ಆ್ಯಪ್ನಗರ

ಸಂಧಾನ ವಿಫಲ: ಮುಂದುವರಿದ ಬಹಿಷ್ಕಾರ

ಪಟ್ಟಣ ಸಮೀಪ ನಂದೀಪುರ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸಿದ್ದ ಹಿನ್ನೆಲೆಯಲ್ಲಿ ಭಾನುವಾರ ಅಧಿಕಾರಿಗಳು ಮನವೊಲಿಸಲು ನಡೆಸಿದ ಸಭೆ ವಿಫಲವಾಯಿತು.

Vijaya Karnataka 2 Apr 2019, 5:00 am
ಅಜ್ಜಂಪುರ: ಪಟ್ಟಣ ಸಮೀಪ ನಂದೀಪುರ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸಿದ್ದ ಹಿನ್ನೆಲೆಯಲ್ಲಿ ಭಾನುವಾರ ಅಧಿಕಾರಿಗಳು ಮನವೊಲಿಸಲು ನಡೆಸಿದ ಸಭೆ ವಿಫಲವಾಯಿತು.
Vijaya Karnataka Web CKM-01ajp03


ಅಜ್ಜಂಪುರ ತಹಸೀಲ್ದಾರ್‌ ವೈ.ವಿಶ್ವೇಶ್ವರರಡ್ಡಿ, ತರೀಕೆರೆ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷ ಮ್ಮ, ವಿಶ್ವೇಶ್ವರಯ್ಯ ಜಲ ನಿಗಮದ ಮಂಜುನಾಥ ದೇಸಾಯಿ, ನಾಗರಾಜ್‌, ಗ್ರಾ.ಪಂ. ಪಿಡಿಒ ಮಲ್ಲಿಕಾರ್ಜುನ್‌, ಕಾರ್ಯದರ್ಶಿ ಸಿದ್ದೇಶ್‌, ಗ್ರಾಮ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಇತರೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.

ಉಬ್ರಾಣಿ ಏತ ನೀರಾವರಿ ಮೂಲಕ ಭದ್ರಾ ನೀರು ಹರಿಸುವ ಕೆರೆಗಳ ಪಟ್ಟಿಗೆ 80 ಎಕರೆ ವಿಸ್ತೀರ್ಣದ ನಂದೀಪುರ ಗ್ರಾಮದ ಶಂಕರಯ್ಯನ ಕೆರೆಯನ್ನು ಸೇರಿಸಿಲ್ಲ. ಕೆರೆಗೆ ಭದ್ರಾ ನೀರನ್ನು ಹರಿಸಲು ಸ್ಪಷ್ಟ ಭರವಸೆ ಮತ್ತು ಲಿಖಿತ ಆದೇಶ ನೀಡಬೇಕೆಂದು ಈ ಸಂದರ್ಭ ಗ್ರಾಮಸ್ಥರು ಆಗ್ರಹಿಸಿದರು.

ಕೇವಲ 18 ದಿನಗಳಲ್ಲಿ ನೀರು ತುಂಬಿಸುವ ಯೋಜನೆಗೆ ಪರಿಹಾರ ಸಿಗುವುದಿಲ್ಲ. ಚುನಾವಣೆ ನಂತರ ನೀರಾವರಿ ಸಚಿವರು, ಎಂಜಿನಿಯರ್‌ ಅವರೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿ, ನೀರು ಹರಿಸಲು ಸರಕಾರದ ಅನುಮೋದನೆ, ಕಾನೂನಿನ ತೊಡಕಿನ ವಿವರಗಳನ್ನು ಅಧಿಕಾರಿಗಳು ತಿಳಿಸಿದರು. ಇದಕ್ಕೊಪ್ಪದ ಗ್ರಾಮಸ್ಥರು ಬಹಿಷ್ಕಾರ ಹಾಕುವುದಾಗಿ ತಿಳಿಸಿದರು.

ನಮ್ಮ ಬೇಡಿಕೆ ಈಡೇರಿಕೆಗೆ ಇಂತಹ ಚುನಾವಣೆ ಸಂದರ್ಭ ಮತ್ತೊಮ್ಮೆ ಸಿಗುವುದಿಲ್ಲ. ಕಬ್ಬಿಣ ಕಾದಾಗಲೇ ಬಡಿಯಬೇಕು. ಶಂಕರಯ್ಯನ ಕೆರೆಗೆ ನೀರು ಹರಿಸಿದರೆ ಅಂತರ್ಜಲ ಹೆಚ್ಚುತ್ತದೆ. ಇದರಿಂದ ಸಹಜವಾಗಿ ಸುತ್ತಮುತ್ತಲ ಗ್ರಾಮಗಳಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ರೈತರ ಸಹಕಾರ ಪಡೆದು ಹೋರಾಟ ತೀವ್ರಗೊಳಿಸಲಾಗುವುದು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಮಹಜರ್‌ ಮಾಡಿಸಿಕೊಂಡು ಹಲವರ ಸಹಿ ಪಡೆದು ಹೋಗಿದ್ದಾರೆ ಎಂದು ತಿಳಿಸಿದರು.

ಆನಂದ್‌, ಶಿವಲಿಂಗಪ್ಪ, ಅಣ್ಣಯ್ಯ, ಜಯಪ್ಪ, ಬೀರನಹಳ್ಳಿ ಭದ್ರಪ್ಪ, ಕಲ್ಲೇಶ, ಅಣ್ಣಪ್ಪ ಇತರರು ಹಾಜರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ