ಆ್ಯಪ್ನಗರ

ನಿರಾಶ್ರಿತರ ಪರಿಹಾರದಲ್ಲಿ ತಾರತಮ್ಯ ಸಲ್ಲದು

ಪಟ್ಟಣದ ತಾ.ಪಂ. ಸಭಾಂಗಣದಲ್ಲಿತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಅಧ್ಯಕ್ಷತೆಯಲ್ಲಿಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿಪ್ರಗತಿ ಪರಿಶೀಲನೆ ಕುರಿತು ಗಂಭೀರ ಚರ್ಚೆ ನಡೆಯಿತು.

Vijaya Karnataka 4 Jan 2020, 5:00 am
ಮೂಡಿಗೆರೆ: ಪಟ್ಟಣದ ತಾ.ಪಂ. ಸಭಾಂಗಣದಲ್ಲಿತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಅಧ್ಯಕ್ಷತೆಯಲ್ಲಿಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿಪ್ರಗತಿ ಪರಿಶೀಲನೆ ಕುರಿತು ಗಂಭೀರ ಚರ್ಚೆ ನಡೆಯಿತು.
Vijaya Karnataka Web no discrimination in refugee compensation
ನಿರಾಶ್ರಿತರ ಪರಿಹಾರದಲ್ಲಿ ತಾರತಮ್ಯ ಸಲ್ಲದು


ಆರಂಭದಲ್ಲಿವಿವಿಧ ಇಲಾಖೆ ಅಧಿಕಾರಿಗಳ ಹಾಜರಾತಿ ಪರಿಶೀಲಿಸಿದಾಗ ಕೆಲ ಇಲಾಖೆ ಅಧಿಕಾರಿಗಳು ಹಾಜರಿರಲಿಲ್ಲ. ಕೆಡಿಪಿ ಸಭೆ ಮಹತ್ವ ಎಂದರೆ ಅಧಿಕಾರಿಗಳಿಗೆ ಗೊತ್ತಿಲ್ಲದಂತಿದೆ. ಸಭೆಗೆ ಗೈರಾದರೆ ಜನರ ಸಮಸ್ಯೆ ಬಗೆಹರಿಸುವುದಾದರೂ ಹೇಗೆ? ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಲು ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಸೂಚಿಸಿದರು.

ಪ್ರವಾಹದಿಂದ ಹಾನಿಗೊಳಗಾದ 961 ನಿರಾಶ್ರಿತರನ್ನು ಗುರುತಿಸಲಾಗಿತ್ತು. 25 ಸಾವಿರ ಚೆಕ್‌ ಮೂಲಕ ನೀಡಲಾಗಿದೆ. ಉಳಿದ ಮೊತ್ತ ನೇರ ನಿರಾಶ್ರಿತರ ಅಕೌಂಟ್‌ಗೆ ಹೋಗುತ್ತದೆ. ಎರಡನೇ ಬಾರಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಸಧ್ಯದಲ್ಲೇ ಬರುತ್ತದೆ. ನಿರಾಶ್ರಿತರಿಗೆ ನಿವಾಶನ ನೀಡಲು ಬಿಹೊಸಳ್ಳಿ, ಬೆಟ್ಟದಮನೆ, ಅಂಗಡಿ ಸೇರಿದಂತೆ ವಿವಿಧ ಪ್ರದೇಶದಲ್ಲಿಒಟ್ಟು 274 ಎಕರೆ ಜಾಗ ಗುರುತಿಸಿ ನಿವೇಶನ ಮಾಡಲಾಗಿದೆ. ಪ್ರವಾಹದಿಂದ ಹಾನಿಗೊಳಗಾದವರು ಬೆಳೆ ಪರಿಹಾರಕ್ಕಾಗಿ 23ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿಕರ್ನಾಟಕ ಬ್ಯಾಂಕ್‌ ಐಎಫ್‌ಎಸಿ ಕೋಡ್‌ ತಪ್ಪಾಗಿದ್ದರಿಂದ ಕೆಲವರಿಗೆ ಪರಿಹಾರ ಸಿಕ್ಕಿಲ್ಲ. ಆಧಾರ್‌ ನೀಡದಿದ್ದವರಿಗೆ ಸಿಕ್ಕಿಲ್ಲ. ಉಳಿದ ಶೇ.80 ರಷ್ಟು ಬೆಳೆ ಪರಿಹಾರ ನೀಡಲಾಗಿದೆ. ಇನ್ನೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಹಸೀಲ್ದಾರ್‌ ಎಚ್‌.ಎಂ.ರಮೇಶ್‌ ಸಭೆಗೆ ಮಾಹಿತಿ ನೀಡಿದರು.

ತಾ.ಪಂ. ಉಪಾಧ್ಯಕ್ಷೆ ಪ್ರಮಿಳಾ, ಜಿ.ಪಂ. ಸದಸ್ಯರಾದ ಅಮಿತಾ ಮುತ್ತಪ್ಪ, ಸುಧಾ ಯೋಗೇಶ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ.ವೆಂಕಟೇಶ್‌, ತಹಸೀಲ್ದಾರ್‌ ಎಚ್‌.ಎಂ.ರಮೇಶ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

================
ಗ್ರಾ.ಪಂ. ನಡೆಯುವ ಕೆಡಿಪಿ ಸಭೆಗೆ ಯಾವ ಅಧಿಕಾರಿಗಳು ಹೋಗುತ್ತಿಲ್ಲವೆಂಬ ದೂರುಗಳು ಕೇಳಿ ಬರುತ್ತಿದೆ. ಗ್ರಾ.ಪಂ. ಕೆಡಿಪಿ ಸಭೆಗೆ ಯಾವ ಅಧಿಕಾರಿ ಹೋಗುವುದಿಲ್ಲವೊ ಅಂತಹ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು.
-ಕೆ.ಸಿ.ರತನ್‌ ,ತಾ.ಪಂ.ಅಧ್ಯಕ್ಷ

=================
ನಿರಾಶ್ರಿತರಿಗೆ ನೀಡುವ ಪರಿಹಾರದಲ್ಲಿತಾರತಮ್ಯ ಮಾಡಬಾರದು. ಬಾಳೂರು, ಜಾವಳಿ, ಹಿರೇಬೈಲು ಕಡೆಯಲ್ಲಿಹೆಚ್ಚು ಹಾನಿಯಾಗಿದೆ. ಅಲ್ಲಿಹಾನಿಗೊಳಗಾದ ಜನರಿಗೆ ಬೇರೆ ಕಡೆ ಜಾಗ ನೀಡಿದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಡೀಮ್‌್ಡ ಪಾರೆಸ್ಟ್‌ ಎಂಬುದು ನಿರಾಶ್ರಿತರಿಗೆ ಕಂಟಕವಾಗಿದೆ. ಡೀಮ್‌್ಡ ಪ್ರದೇಶ 4/1 ಆಗದಿದ್ದರೆ ಉಪವಿಭಾಗಾಧಿಕಾರಿ ಮೂಲಕ ಮತ್ತೆ ವಾಪಾಸು ಪಡೆಯಲು ಸಾಧ್ಯವಿರುವುದರಿಂದ ಜಾಗ ಹಿಂಪಡೆದು ನಿರಾಶ್ರಿತರಿಗೆ ನೀಡುವ ಕೆಲಸ ಮಾಡಬೇಕು.
-ಎಂ.ಕೆ.ಪ್ರಾಣೇಶ್‌ ,ವಿಧಾನ ಪರಿಷತ್‌ ಸದಸ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ