ಆ್ಯಪ್ನಗರ

ಅಂತರಂಗದ ಅರಿವಿಗೆ ಶರಣರ ಚಿಂತನೆಗಳು ಪ್ರೇರಕ

ಇಂದಿನ ಕಾಲಗಟ್ಟದಲ್ಲಿಅಂತರಂಗದ ಅರಿವಿಗೆ ಹಾಗೂ ಸಮಾಜಮುಖಿ ಚಿಂತನೆಗೆ ಶರಣರ ಚಿಂತನೆಗಳು ಪ್ರೇರಕ ಎಂದು ಸಾಹಿತಿ ಶಿಕ್ಷಕ ಸಿಂಗಟಗೆರೆ ಸಿದ್ದಪ್ಪ ತಿಳಿಸಿದರು.

Vijaya Karnataka 11 Sep 2019, 5:00 am
ಬೀರೂರು: ಇಂದಿನ ಕಾಲಗಟ್ಟದಲ್ಲಿಅಂತರಂಗದ ಅರಿವಿಗೆ ಹಾಗೂ ಸಮಾಜಮುಖಿ ಚಿಂತನೆಗೆ ಶರಣರ ಚಿಂತನೆಗಳು ಪ್ರೇರಕ ಎಂದು ಸಾಹಿತಿ ಶಿಕ್ಷಕ ಸಿಂಗಟಗೆರೆ ಸಿದ್ದಪ್ಪ ತಿಳಿಸಿದರು.
Vijaya Karnataka Web 9BRR3_35


ಪಟ್ಟಣದ ರೋಟರಿ ಭವನದಲ್ಲಿಶನಿವಾರ ರೋಟರಿ ಹಾಗೂ ಇನ್ನರ್‌ವ್ಹೀಲ್‌ ಕಸಾಪ ಸಹಯೋಗದಲ್ಲಿಆಯೋಜಿಸಿದ್ದ ಶರಣ ಸಂದೇಶ ಚಿಂತನಾ ಕಾರ್ಯಕ್ರಮದಲ್ಲಿನಿಸ್ವಾರ್ಥಸೇವಾ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು.

ಅನೇಕ ಮಹನೀಯರು ತಮ್ಮ ಬದುಕನ್ನು ಸಮಾಜ ಸೇವೆಗೆ ಮೀಸಲಿಟ್ಟ ಫಲವಾಗಿ ಇಂದು ಸುಸಂಸ್ಕೃತ ಸಮಾಜ ಕಾಣುತ್ತಿದ್ದೇವೆ. ಮಲ್ನಾಡಿಹಳ್ಳಿ ರಾಘವೇಂದ್ರಸ್ವಾಮಿ ಹಾಗೂ ತುಮಕೂರು ಸಿದ್ದಗಂಗಾ ಶಿವಕುಮಾರಸ್ವಾಮಿಗಳ ದೂರದೃಷ್ಟಿಯ ನಿಸ್ವಾರ್ಥಸೇವೆ ಇಂದು ಲಕ್ಷಾಂತರ ಗುಣಾತ್ಮಕ ವಿದ್ಯಾವಂತರನ್ನು ಕೊಡುಗೆಯಾಗಿ ನೀಡಿದೆ ಎಂದರು.

ಇನ್ನರ್‌ವ್ಹೀಲ್‌ ಅಧ್ಯಕ್ಷೆ ಗೌರಿಪ್ರಸನ್ನ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕಾರ್ಯದರ್ಶಿ ಶ್ರೀನಿವಾಸಆಚಾರ್‌, ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ಪ್ರಾಸ್ಥಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಆರ್‌.ಪ್ರಕಾಶ್‌ ಮಾತನಾಡಿದರು.

ಸುರಭಿಯೋಗ ಕೇಂದ್ರದ ಸಿತಾರಾ ರಾಷ್ಟ್ರಭಕ್ತಿ ಗೀತೆಯ ಗಾಯನಕ್ಕೆ 50ಕ್ಕೂ ಹೆಚ್ಚಿನ ಯೋಗವಿದ್ಯೆ ಪ್ರದರ್ಶಿಸಿ ಗಮನಸೆಳೆದರು.

ಹೋಬಳಿ ಕಸಾಪ ಅಧ್ಯಕ್ಷ ಶಿವಲಿಂಗಪ್ಪ, ರೋಟರಿಯ ಟಿ.ಹನುಮಂತಪ್ಪ, ಹೊನ್ನಪ್ಪಶಾಸ್ತ್ರೀ, ರವಿಶಂಕರ್‌, ಬಾಬಣ್ಣ, ನಾರಾಯಣ್‌, ಡಾ.ಅನಂತಪದ್ಮನಾಭ್‌, ಗೋಪಾಲಕೃಷ್ಣಗುಪ್ತಾ, ಸಿ.ಸಿ.ಕುಮಾರ್‌, ಇನ್ನರ್‌ವ್ಹೀಲ್‌ ಹಾಗೂ ರೋಟರಿ ಸದಸ್ಯರು ಇದ್ದರು.

ಸೀತಾಲಕ್ಷೀ ಪ್ರಾರ್ಥಿಸಿ, ಇನ್ನರ್‌ವ್ಹೀಲ್‌ ಕಾರ್ಯದರ್ಶಿ ಉಷಾಸ್ವಾಮಿ ಸ್ವಾಗತಿಸಿ, ಸಂಪತ್‌ಕುಮಾರ್‌ ನಿರೂಪಿಸಿ, ವಂದಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ