ಆ್ಯಪ್ನಗರ

ಮೋರಿ ಕುಸಿದು ಸಂಚಾರ ಅಸ್ತವ್ಯಸ್ತ

ಕುದುರೆಗುಂಡಿ- ಮಲ್ಲಂದೂರು ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಮೋರಿ ಕುಸಿದು ವಾಹನ ಸವಾರರು 2 ಗಂಟೆಗೂ ಹೆಚ್ಚು ಕಾಲ ಮುಂದಕ್ಕೆ ಹೋಗಲಾರದೆ ಪರದಾಡಿದರು.

Vijaya Karnataka 14 Jul 2018, 5:00 am
ನರಸಿಂಹರಾಜಪುರ :ಕುದುರೆಗುಂಡಿ- ಮಲ್ಲಂದೂರು ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಮೋರಿ ಕುಸಿದು ವಾಹನ ಸವಾರರು 2 ಗಂಟೆಗೂ ಹೆಚ್ಚು ಕಾಲ ಮುಂದಕ್ಕೆ ಹೋಗಲಾರದೆ ಪರದಾಡಿದರು.
Vijaya Karnataka Web mori collapses and traffic jams
ಮೋರಿ ಕುಸಿದು ಸಂಚಾರ ಅಸ್ತವ್ಯಸ್ತ


ಮೋರಿ ಕುಸಿತದಿಂದಾಗಿ ಕುದುರೆಗುಂಡಿಯಿಂದ ಮಲ್ಲಂದೂರು-ಶಿವಮೊಗ್ಗ ಕಡೆಗೆ ಸಂಚರಿಸುವ ವಾಹನಗಳು ಹಾಗೂ ಮಲ್ಲಂದೂರು ಭಾಗದ ವಾಹನಗಳು ಕೊಪ್ಪದ ಕಡೆಗೆ ಹೋಗಲಾರದೆ ಎರಡೂ ಕಡೆ ಸಾಲುಗಟ್ಟಿ ನಿಂತವು. ಮಲ್ಲಂದೂರು ಭಾಗದಲ್ಲಿ ಹೋಗುವ ಬಸ್ಸುಗಳು ಕುದುರೆಗುಂಡಿ, ಸುತ್ತ, ಹಳ್ಳಿಬೈಲು ಮಾರ್ಗವಾಗಿ ಸಂಚರಿಸಿದವು. ಕಾರು, ಆಟೊ, ಬೈಕ್‌ ಹಾಗೂ ಇತರ ವಾಹನಗಳು ಎರಡು ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿದ್ದವು.

ಸುದ್ದಿ ತಿಳಿದ ಲೋಕೋಪಯೋಗಿ ಇಲಾಖೆಯವರು ಲಾರಿಯಲ್ಲಿ ಕಲ್ಲು, ಜಲ್ಲಿ ತಂದು ಸುರಿದು ಮೋರಿಯ ಹೊಂಡವನ್ನು ತಾತ್ಕಾಲಿಕವಾಗಿ ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಮೋರಿ 1 ತಿಂಗಳ ಹಿಂದೆ ಸ್ವಲ್ಪ ಭಾಗ ಕುಸಿದು ಹೊಂಡ ನಿರ್ಮಾಣವಾಗಿತ್ತು. ಈ ಬಗ್ಗೆ ಪತ್ರಿಕೆಯು ವರದಿ ಮಾಡಿತ್ತು. ಕೂಡಲೇ ಹೊಂಡವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಬಳಿಕ ಎರಡೇ ದಿನದಲ್ಲಿ ಮತ್ತೊಂದು ಭಾಗದಲ್ಲಿ ಹೊಂಡ ಸೃಷ್ಟಿಯಾಗಿದ್ದು, ಶಾಸಕರ ಸೂಚನೆ ಅನುಸರಿಸಿ ಮತ್ತೆ ಜಲ್ಲಿ ಹಾಕಿ ಮುಚ್ಚಲಾಗಿತ್ತು. ಮೋರಿ ಕೆಲಸವನ್ನು ತಾತ್ಕಾಲಿಕವಾಗಿ ಮಾಡದೆ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿ ವಾಹನ ಸಂಚಾರ ಸುಗಮಗೊಳಿಸಬೇಕೆಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ