ಆ್ಯಪ್ನಗರ

ಸಂಗೀತ, ಸಾಹಿತ್ಯದಿಂದ ಹೆಚ್ಚು ಕ್ರಿಯಾಶೀಲತೆ

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸಂಗೀತ, ಸಾಹಿತ್ಯವನ್ನು ಏಕಾಗ್ರತೆಯಿಂದ ಹೆಚ್ಚು ಕ್ರಿಯಾಶೀಲರಾಗಿ ಅಭ್ಯಸಿಸಿದಾಗ ಜೀವನದಲ್ಲಿ ಸಾಧನೆಯ ಗುರಿ ಮುಟ್ಟಬಹುದು ಎಂದು ಶ್ರೀ ರಾಮೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಕೆ.ಎನ್‌.ಪ್ರಭಾಕರ್‌ ಹೇಳಿದರು.

Vijaya Karnataka 15 Apr 2019, 5:00 am
ಚಿಕ್ಕಮಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸಂಗೀತ, ಸಾಹಿತ್ಯವನ್ನು ಏಕಾಗ್ರತೆಯಿಂದ ಹೆಚ್ಚು ಕ್ರಿಯಾಶೀಲರಾಗಿ ಅಭ್ಯಸಿಸಿದಾಗ ಜೀವನದಲ್ಲಿ ಸಾಧನೆಯ ಗುರಿ ಮುಟ್ಟಬಹುದು ಎಂದು ಶ್ರೀ ರಾಮೋತ್ಸವ ಸೇವಾ ಸಮಿತಿಯ ಅಧ್ಯಕ್ಷ ಕೆ.ಎನ್‌.ಪ್ರಭಾಕರ್‌ ಹೇಳಿದರು.
Vijaya Karnataka Web CKM-14rudrap10


ಬಸವನಹಳ್ಳಿಯ ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ರಾಮೋತ್ಸವ ಸೇವಾ ಸಮಿತಿಯಿಂದ ರಾಮನವಮಿ ಉತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿ ನಮ್ಮ ದೇಶದ ಭಾಷೆ ಮತ್ತು ಸಂಸ್ಕೃತಿಗೆ ದೇಶದ ಎಲ್ಲ ಕಡೆ ಹೆಚ್ಚು ಗೌರವವಿದೆ ಎಂದರು.

ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗದೆ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜತೆಗೆ ಸಾಹಿತ್ಯ, ಸಂಗೀತ, ಶಾಸ್ತ್ರೀಯ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಸಮಿತಿಯಿಂದ 11 ದಿನ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಾದ ಶಾಸ್ತ್ರೀಯ ಸಂಗೀತ, ದ್ವಂದ್ವ ಕೊಳಲು ವಾದನ, ವೀಣಾವಾದನ, ಭಕ್ತಿಗೀತೆ, ದೇವರನಾಮ, ಹರಿಕಥೆ, ಗÜಮಕವಾಚನ, ಪ್ರತಿನಿತ್ಯ ವೇಣುಗೋಪಾಲ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ನೀಡಲಾಗುತ್ತದೆ ಎಂದರು.

ಶಾಸ್ತ್ರೀಯ ಸಂಗೀತಗಾರ ವಿನಯ್‌ಶರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಕಾರ್ಯದರ್ಶಿ ಎಸ್‌.ಶ್ರೀನಿವಾಸ್‌, ಖಜಾಂಚಿ ಬಿ.ಸಿ.ಜಯರಾಮ್‌, ಸದಸ್ಯರಾದ ಪ್ರಕಾಶ್‌, ದತ್ತಾತ್ರಿ, ಶ್ರೀಧರ್‌, ನಂಜುಂಡ ಸ್ವಾಮಿ, ನಾರಾಯಣ ಅಯ್ಯಂಗಾರ್‌, ರಾಮಕೃಷ್ಣ, ಗೋಪಿನಾಥ್‌, ಸುರೇಶ್‌, ಶಾರದ ಶ್ರೀಧರ್‌, ಮಾಲಿನಿಸುದರ್ಶನ್‌, ಸತ್ಯವತಿಪಟ್ಟಾಭಿರಾಮಯ್ಯ, ಶಾರದ ಶ್ರೀನಿವಾಸ್‌, ಸೀತಾಲಕ್ಷ್ಮೀ, ಪಿಎನ್‌ಎಸ್‌.ಕಾರಂತ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ