ಆ್ಯಪ್ನಗರ

ಬಿದ್ದ ಮರ ತೆರವು ಮಾಡದೇ ನಿರ್ಲಕ್ಷ್ಯ

ಕಳಸ-ಹೊರನಾಡು ರಸ್ತೆಗೆ ಮರವೊಂದು ಬಿದ್ದು ತಿಂಗಳು ಕಳೆದರೂ ಕೂಡ ಅದನ್ನು ತೆರವು ಮಾಡದೆ ನಿರ್ಲಕ್ಷ ್ಯವಹಿಸಲಾಗುತ್ತಿದೆ.

Vijaya Karnataka 27 Jul 2019, 6:29 pm
ಕಳಸ: ಕಳಸ-ಹೊರನಾಡು ರಸ್ತೆಗೆ ಮರವೊಂದು ಬಿದ್ದು ತಿಂಗಳು ಕಳೆದರೂ ಕೂಡ ಅದನ್ನು ತೆರವು ಮಾಡದೆ ನಿರ್ಲಕ್ಷ ್ಯವಹಿಸಲಾಗುತ್ತಿದೆ.
Vijaya Karnataka Web CKM-26KLS4


ಕಳೆದ ವರ್ಷ ಮಳೆಗಾಲ ಸಂದರ್ಭದಲ್ಲಿ ಈ ಮರ ಉರುಳಿ ಪುಟ್‌ಪಾತ್‌ ಮೇಲೆ ಉರುಳಿತ್ತು. ಮರ ಉರುಳಿ ಒಂದು ವರ್ಷವಾದರೂ ಅದನ್ನು ತೆರವು ಮಾಡದೆ ಪುಟ್‌ಪಾತ್‌ನ ಮಣ್ಣಿನ ಮೇಲೆಯೆ ಇತ್ತು. ಈ ಬಾರಿ ಜೋರಾಗಿ ಮಳೆ ಬಿದ್ದ ಸಂದರ್ಭ ಅದು ಪುಟ್‌ ಪಾತ್‌ನಿಂದ ನೇರವಾಗಿ ರಸ್ತೆಗೆ ಬಿದ್ದಿದೆ. ಇದು ಬಿದ್ದು ಈಗಾಗಲೇ ಒಂದು ತಿಂಗಳುಗಳೆ ಕಳೆದಿವೆ. ಆದರೆ ಇದಕ್ಕೆ ಸಂಬಂದಪಟ್ಟವರು ತೆರವು ಮಾಡದೇ ಹಾಗೆಯೇ ಬಿಡಲಾಗಿದೆ.

ಕಳಸ-ಹೊರನಾಡು ಮುಖ್ಯ ರಸ್ತೆಯಲ್ಲಿಯೇ ಇದ್ದು ಪ್ರತಿ ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡುತ್ತಿರುತ್ತವೆ. ಶಾಲಾ, ಕಾಲೇಜು ಮಕ್ಕಳು ಇದೇ ರಸ್ತೆಯ ಮುಖಾಂತರ ಹೋಗಬೇಕು. ಅತ್ಯಂತ ತಿರುವಿನಲ್ಲಿ ರಸ್ತೆ ಮೇಲೆ ಮರ ಇರುವುದಿಂದ ರಾತ್ರಿ ಮಂಜು ಮುಸುಕಿದ ವಾತಾವರಣದಲ್ಲಿ ವಾಹನ ಸವಾರರಿಗೆ ಗಮನಕ್ಕೆ ಬರುವುದಿಲ್ಲ. ಇದರಿಂದ ಇಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಸಂಬಂಧಿಸಿದವರು ಬಿದ್ದ ಮರವನ್ನು ತೆರವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ