ್ಕೆ ಗೆಲುವು

ಜಾತಿ, ಮತ, ಧರ್ಮ ಮರೆತು ದೇಶದ ಒಳತಿಗಾಗಿ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಕಾರ‍್ಯಕಾರಿಣಿ ಸಮಿತಿ ಸದಸ್ಯ ಬಿ.ಎಸ್‌.ಅಶೀಶ್‌ಕುಮಾರ್‌ ತಿಳಿಸಿದರು.

Vijaya Karnataka 25 May 2019, 9:18 pm
ನರಸಿಂಹರಾಜಪುರ: ಜಾತಿ, ಮತ, ಧರ್ಮ ಮರೆತು ದೇಶದ ಒಳತಿಗಾಗಿ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಕಾರ‍್ಯಕಾರಿಣಿ ಸಮಿತಿ ಸದಸ್ಯ ಬಿ.ಎಸ್‌.ಅಶೀಶ್‌ಕುಮಾರ್‌ ತಿಳಿಸಿದರು.
Vijaya Karnataka Web CKM-23NRP1


ಅವರು ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರಮೋದಿಯವರ ನಾಯಕತ್ವವನ್ನು ಜನ ಒಪ್ಪಿದ್ದಾರೆ. ಅವರ ಜನಪ್ರಿಯ ಯೋಜನೆಗಳಾದ ಆಯುಷ್ಯಮಾನ್‌ ಭಾರತ್‌,ಉಜ್ವಲ ಯೋಜನೆ, ಜನರಿಕ್‌ ಔಷಧ ಮಳಿಗೆಗಳು ಸಾಮಾನ್ಯ ಜನರಿಗೆ ಅನುಕೂಲವಾಗಿದೆ. ಇದಕ್ಕೆ ಬಿಜೆಪಿಯ ಗೆಲುವೇ ಕಾರಣ ಎಂದರು.

ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಅವರು ಕ್ಷೇತ್ರದಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳು ಕ್ಷೇತ್ರದ ಅಭ್ಯರ್ಥಿ ಗೆಲ್ಲಲು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಪ್ರಬಲವಾಗಿ ಬೆಳೆಯಲಿದೆ. ಈ ಫಲಿತಾಂಶ ಸ್ಥಳೀಯ ಚುನಾವಣೆ ಮೇಲೂ ಪ್ರಭಾವ ಬೀರಲಿದೆ ಎಂದರು.

ಮುಖಂಡರಾದ ಜಿ.ಜೆ.ನಾಗರಾಜ್‌, ಮೂಡಬಾಗಿಲು ನಾಗೇಶ್‌, ಸನ್ನಿ, ಲಾಡ್‌ ಮಂಜು, ಜಯರಾಂ, ಮುರುಳಿ,ಜಯಣ್ಣ, ಎಸ್‌.ಎಸ್‌.ಸಂತೋಷಕುಮಾರ್‌,ರವಿಕುಮಾರ್‌,ವಿನಯ್‌, ಶ್ರೀನಾಥ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ