ಆ್ಯಪ್ನಗರ

ಕುರಿ ಸಾಕಾಣಿಕೆಯಿಂದ ಹೆಚ್ಚು ಲಾಭ

ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದ್ದು ಇಳುವರಿ ಇಲ್ಲದೆ ರೈತ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾನೆ ಎಂದು ಪಶುವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್‌ ಹೇಳಿದರು.

Vijaya Karnataka 31 Aug 2019, 6:43 pm
ಚಿಕ್ಕಮಗಳೂರು: ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದ್ದು ಇಳುವರಿ ಇಲ್ಲದೆ ರೈತ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾನೆ ಎಂದು ಪಶುವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್‌ ಹೇಳಿದರು.
Vijaya Karnataka Web much profit from sheep farming
ಕುರಿ ಸಾಕಾಣಿಕೆಯಿಂದ ಹೆಚ್ಚು ಲಾಭ


ಕರ್ನಾಟಕ ಕುರಿ ಅಭಿವೃದ್ಧಿ ನಿಗಮ, ಜಿಲ್ಲಾಕುರಿ ಮತ್ತು ಉಣ್ಣೆ ಸಹಕಾರ ಸಂಘದ ಸಂಯುಕ್ತಶ್ರಾಯಲ್ಲಿಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ಜಿಲ್ಲಾಸ್ಕೌಟ್ಸ್‌ ಭವನದಲ್ಲಿಗುರುವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.ಸಾಂಪ್ರದಾಯಿಕ ಕೃಷಿ ಪದ್ದತಿ ಮರೆತು ಬೆಳೆ ಬೆಳೆಯುತ್ತಿದ್ದೇವೆ. ಅವೈಜ್ಞಾನಿಕ ಪದ್ಧತಿಯಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬರಡಾಗುತ್ತಿದೆ. ಇದರಿಂದ ರೈತ ಬೆಳೆದ ಬೆಳೆ ಕೈಗೆ ಸಿಗದೆ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗಿದೆ. ಕೃಷಿ ಜತೆಗೆ ಪೂರಕವಾಗಿ ಪಶುಪಾಲನೆ ಅಗತ್ಯ ಎಂದು ಹೇಳಿದರು.

ಅಲೆಮಾರಿ, ಅರೆಕೊಟ್ಟಿಗೆ ಹಾಗೂ ಕೊಟ್ಟಿಗೆ ಪದ್ಧತಿ ಎಂದು ಕುರಿ ಸಾಕಾಣಿಕೆಯಲ್ಲಿಪ್ರಮುಖವಾಗಿ ಮೂರು ವಿಧಗಳಿವೆ. ಸಾಂಪ್ರದಾಯಿಕವಾಗಿ ನಾವು ಹೆಚ್ಚು ಅಲೆಮಾರಿ ಪದ್ಧತಿಗೆ ಅವಲಂಬಿತರಾಗಿದ್ದು ಇತ್ತೀಚೆಗೆ ವೈಜ್ಞಾನಿಕವಾಗಿ ಕೊಟ್ಟಿಗೆ ಪದ್ಧತಿಯಲ್ಲಿಬೆಳೆಯುವ ಪದ್ಧತಿ ಪ್ರಾರಂಭವಾಗಿದೆ. ಅಲೆಮಾರಿ ಪದ್ಧತಿಯಲ್ಲಿಹೆಚ್ಚು ಲಾಭವಿದ್ದರೂ ಶ್ರಮ ಜಾಸ್ತಿ . ಕುರಿಗಳಿಗೆ ತಗಲುವ ಕಾಯಿಲೆಗೆ ಸೂಕ್ತ ಸಮಯದಲ್ಲಿಚಿಕಿತ್ಸೆ ನೀಡುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್‌.ಮಹೇಶ್‌, ನಿರ್ದೇಶಕರಾದ ಜಿ.ಈಶ್ವರಪ್ಪ, ಪರಮೇಶ್ವರಪ್ಪ, ಕೆ.ಸಿ ಕೆಂಗೇಗೌಡ, ಎ.ಮೂರ್ತಿ, ಭರತೇಶ್‌, ಶೃತಿ, ಗೀತಾಬಾಯಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮನು ಮತ್ತಿತರರು ಹಾಜರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ