ಆ್ಯಪ್ನಗರ

ತಾಯಿ, ಮಗಳು ನೇಣಿಗೆ ಶರಣು

ಪಟ್ಟಣದ ಬನಶಂಕರಿ ರಸ್ತೆ ನಿವಾಸಿ ತಾಯಿ, ಮಗಳು ಬುಧವಾರ ರಾತ್ರಿ ತಮ್ಮ ವಾಸದ ಮನೆಯ ಅಟ್ಟದ ಮೇಲಿನ ಚಾವಣಿಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Vijaya Karnataka 15 Mar 2019, 5:00 am
ಅಜ್ಜಂಪುರ (ಚಿಕ್ಕಮಗಳೂರು) : ಪಟ್ಟಣದ ಬನಶಂಕರಿ ರಸ್ತೆ ನಿವಾಸಿ ತಾಯಿ, ಮಗಳು ಬುಧವಾರ ರಾತ್ರಿ ತಮ್ಮ ವಾಸದ ಮನೆಯ ಅಟ್ಟದ ಮೇಲಿನ ಚಾವಣಿಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Vijaya Karnataka Web mother and daughter surrender to the hanging
ತಾಯಿ, ಮಗಳು ನೇಣಿಗೆ ಶರಣು


ಪಟ್ಟಣದ ಉಂಡೆ ರವಿ ಅವರ ಪತ್ನಿ ಸುಧಾ(50), ಮಗಳು, ಖಾಸಗಿ ಶಾಲೆ ಶಿಕ್ಷ ಕಿ ಸ್ವಪ್ನಾ(30) ಮೃತಪಟ್ಟವರು. ಉಂಡೆ ರವಿ ನಿಧನ ಹೊಂದಿದ್ದಾರೆ. ಸ್ವಪ್ನಾಳ ಅವರನ್ನು ಆಸಂದಿಯ, ಸುಧಾ ಅವರ ತಮ್ಮ ತೆಂಗಿನ ಕಾಯಿ ವ್ಯಾಪಾರಿ ಸುರೇಶ್‌ ಅವರೊಂದಿಗೆ ಮದುವೆ ಮಾಡಲಾಗಿತ್ತು.

ಸ್ವಪ್ನಾ ಎಂ.ಎ., ಬಿಎಡ್‌, ವಿದ್ಯಾಭ್ಯಾಸ ಪೂರೈಸಿ ಗಿರಿಯಾಪುರದ ಜ್ಞಾನದೀಪ ಶಾಲೆಯಲ್ಲಿ ಪ್ರಾರಂಭದಿಂದಲೂ ಶಿಕ್ಷ ಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ವರ್ಷ ಮುಖ್ಯ ಶಿಕ್ಷ ಕಿಯಾಗಿದ್ದರು. ಅತ್ಯಂತ ಸರಳ ಸ್ವಭಾವದ, ಸೌಮ್ಯ ಮೆದು ಮಾತಿನ ಶಿಕ್ಷ ಕಿಯೆಂದೇ ಶಾಲೆಯಲ್ಲಿ ಹೆಸರು ಗಳಿಸಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಸ್ವಪ್ನಾ ಅವರಿಗೆ ಮಕ್ಕಳಾಗಿಲ್ಲ ಎಂಬ ಕೊರಗು ಹಾಗೂ ಮನೆಯಲ್ಲಿ ತಾಯಿ, ಮಗಳು ಮಾತ್ರ ಇರುತ್ತಿದ್ದರು. ಖಿನ್ನತೆಯಿಂದ, ಏಕಾಂಗಿತನದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಜ್ಞಾನದೀಪ ವಿದ್ಯಾಸಂಸ್ಥೆ ಕಾರ್ಯದರ್ಶಿ ರವಿಕುಮಾರ್‌, ಅಧ್ಯಕ್ಷ ಲಿಂಗರಾಜ್‌, ಆಡಳಿತ ಮಂಡಳಿಯವರು ಶಾಲೆಯಲ್ಲಿ ಸಂತಾಪ ಸೂಚಿಸಿ ಮಕ್ಕಳಿಗೆ ರಜೆ ಘೋಷಿಸಿದರು.

ಡಿವೈಎಸ್‌ಪಿ ಜೆ.ಜೆ. ತಿರುಮಲೇಶ್‌, ಸಿಪಿಐ ರಾಮಚಂದ್ರ ನಾಯಕ್‌, ಪಿಎಸ್‌ಐ ಅನಂತ ಪದ್ಮನಾಭ್‌ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದರು. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಜ್ಜಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರು, ದೇವಾಂಗ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ