ಆ್ಯಪ್ನಗರ

ಕುವೆಂಪು ಸಾಹಿತ್ಯ ಇಂಗ್ಲೀಷಿನಲ್ಲಿದ್ದಿದ್ದರೆ ನೊಬೆಲ್‌ ಪುರಸ್ಕಾರ

ಕುವೆಂಪು ಅವರ ಸಾಹಿತ್ಯಅಗ್ರಮಾನ್ಯ ಸ್ಥಾನ ಗಳಿಸಿದ್ದು, ಅವರ ಸಮಗ್ರ ಸಾಹಿತ್ಯ ಇಂಗ್ಲಿಷ್‌ ನಲ್ಲಿ ರಚನೆಯಾಗಿದ್ದರೆ ನೋಬೆಲ್‌ಪುರಸ್ಕಾರಕ್ಕೆ ಕುವೆಂಪು ಪಾತ್ರರಾಗಿರುತ್ತಿದ್ದರು ಎಂದು ವಿಧಾನ ಪರಿಷತ್‌ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡಅಭಿಪ್ರಾಯಿಸಿದರು.

Vijaya Karnataka 30 Dec 2018, 5:00 am
ಚಿಕ್ಕಮಗಳೂರು : ಕುವೆಂಪು ಅವರ ಸಾಹಿತ್ಯಅಗ್ರಮಾನ್ಯ ಸ್ಥಾನ ಗಳಿಸಿದ್ದು, ಅವರ ಸಮಗ್ರ ಸಾಹಿತ್ಯ ಇಂಗ್ಲಿಷ್‌ ನಲ್ಲಿ ರಚನೆಯಾಗಿದ್ದರೆ ನೋಬೆಲ್‌ಪುರಸ್ಕಾರಕ್ಕೆ ಕುವೆಂಪು ಪಾತ್ರರಾಗಿರುತ್ತಿದ್ದರು ಎಂದು ವಿಧಾನ ಪರಿಷತ್‌ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡಅಭಿಪ್ರಾಯಿಸಿದರು.
Vijaya Karnataka Web CKM-29rudrap10


ತಾಲೂಕುಕನ್ನಡ ಸಾಹಿತ್ಯ ಪರಿಷತ್‌ ಮತ್ತು ಎಸ್‌ಟಿಜೆ ಮಹಿಳಾ ಪದವಿ ಕಾಲೇಜು ಆಶ್ರಯದಲ್ಲಿ ಶನಿವಾರ ನಗರದಎಸ್‌ಟಿಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೋಬಲ್‌ ಪ್ರಶಸ್ತಿ ಲಭಿಸುತ್ತಿರುವ ಸಾಹಿತ್ಯಗಳಿಗೆ ಹೋಲಿಕೆ ಮಾಡಿದಾಗ ಕುವೆಂಪು ಅವರ ಸಾಹಿತ್ಯ ಕೃಷಿ ಯಾವುದರಲ್ಲೂ ಕಮ್ಮಿ ಇಲ್ಲ. ಆದರೆ, ದುರಂತ ಎಂದರೆ ಇಂಗ್ಲಿಷ್‌ ಸಾಹಿತ್ಯಕ್ಷೇತ್ರಕ್ಕೆ ನೋಬೆಲ್‌ ಪ್ರಶಸ್ತಿಗಳು ಲಭಿಸುತ್ತಿವೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಕುಂದೂರುಅಶೋಕ್‌ ಮಾತನಾಡಿ, ಕುವೆಂಪು ಅವರ ಎಲ್ಲ ಸಾಹಿತ್ಯ ಪ್ರಾಕಾರಗಳು ದಲಿತರು, ಶೋಷಿತರು, ಕೃಷಿಕರ ಪರಧ್ವನಿಯಾಗಿದ್ದವು. ಸರ್ವೋದಯ ಮಂತ್ರವನ್ನು ಅವರ ಸಾಹಿತ್ಯದಲಿ ್ಲಕಾಣಬಹುದು.ಸಮಬಾಳು, ಸಮಪಾಲಿನೊಂದಿಗೆ ಸಮಾಜದಲ್ಲಿಅಂತ್ಯೋದಯವಾಗಬೇಕುಎಂದು ಕುವೆಂಪು ತಮ್ಮ ಸಾಹಿತ್ಯದ ಮೂಲಕ ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಎಸ್‌ಟಿಜೆ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರೊ.ಜೆ.ಕೆ.ಭಾರತಿ,ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ಅಧ್ಯಕ್ಷ ಸೂರಿಪ್ರಭು ,ತಾಲೂಕುಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿದರು.ಉಪನ್ಯಾಸಕರಾದ ಹೇಮರಾಜ್‌, ಚಂದ್ರಶೇಖರ್‌, ಕಸಾಪ ತಾಲೂಕು ಕೋಶಾಧ್ಯಕ್ಷ ಎಚ್‌.ಎಸ್‌.ಜಗದೀಶ್‌ ಹಾಜರಿದ್ದರು. ಪದವಿ ಪರೀಕ್ಷೆಯ ಕನ್ನಡ ಐಚ್ಛಿಕದಲ್ಲಿಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಾದ ಸೌಭಾಗ್ಯ ಕೀವಾನೆ, ಯಶೋದಾ ಅವರಿಗೆ ನಗದು ಪುರಸ್ಕಾರ ನೀಡಿಗೌರವಿಸಲಾಯಿತು. ವಿದ್ಯಾರ್ಥಿನಿ ನಿಖಿತಾ ಪ್ರಾರ್ಥಿಸಿ, ಜ್ಯೋತಿ ಸ್ವಾಗತಿಸಿದರು. ಸೌಭಾಗ್ಯ ನಿರೂಪಿಸಿ, ಯಶೋದಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ