ಆ್ಯಪ್ನಗರ

ಅರಣ್ಯ ನಾಶದಿಂದ ಪ್ರಕೃತಿ ವಿಕೋಪ

ಅರಣ್ಯ ನಾಶ ಹೆಚ್ಚಾಗುತ್ತಿರುವುದರಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್‌.ಮಹೇಶ್‌ ಹೇಳಿದರು.

Vijaya Karnataka 18 Aug 2019, 5:00 am
ಚಿಕ್ಕಮಗಳೂರು : ಅರಣ್ಯ ನಾಶ ಹೆಚ್ಚಾಗುತ್ತಿರುವುದರಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್‌.ಮಹೇಶ್‌ ಹೇಳಿದರು.
Vijaya Karnataka Web CKM-17ARAGAP7


ಬಸವನಹಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ರಾಜ್ಯ ವಿಜ್ಞಾನ ಪರಿಷತ್‌, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಈಗ ಬೀಳುತ್ತಿರುವ ಮಳೆಗಿಂತ ಹೆಚ್ಚು ಮಳೆ, ಪ್ರವಾಹ ಹಿಂದೆ ಬಿದ್ದರೂ ಅನಾಹುತಗಳು ಸಂಭವಿಸುತ್ತಿರಲಿಲ್ಲ. ದಟ್ಟಕಾಡು ಪ್ರವಾಹ, ಮಣ್ಣಿನ ಸವೆತ ತಡೆಯುತ್ತಿತ್ತು. ಗುಡ್ಡ ಕುಸಿತವೂ ಸಂಭವಿಸುತ್ತಿರಲಿಲ್ಲ. ಅರಣ್ಯ ರಕ್ಷಿಸುವ ಜತೆಗೆ ನಾವು ಪ್ರಕೃತಿಯೊಂದಿಗೆ ಶಿಸ್ತಿನ ಜೀವನ ನಡೆಸಿದರೆ ಇಂತಹ ಅನಾಹುತಗಳು ಸಂಭವಿಸುವುದಿಲ್ಲ ಎಂದರು.

ಜಿಲ್ಲಾ ವಿಜ್ಞಾನ ಪರಿಷತ್‌ ಅಧ್ಯಕ್ಷ ಎಚ್‌.ಎಂ.ನೀಲಕಂಠಪ್ಪ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ವಿಜೇತರಾದವರು ಇನ್ನೂ ಉತ್ತಮ ಸಾಧನೆ ಮೂಲಕ ರಾಜ್ಯ ಮಟ್ಟದಲ್ಲೂ ಪ್ರಶಸ್ತಿ ಗಳಿಸಬೇಕು ಎಂದು ಹಾರೈಸಿದರು.

ಪ್ರಭಾರ ಮುಖ್ಯ ಶಿಕ್ಷಕ ಪ್ರಹ್ಲಾದ್‌ ಮಾತನಾಡಿದರು. ವಿಜ್ಞಾನ ಪರಿಷತ್‌ ಕಾರ‍್ಯದರ್ಶಿ ತ್ಯಾಗರಾಜ್‌ ಪ್ರಾಸ್ತಾವಿಕ ಮಾತನಾಡಿದರು. ಕಾರ‍್ಯಕಾರಿ ಸಮಿತಿ ಸದಸ್ಯ ಲೋಕೇಶ್‌, ಚಂದ್ರೇಗೌಡ ಹಾಜರಿದ್ದರು. ಸತ್ಯನಾರಾಯಣ ನಿರೂಪಿಸಿ, ಓಂಕಾರಪ್ಪ ವಂದಿಸಿದರು.

ಸರಕಾರಿ ಪದವಿಪೂರ್ವ ಕಾಲೇಜಿನ ಪ್ರದ್ಯುಮ್ನ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ನಿಲುವಾಗಿ ಸರಕಾರಿ ಪ್ರೌಢಶಾಲೆಯ ಶ್ರೇಯಸ್‌ ದ್ವಿತೀಯ, ಬಸವನಹಳ್ಳಿ ಶಾಲೆಯ ಪ್ರಕೃತಿ ತೃತೀಯ ಸ್ಥಾನ ಪಡೆದರು. ಶಂಕರನಾರಾಯಣ ತೀರ್ಪುಗಾರರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ