ಆ್ಯಪ್ನಗರ

ರೋಟರಿ ಪದಾಧಿಕಾರಿಗಳ ಪದಗ್ರಹಣ

ಮಕ್ಕಳಿಗೆ ಸ್ವಚ್ಛತೆ, ಪರಿಸರ ಪ್ರೇಮ ಅರಿವು ಮೂಡಿಸುವ ಕಾರ್ಯ ಮಾಡಿದರೆ ಉತ್ತಮ ಸಮಾಜ ನಿರ್ಮಿಸಲು ಎಂದು ರೋಟರಿ ಸಂಸ್ಥೆಯ ನಿಕಟಪೂರ್ವ ಗೌರ್ನರ್‌ ಎಚ್‌.ಎಲ್‌.ರವಿ ಹೇಳಿದರು.

Vijaya Karnataka 14 Jul 2019, 5:00 am
ಮೂಡಿಗೆರೆ : ಮಕ್ಕಳಿಗೆ ಸ್ವಚ್ಛತೆ, ಪರಿಸರ ಪ್ರೇಮ ಅರಿವು ಮೂಡಿಸುವ ಕಾರ್ಯ ಮಾಡಿದರೆ ಉತ್ತಮ ಸಮಾಜ ನಿರ್ಮಿಸಲು ಎಂದು ರೋಟರಿ ಸಂಸ್ಥೆಯ ನಿಕಟಪೂರ್ವ ಗೌರ್ನರ್‌ ಎಚ್‌.ಎಲ್‌.ರವಿ ಹೇಳಿದರು.
Vijaya Karnataka Web CKM-9MDG-P1


ಜನ್ನಾಪುರ ವರ್ತಕರ ಸಂಘದ ಸಮುದಾಯ ಭವನದಲ್ಲಿ ಗೋಣಿಬೀಡು ರೋಟರಿ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೇರವೇರಿಸಿ ಮಾತನಾಡಿದರು.

ಜನಪರ ಕಾರ್ಯಕ್ರಮ ಮಾಡುವುದರಿಂದ ಜನರಿಗೆ ಅನುಕೂಲ ಹಾಗೂ ಸಂಸ್ಥೆಗೆ ಉತ್ತಮ ಹೆಸರು ಬರುತ್ತದೆ ಎಂದರು.

ಸಹಾಯಕ ಗೌರ್ನರ್‌ ಎಚ್‌.ಆರ್‌.ಸುರೇಶ್‌ ಮಾತನಾಡಿ, ಸರಕಾರಿ ಶಾಲೆಗಳಿಗೆ ಭೇಟಿ ಮಾಡಿ ಮೂಲ ಸೌಕರ್ಯ ನೀಡಲು ಸಂಸ್ಥೆ ಚಿಂತನೆ ನಡೆಸಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಗೋಣಿಬೀಡು ರೋಟರಿ ಸಂಸ್ಥೆ ಅಧ್ಯಕ್ಷ ಎಚ್‌.ಕೆ.ಪ್ರವೀಣ್‌ ಕುಮಾರ್‌ ಮಾತನಾಡಿದರು. ರೋಟರಿ ಸಂಸ್ಥೆಯಿಂದ ನಡೆಸಿದ ವರ್ಷದ ಕಾರ್ಯಕ್ರಮದ ಭಾವಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ರೋಟರಿ ವಲಯ ಅಧಿಕಾರಿ ಬಿ.ಆರ್‌.ಮಂಜುನಾಥ್‌, ಗೋಣಿಬೀಡು ರೋಟರಿ ಸಂಸ್ಥೆ ಕಾರ್ಯದರ್ಶಿ ಎನ್‌.ಜಿ.ರಮೇಶ್‌, ನೂತನ ಅಧ್ಯಕ್ಷ ಎಂ.ಅನೀಸ್‌, ಕಾರ್ಯದರ್ಶಿ ಜಿ.ಎ.ನಂಜೇಗೌಡ, ನಿಕಟಪೂರ್ವ ರಾಜ್ಯಪಾಲ ಡಿ.ಎಸ್‌.ರವಿ, ಸಿ.ಸಿ.ಸವಿನ್‌, ಜೆ.ಎಸ್‌.ರಘು, ಕೆ.ಟಿ.ಜಗದೀಶ್‌, ಎಚ್‌.ಡಿ.ದಯಾಕರ್‌, ಯು.ಎಸ್‌.ಪ್ರಕಾಶ್‌, ಸಂದೀಪ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ