ಆ್ಯಪ್ನಗರ

ಚಿಕ್ಕಮಗಳೂರು: ಅರಣ್ಯದಲ್ಲಿ ನವವಿವಾಹಿತೆ ಸಾವು, ಶವದ ಜತೆ ರಾತ್ರಿ ಕಳೆದ ಪತಿ!

ರ್ಷದ ಹಿಂದೆ ಒಂದೇ ಗ್ರಾಮದ ಇಬ್ಬರೂ ಪ್ರೀತಿಸಿ ಒಟ್ಟಿಗೇ ವಾಸವಿದ್ದರು. ಇಬ್ಬರೂ ಅಪ್ರಾಪ್ತರಾಗಿದ್ದ ಕಾರಣ ಮದುವೆಗೆ ಕಾನೂನು ಮಾನ್ಯತೆ ಇರಲಿಲ್ಲ. ಆದರೆ, ಇಬ್ಬರೂ ಒಟ್ಟಿಗೆ ವಾಸವಿರಲು ಕುಟುಂಬದವರು ವಿರೋಧ ವ್ಯಕ್ತಪಡಿಸಿರಲಿಲ್ಲ.

Vijaya Karnataka Web 29 Jan 2022, 5:08 pm
ಚಿಕ್ಕಮಗಳೂರು: ತಾಲೂಕಿನ ಜಡಗನಹಳ್ಳಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಶವದೊಂದಿಗೆ ಪತಿಯೂ ರಾತ್ರಿ ಕಳೆದ ಘಟನೆ ನಡೆದಿದೆ. ಆಕೆಯನ್ನು ಕೊಲೆ ಮಾಡಿರುವ ಶಂಕೆಯಿಂದ ಪತಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಚಿಕಮ್ಮಗಳೂರು ತಾಲೂಕಿನ ಜಡಗನಹಳ್ಳಿಯ ಸುಮಾ (19) ಮೃತಪಟ್ಟವರು. ಆಕೆಯ ಪತಿ ಅಭಿಷೇಕ್ (20) ಬಂತ ಆರೋಪಿ. ನಗರದ ಕಾಲೇಜೊಂದರ ಸುಮಾ ವಿದ್ಯಾರ್ಥಿನಿಯಾಗಿದ್ದರು. ವರ್ಷದ ಹಿಂದೆ ಒಂದೇ ಗ್ರಾಮದ ಇಬ್ಬರೂ ಪ್ರೀತಿಸಿ ಒಟ್ಟಿಗೇ ವಾಸವಿದ್ದರು. ಇಬ್ಬರೂ ಅಪ್ರಾಪ್ತರಾಗಿದ್ದ ಕಾರಣ ಮದುವೆಗೆ ಕಾನೂನು ಮಾನ್ಯತೆ ಇರಲಿಲ್ಲ. ಆದರೆ, ಇಬ್ಬರೂ ಒಟ್ಟಿಗೆ ವಾಸವಿರಲು ಕುಟುಂಬದವರು ವಿರೋಧ ವ್ಯಕ್ತಪಡಿಸಿರಲಿಲ್ಲ.

ಅಡಕೆ ಕೃಷಿ ಕಾರ್ಯದಲ್ಲಿ ಆಧುನಿಕತೆ ಟಚ್‌! ಬಹು ಉಪಯೋಗಿ ಫೈಬರ್‌ ದೋಟಿ!

ಪಕ್ಕದ ಗ್ರಾಮದಲ್ಲಿ ಶುಕ್ರವಾರ ಸಂಬಂಕರ ಮದುವೆಗೆ ಪತ್ನಿ ಸುಮಾಳನ್ನು ಅಭಿಷೇಕ್ ಕರೆದುಕೊಂಡು ಹೋಗಿದ್ದ. ವಾಪಸ್ ಬರುವಾಗ ಮನೆಗೆ ಹೋಗದೆ ಜಡಗನಹಳ್ಳಿಯ ಅರಣ್ಯ ಪ್ರದೇಶದಲ್ಲಿ ರಾತ್ರಿ ಉಳಿದುಕೊಂಡಿದ್ದರು. ಬೆಳಗ್ಗೆ ಅರಣ್ಯ ಪ್ರದೇಶದ ಕಡೆ ತೆರಳಿದ್ದ ಕೆಲ ಗ್ರಾಮಸ್ಥರಿಗೆ ಇಬ್ಬರು ವ್ಯಕ್ತಿಗಳು ಅಲ್ಲಿರುವುದು ಕಂಡುಬಂದಿತ್ತು.

ಬೆಳೆ ಸಾಲ ಕಡಿತ ಆತಂಕ; ಬ್ಯಾಂಕ್‌ಗಳಿಂದ ಸಾಲ ನೀಡಿಕೆ ನಿಯಮ ಪರಿಷ್ಕರಣೆ, ರೈತರು ಅತಂತ್ರ!

ಅರಣ್ಯ ಪ್ರದೇಶದಲ್ಲಿ ಇರುವ ವ್ಯಕ್ತಿಗಳು ಯಾರು ಎಂದು ವಿಚಾರಿಸಲು ಮುಂದಾದಾಗ ಸುಮಾ ಮೃತಪಟ್ಟಿರುವ ವಿಷಯ ಗೊತ್ತಾಗಿದೆ. ಪತಿ ಅಭಿಷೇಕ್ ರಾತ್ರಿಯಿಡೀ ಪತ್ನಿಯ ಶವದೊಂದಿಗೆ ಇದ್ದ. ಸುಮಾಳನ್ನು ಅಭಿಷೇಕ್ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಸಾವಿನ ರಹಸ್ಯ ನಿಗೂಢವಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕು ಕಚೇರಿಯಲ್ಲಿಕಡತ ಕಳವು

ಶೃಂಗೇರಿ (ಚಿಕ್ಕಮಗಳೂರು): ತಾಲೂಕು ಕಚೇರಿಯಲ್ಲಿ ಕಡತಗಳನ್ನು ಕಳವು ಮಾಡಲಾಗಿದ್ದು, ಬಗ್ಗೆ ಇಲ್ಲಿನ ಠಾಣೆಗೆ ದೂರು ಸಲ್ಲಿಸಲಾಗಿದೆ.

ಈ ಹಿಂದೆ ತಹಸೀಲ್ದಾರ್‌ ಅಂಬುಜಾ 94ಸಿ ಹಕ್ಕುಪತ್ರ ವಿತರಣೆಯಲ್ಲಿಅವ್ಯವಹಾರ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಹಕ್ಕುಪತ್ರ ಹಗರಣವನ್ನು ಉಪ ವಿಭಾಗಧಿಕಾರಿ ನೇತೃತ್ವದ ಐವರು ಅಧಿಕಾರಿಗಳ ತಂಡ ತನಿಖೆ ಆರಂಭಿಸಿತ್ತು. ಈ ಹಂತದಲ್ಲಿ ತಾಲೂಕು ಕಚೇರಿಯಲ್ಲಿದ್ದ ಕಡತಗಳು ಕಳ್ಳತನವಾಗಿವೆ ಎಂದು ಹೇಳಲಾಗಿದೆ. ಕಂದಾಯ ಉಪವಿಭಾಗಾಧಿಕಾರಿ ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ