ಆ್ಯಪ್ನಗರ

ನಾಪತ್ತೆಯಾಗಿದ್ದ ನಾಗಪ್ಪಗೌಡರ ಮೃತದೇಹ ಪತ್ತೆ

ಕಳೆದ 9 ದಿನದ ಹಿಂದೆ ಗುಡ್ಡಕುಸಿತದಿಂದ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದ ಮಧುಗುಂಡಿಯ ನಾಗಪ್ಪಗೌಡರ (75) ಮೃತದೇಹ ಶುಕ್ರವಾರ ಪತ್ತೆಯಾಗಿದೆ.

Vijaya Karnataka 17 Aug 2019, 5:00 am
ಕೊಟ್ಟಿಗೆಹಾರ : ಕಳೆದ 9 ದಿನದ ಹಿಂದೆ ಗುಡ್ಡಕುಸಿತದಿಂದ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದ ಮಧುಗುಂಡಿಯ ನಾಗಪ್ಪಗೌಡರ (75) ಮೃತದೇಹ ಶುಕ್ರವಾರ ಪತ್ತೆಯಾಗಿದೆ.
Vijaya Karnataka Web nagappa gowda dead body found
ನಾಪತ್ತೆಯಾಗಿದ್ದ ನಾಗಪ್ಪಗೌಡರ ಮೃತದೇಹ ಪತ್ತೆ


ಕಳೆದ ಕೆಲಗಳಿಂದ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಕ್ಷಿಪ್ರ ಕಾರ್ಯಾಚರಣೆ ಸ್ಥಳೀಯರು, ಪೋಲಿಸರು ಮತ್ತು ನಮ್ಮುಡುಗ್ರು ತಂಡ ನಿರಂತರ ಕಾರ್ಯ ಚರಣೆ ನಡೆಸಿದ್ದು ಮೃತದೇಹವನ್ನು ಶುಕ್ರವಾರ ಮದ್ಯಾಹ್ನ ಮಣ್ಣಿನಡಿಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಮೃತದೇಹ ಪತ್ತೆಗೆ ದೇವರ ಮೊರೆ ಹೋದ ಗ್ರಾಮಸ್ಥರು.ಹಲವು ದಿನಗಳು ಕಳೆದರೂ ಮೃತದೇಹ ಪತ್ತೆಯಾಗದಿದ್ದಾಗ ಗ್ರಾಮಸ್ಥರು ಗ್ರಾಮ ದೇವತೆ ಗುತ್ತಿಯಮ್ಮನ ಮೊರೆ ಹೋಗಿದ್ದು ಗಣ ಹೇಳಿದ್ದ ಸ್ಥಳದಲ್ಲಿ ಶೋಧಕಾರ್ಯ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಒಂಬತ್ತು ದಿನದ ಹಿಂದೆ ಮನೆ ಹಿಂದಿನ ಗುಡ್ಡ ಕುಸಿದು ಗುಡ್ಡದ ಅಡಿ ಸಿಲುಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ