ಆ್ಯಪ್ನಗರ

ಗ್ರಾಮಕ್ಕೆ ಯಾರೂ ಬಂದಿಲ್ಲ-ಸಂತ್ರಸ್ತನ ಅಳಲು

ಮೂಡಿಗೆರೆ ತಾಲೂಕಿನ ಮೇಗೂರು ಗ್ರಾಮದಲ್ಲಿ6 ಮನೆಗಳು ಕುಸಿದಿವೆ, ರಸ್ತೆ ಸೇತುವ ಕೊಚ್ಚಿ ಹೋಗಿವೆ ನಮ್ಮ ಗ್ರಾಮಕ್ಕೆ ಈವರೆಗೂ ಯಾರೊಬ್ಬರೂ ಬಂದಿಲ್ಲಎಂದು ಮೇಗೂರು ಗ್ರಾಮದ ನರೇಂದ್ರ ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡರು.

Vijaya Karnataka 28 Aug 2019, 5:00 am
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಮೇಗೂರು ಗ್ರಾಮದಲ್ಲಿ6 ಮನೆಗಳು ಕುಸಿದಿವೆ, ರಸ್ತೆ ಸೇತುವ ಕೊಚ್ಚಿ ಹೋಗಿವೆ ನಮ್ಮ ಗ್ರಾಮಕ್ಕೆ ಈವರೆಗೂ ಯಾರೊಬ್ಬರೂ ಬಂದಿಲ್ಲಎಂದು ಮೇಗೂರು ಗ್ರಾಮದ ನರೇಂದ್ರ ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡರು.
Vijaya Karnataka Web CKM-27SHIVU-P8


ಮಲೆಮನೆಗೆ ಭೇಟಿ ನೀಡಿದ್ದ ಸಂದರ್ಭ ಮನವಿಯೊಂದನ್ನು ನೀಡಿದ ಅವರು ಸೇತುವೆ ಕೊಚ್ಚಿ ಹೋಗಿರುವುದರಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ಗ್ರಾಮಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿಯೂ ಭೇಟಿ ನೀಡಿಲ್ಲ. ಗ್ರಾಮಕ್ಕೆ ಈವರೆಗೂ ಯಾವುದೇ ಪದಾರ್ಥಗಳೂ ಬಂದಿಲ್ಲ. ನಮ್ಮನ್ನು ಕೇಳುವವರೆ ಇಲ್ಲದಂತಾಗಿದೆ ಎಂದು ನೊಂದು ನುಡಿದರು.

ಸಂಸದೆ ಶೋಭಕರಂದ್ಲಾಜೆ ಮಾತನಾಡಿ, ಮೂಡಿಗೆರೆ ತಾಲೂಕಿನ ಮಲೆಮನೆ, ಆಲಿಖಾನ್‌ ಹೊರಟ್ಟಿ, ಮಧುಗುಂಡಿ ಸೇರಿದಂತೆ 6 ಗ್ರಾಮಗಳಲ್ಲಿಅತಿವೃಷ್ಟಿಯಿಂದ ಬಾರೀ ಅನಾಹುತವಾಗಿದೆ. ಈ ಗ್ರಾಮಗಳಲ್ಲಿಪುನಾ ವಾಸಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕಾಗಿದೆ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು.

ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಂದ ವರದಿಯನ್ನು ಪಡೆದು ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲಾಬಿಜೆಪಿ ಅಧ್ಯಕ್ಷ ಡಿ.ಎನ್‌.ಜೀವರಾಜ್‌, ಮೂಡಿಗೆರೆ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್‌, ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ರಾಜೀವ್‌ ಚಾವ್ಲಾ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿ.ಪಂ. ಸಿ.ಇ.ಓ. ಎಸ್‌.ಅಶ್ವತಿ, ಎಸ್‌.ಪಿ. ಹರೀಶ್‌ ಪಾಂಡೆ ಇತರರು ಇದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ