ಆ್ಯಪ್ನಗರ

ಮೂರು ತಿಂಗಳಿಗೆ ಚುನಾವಣೆ ಬೇಕಿತ್ತಾ ? ರವಿ ಪ್ರಶ್ನೆ

ಕೇವಲ ಮೂರು ತಿಂಗಳಿಗಾಗಿ ಲೋಕಸಭೆ ಉಪಚುನಾವಣೆ ಬೇಕಿತ್ತಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka 9 Oct 2018, 5:00 am
ಚಿಕ್ಕಮಗಳೂರು : ಕೇವಲ ಮೂರು ತಿಂಗಳಿಗಾಗಿ ಲೋಕಸಭೆ ಉಪಚುನಾವಣೆ ಬೇಕಿತ್ತಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web need elections for three months
ಮೂರು ತಿಂಗಳಿಗೆ ಚುನಾವಣೆ ಬೇಕಿತ್ತಾ ? ರವಿ ಪ್ರಶ್ನೆ


ಅವರು ಸೋಮವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ವಿಧಾನಸಭೆ ಚುನಾವಣೆಗೆ 4ವರ್ಷ 7 ತಿಂಗಳು ಇರುವುದರಿಂದ ಉಪಚುನಾವಣೆ ಅವಶ್ಯಕ. ಆದರೆ, ಲೋಕಸಭೆಗೆ ನಡೆಯುವ ಉಪಚುನಾವಣೆಯ ಫಲಿತಾಂಶ ನವಂಬರ್‌ಗೆ ಬರಲಿದೆ. ಕೇವಲ ಮೂರುವರೆ ತಿಂಗಳ ಕಾಲ ಸಂಸದರಾಗಿ ಕಾರ್ಯ ನಿರ್ವಹಿಸಬೇಕಿದೆ. ಹಾಗಾಗಿ ಮೂರುವರೆ ತಿಂಗಳಿಗೆ ಚುನಾವಣೆ ಬೇಕಿತ್ತಾ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದಂತೆ ನನ್ನಲ್ಲೂ ಮೂಡಿದೆ ಎಂದರು.

ಯಾವ ಪಕ್ಷಕ್ಕೂ ಒಳಗೆ ಚುನಾವಣೆ ಬೇಡ. ಆದರೆ ಹೊರಗೆ ಪ್ರತಿಷ್ಠೆ ಇದೆ. ನಮ್ಮ ಪಕ್ಷ ರಾಜಕೀಯ ಐಡಿಯಾಲಾಜಿ ಮೇಲೆ ಬೆಳೆದಿರುವ ಪಕ್ಷ. ಯಾವುದೇ ಚುನಾವಣೆಯನ್ನೂ ಎದುರಿಸಲು ಸದಾ ಸಿದ್ಧವಿದೆ. ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯರ ಅಭಿಪ್ರಾಯ ಪಡೆದು ಅದನ್ನು ಕೇಂದ್ರ ಪಾರ್ಲಿಮೆಂಟರಿ ಬೋರ್ಡ್‌ಗೆ ಕಳುಹಿಸುತ್ತೇವೆ. ಅಲ್ಲಿ ಅಭ್ಯರ್ಥಿ ಯಾರು ಎಂದು ನಿಗದಿಯಾಗಲಿದೆ ಎಂದು ಹೇಳಿದರು.

ಬಿಜೆಪಿ ಪಾರ್ಟಿ ಯಾವ ಚುನಾವಣೆಯನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮೇಲೆ ಮೈತ್ರಿ ಮಾಡಿಕೊಂಡಿರಬಹುದು. ಆದರೆ, ಅವರ ಒಳಗಿರುವ ಅಸಮಾಧಾನ ಮತ್ತು ಸಂಘರ್ಷದ ಲಾಭ ಪಡೆಯಲು ನಾವು ಪ್ರಯತ್ನಿಸುತ್ತೇವೆ. ಏನೆಲ್ಲಾ ತಂತ್ರ ಮಾಡಬೇಕು ಎಲ್ಲವನ್ನೂ ಮಾಡುತ್ತೇವೆ. ಐದೂ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ