ಆ್ಯಪ್ನಗರ

ಗುಳ್ಳದಮನೆ ಶ್ರೀ ಗಿರಿಸಿದ್ದೇಶ್ವರಸ್ವಾಮಿ ರಥೋತ್ಸವ

ಲಿಂಗದಹಳ್ಳಿ ಹೋಬಳಿಯ ಗುಳ್ಳದಮನೆ ಗ್ರಾಮದ ಶ್ರೀ ಗಿರಿಸಿದ್ದೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಮಂಗಳವಾರ ನೆರವೇರಿತು.

Vijaya Karnataka 29 May 2019, 6:05 pm
ತರೀಕೆರೆ ಗ್ರಾಮಾಂತರ : ಲಿಂಗದಹಳ್ಳಿ ಹೋಬಳಿಯ ಗುಳ್ಳದಮನೆ ಗ್ರಾಮದ ಶ್ರೀ ಗಿರಿಸಿದ್ದೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಮಂಗಳವಾರ ನೆರವೇರಿತು.
Vijaya Karnataka Web CKM-28sid1


ಶ್ರೀ ಗಿರಿಸಿದ್ದೇಶ್ವರಸ್ವಾಮಿ ರಥೋತ್ಸವದಲ್ಲಿ ಶ್ರೀರಂಗನಾಥಸ್ವಾಮಿ ಮತ್ತು ಶ್ರೀ ಗುರುಪುರ ಸಿದ್ದಪ್ಪ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಬ್ರಹ್ಮ ರಥದಲ್ಲಿ ಪ್ರತಿಷ್ಟಾಪಿಸಿ ತೇರನ್ನು ಎಳೆಯಲಾಯಿತು.

ರಥೋತ್ಸವದಲ್ಲಿ ಗುಳ್ಳದಮನೆ, ಮಲ್ಲೇನಹಳ್ಳಿ, ಕೆಂಚಾಪುರ ಗ್ರಾಮಸ್ಥರ ಸಹಯೋಗದಲ್ಲಿ ಸುಮಾರು ವರ್ಷಗಳಿಂದ ನಡೆಯುತ್ತಿದೆ. ಜಾತ್ರಾ ಮಹೋತ್ಸವದಲ್ಲಿ ಈ ಮೂರು ಗ್ರಾಮಗಳ ಜತೆಗೆ ರಾಜ್ಯಾದ್ಯಂತ ಗ್ರಾಮ ದೇವರುಗಳ ಒಕ್ಕಲು ಕುಟುಂಬಗಳಿದ್ದು, ರಥೋತ್ಸವ ಸಂದರ್ಭ ಎಲ್ಲರೂ ಸೇರಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

ರಥೋತ್ಸವದ ಚಾಲನೆಗೂ ಮುನ್ನಾ ಶ್ರೀ ಗಿರಿಸಿದ್ದೇಶ್ವರಸ್ವಾಮಿಯ ಬೆಳ್ಳಿ ಬಾವುಟದ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಯಿತು. ರಥಕ್ಕೆ ಕಟ್ಟಿದ ಬಾವುಟಗಳ ನಡೆಯಿತು. ಕಳೆದ 4 ವರ್ಷಗಳಿಂದ ಗುಳ್ಳದ ಮನೆ ಪುಟ್ಟಪ್ಪ ಅವರ ಪುತ್ರ ಶ್ರೀನಿವಾಸ್‌ ಕುಟುಂಬಸ್ಥರು ಬೆಳ್ಳಿ ಬಾವುಟವನ್ನು 1 ಲಕ್ಷ ದ 5 ಸಾವಿರ ರೂ.ಗಳಿಗೆ ಹರಾಜಿನ ಮೂಲಕ ಪಡೆದರು.

ಟಿಎಪಿಸಿಎಂಎಸ್‌ ಅಧ್ಯಕ್ಷ ವಸಂತಕುಮಾರ್‌ ಮಾತನಾಡಿ, ಗುಳ್ಳದಮನೆ ಗ್ರಾಮದಲ್ಲಿ ಅನೇಕ ವೈಶಿಷ್ಟ್ಯಪೂರ್ಣ ದೇವಸ್ಥಾನಗಳಿವೆ. ಮುಂದಿನ ದಿನಗಳಲ್ಲಿ ದಾನಿಗಳು ಮತ್ತು ಜನಪ್ರತಿನಿಧಿಗಳ ಸಹಯೋಗದಲ್ಲಿ ಅಭಿವೃದ್ಧಿಗೊಳಿಸಿ ಗ್ರಾಮವನ್ನು ಯಾತ್ರಾ ಸ್ಥಳವನ್ನಾಗಿ ಮಾಡಲಾಗುವುದು ಎಂದರು. ರಂಗ ಶ್ರೀ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ್‌, ಜಿ.ಎನ್‌.ರಾಮಚಂದ್ರಪ್ಪ, ವಜ್ರಪ್ಪ, ಎಂ.ಬಸವರಾಜ್‌, ಈರಣ್ಣ, ಶ್ರೀನಿವಾಸ್‌, ಮಂಜುನಾಥ್‌, ದೇವೇಂದ್ರಪ್ಪ, ಚಂದ್ರಶೇಖರ್‌, ಕೆಂಚೇನಹಳ್ಳಿ ಸಿದ್ದಪ್ಪ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ