ಆ್ಯಪ್ನಗರ

ಸಂಸದೆಗೆ ಬುದ್ಧಿ ಭ್ರಮಣೆ: ಕಾಂಗ್ರೆಸ್‌ ಟೀಕೆ

ತಮಗೆ ಸಂಬಂಧಿಸಿದ ವಿಷಯಗಳಿಗೆ ಅನಗತ್ಯ ಮೂಗು ತೂರಿಸುವ ಸಂಸದೆ ಶೋಭಾ ಕರಂದ್ಲಾಜೆ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಡಿ.ಎಲ್‌.ವಿಜಯಕುಮಾರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Vijaya Karnataka 1 Mar 2019, 5:00 am
ಚಿಕ್ಕಮಗಳೂರು: ತಮಗೆ ಸಂಬಂಧಿಸಿದ ವಿಷಯಗಳಿಗೆ ಅನಗತ್ಯ ಮೂಗು ತೂರಿಸುವ ಸಂಸದೆ ಶೋಭಾ ಕರಂದ್ಲಾಜೆ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಡಿ.ಎಲ್‌.ವಿಜಯಕುಮಾರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Vijaya Karnataka Web mp psychopathy congress criticized
ಸಂಸದೆಗೆ ಬುದ್ಧಿ ಭ್ರಮಣೆ: ಕಾಂಗ್ರೆಸ್‌ ಟೀಕೆ


ಬೆಂಗಳೂರಿನಲ್ಲಿ ನಡೆದ ಏರ್‌ಶೋನಲ್ಲಿ ಪಾರ್ಕಿಂಗ್‌ ಪ್ರದೇಶದಲ್ಲಿ ಕಾರುಗಳು ಸುಟ್ಟ ಘಟನೆಗೆ ಪ್ರತಿಕ್ರಿಯಿಸುವಾಗ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ. ದಿನೇಶ್‌ ಗುಂಡೂರಾವ್‌ ಕಾರು ಪಾರ್ಕಿಂಗ್‌ ಪ್ರದೇಶದ ಕಾವಲುಗಾರರಲ್ಲ ಎಂಬ ಕನಿಷ್ಠ ಜ್ಞಾನವೂ ಸಂಸದರಿಗೆ ಇಲ್ಲ ಎಂದಿದ್ದಾರೆ.

ಏರ್‌ ಶೋ ಆಯೋಜನೆ, ಪಾರ್ಕಿಂಗ್‌ ವ್ಯವಸ್ಥೆ ಎಲ್ಲವೂ ಏರ್‌ ಅಥಾರಿಟಿಗೆ ಸೇರಿದೆ. ಇದು ಕೇಂದ್ರ ವಿಮಾನಯಾನ ಸಚಿವಾಲಯದ ಜವಾಬ್ದಾರಿ. ಪಾರ್ಕಿಂಗ್‌ ಪ್ರದೇಶದಲ್ಲಿ ಬೆಳೆದಿದ್ದ ಹುಲ್ಲು ತೆಗೆಸಿ ದಿನಕ್ಕೆ ಎರಡು ಬಾರಿ ನೀರು ಹಾಕಿಸಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ. ರಾಜ್ಯ ಸರಕಾರ ವಾಹನ ಮಾಲಿಕರಿಗೆ ಪರಿಹಾರ ನೀಡುವ ಬಗ್ಗೆ ಕಾಳಜಿ ವಹಿಸಿದೆ ಎಂದು ಹೇಳಿದ್ದಾರೆ.

ಒಂದು ಅವಧಿಗೆ ಕ್ಷೇತ್ರದ ಸಂಸದರಾಗಿ ಸ್ವಪಕ್ಷದವರಿಂದಲೇ ಗೋಬ್ಯಾಕ್‌ ಎನ್ನಿಸಿಕೊಳ್ಳುತ್ತಿರುವ ಶೋಭಾ, ತಮ್ಮ ತಟ್ಟೆಯಲ್ಲಿ ಏನೆಲ್ಲ ಬಿದ್ದಿದೆ ಎಂದು ಸರಿಯಾಗಿ ನೋಡಿಕೊಂಡು ಮತ್ತೊಬ್ಬರ ತಟ್ಟೆ ಬಗ್ಗೆ ಮಾತನಾಡುವುದನ್ನು ಬಿಡಲಿ. ಕಳೆದ 5 ವರ್ಷದಿಂದ ಕೇಂದ್ರದಿಂದ ಯಾವುದೇ ವಿಶೇಷ ಯೋಜನೆಗಳನ್ನೂ ಜಿಲ್ಲೆ ಅಥವಾ ಕ್ಷೇತ್ರಕ್ಕೆ ತರದೆ ರಾಜ್ಯ ನಾಯಕಿಯಾಗಲು ಹೊರಟಿರುವುದು ಹಾಸ್ಯಾಸ್ಪದ. ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ತಂದಿದ್ದು ಯಾರು ಎಂಬ ಬಗ್ಗೆಯೂ ತಿಳಿದುಕೊಳ್ಳಲಿ ಎಂದಿದ್ದಾರೆ.

ಯುಪಿಎ ಸರಕಾರದಲ್ಲಿ 2011ರಲ್ಲಿ ದೇಶಾದ್ಯಂತ 54 ಕೇಂದ್ರೀಯ ಹಾಗೂ 3500 ಮಾದರಿ ಶಾಲೆಗಳನ್ನು ನೀಡಿದ್ದು, ಅಂದಿನ ಮಾನವ ಸಂಪನ್ಮೂಲ ಸಚಿವ ಪಲ್ಲಂರಾಜು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮೀಸಲಿಟ್ಟಿದ್ದರು. ಸಂಸದರು ಕೋರಿಕೆಯ ಮೇಲೆ ಯಾವ ರಸ್ತೆಗೆ ಹಣ ತಂದಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ