ಆ್ಯಪ್ನಗರ

ಸಾಧು, ಸಾದ್ವಿಯರೊಂದಿಗೆ ಅಹಿಂಸಾ ಯಾತ್ರೆ

ಅಹಿಂಸೆಯೇ ಧರ್ಮ,ಅಹಿಂಸೆಯಿಂದ ಆತ್ಮಸ್ತುತಿಯಾಗಲಿದೆ ಎಂದು ಜೈನತೇರಾಪಂಥ್‌ ಸಂಘದ 11 ನೇ ಆಚಾರ್ಯರಾದ ಶ್ರೀ ಮಹಾಶ್ರಮಣ್‌ಜೀ ಹೇಳಿದರು.

Vijaya Karnataka 9 Dec 2019, 5:00 am
ಚಿಕ್ಕಮಗಳೂರು: ಅಹಿಂಸೆಯೇ ಧರ್ಮ,ಅಹಿಂಸೆಯಿಂದ ಆತ್ಮಸ್ತುತಿಯಾಗಲಿದೆ ಎಂದು ಜೈನತೇರಾಪಂಥ್‌ ಸಂಘದ 11 ನೇ ಆಚಾರ್ಯರಾದ ಶ್ರೀ ಮಹಾಶ್ರಮಣ್‌ಜೀ ಹೇಳಿದರು.
Vijaya Karnataka Web 8RUDRAP11_35


ನಗರದ ಸಾರಗೋಡು ಮೈದಾನದಲ್ಲಿಭಾನುವಾರ ಏರ್ಪಡಿಸಿದ್ದ ಅಹಿಂಸಾ ಯಾತ್ರೆ ಕಾರ್ಯಕ್ರಮದಲ್ಲಿಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿಸದ್ಭಾವನೆ ಬೆಳೆಸಬೇಕು. ಜೀವನದಲ್ಲಿನೈತಿಕತೆ ಅಳವಡಿಸಿಕೊಳ್ಳಬೇಕು. ನಶಮುಕ್ತ ಸಮಾಜ ನಮ್ಮದಾಗಬೇಕು ಈ ಮೂರು ಅಂಶಗಳನ್ನು ಇಟ್ಟುಕೊಂಡು ಅಹಿಂಸೆಯಾತ್ರೆ ಕೈಗೊಂಡಿದ್ದೇವೆ.ದೆಹಲಿಯಿಂದ ಆರಂಭವಾಗಿರುವ ಯಾತ್ರೆ ಈಗ ದಕ್ಷಿಣ ಭಾರತದ ಕಡೆ ಹೊರಟಿದೆ ಎಂದು ಹೇಳಿದರು.

ಸಾಧ್ವಿ ಕನಕ ಪ್ರಭ ಮಾತನಾಡಿ 50 ವರ್ಷದ ಹಿಂದೆ ಶ್ರೀ ಆಚಾರ್ಯ ತುಳಿಸಿ ಅವರು ಜಿಲ್ಲೆಗೆ ಬಂದಿದ್ದರು. ಅದಾದ ತರುವಾಯ ಈಗ ಶ್ರೀ ಮಹಾಪ್ರಮಣ್‌ಜಿ ಅವರು ಬಂದಿದ್ದಾರೆ ಎಂದರು.ಬೇಲೂರಿನಿಂದ ಆಗಮಿಸಿದ ಮಹಾಶ್ರಮಣ್‌ಜೀ ಅವರನ್ನು ಜೈನ ಸಂಘ, ತೇರಾಪಂಥಿ ಸಭಾದ ವಿವಿಧ ಘಟಕಗಳ ಪದಾಧಿಕಾರಿಗಳು ಎಸ್‌ ಟಿಜೆ ಕಾಲೇಜಿನ ಬಳಿ ಸ್ವಾಗತಿಸಿದರು. ಅಲ್ಲಿಂದ ಎಂಜಿ ರಸ್ತೆ, ಸಿಂಡಿಕೇಟ್‌ ವೃತ್ತ, ಐಜಿ ರಸ್ತೆ ಮೂಲಕ ಕಾರ್ಯಕ್ರಮ ಆಯೋಜಿಸಿದ್ದ ಸಾರಗೋಡು ಮೈದಾನಕ್ಕೆ ಕರೆತರಲಾಯಿತು.ಜಿಲ್ಲಾಉಸ್ತುವಾರಿ ಸಚಿವ ಸಿ.ಟಿ.ರವಿ, ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌.ಭೋಜೇಗೌಡ, ತೇರಾಪಂಥ್‌ ಸಭಾದ ಅಧ್ಯಕ್ಷ ಮದನ್‌ಚಂದ್‌ ಗಾದಿಯಾ, ಉಪಾಧ್ಯಕ್ಷ ರಾಜೇಂದ್ರ ಸಕ್ಲೇಚ, ಜೈನ ಸಂಘದ ಅಧ್ಯಕ್ಷ ಗೌತಮ್‌ಚಂದ್‌, ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಲಾಲ್‌ಚಂದ ಜೈನ್‌, ತೇರಾ ಪಂಥ್‌ ಮಾಜಿ ಅಧ್ಯಕ್ಷ ತಾರಾ ಚಂದ್‌ ಸಾತಿಯಾ,ಅಣುವೃತ ಸಮಿತಿ ಅಧ್ಯಕ್ಷ ಲಾಲ್‌ ಚಂದ್‌ ಜೈನ್‌, ಗ್ಯಾನ ಶಾಲೆ ಪ್ರಬಾರಿ ಖುಷಬ್‌ರಾದಿಯಾ, ಯುವ ಪರಿಷತ್‌ ಅಧ್ಯಕ್ಷ ರಾಹುಲ್‌ ಗಾದಿಯಾ, ಮಲ್ನಾಡು ಕ್ಷೇತ್ರಿಯ ಸಭಾ ಅಧ್ಯಕ್ಷ ಮಾಣಿಕ್‌ ಚಂದ್‌ ಮತ್ತಿತರರು ಹಾಜರಿದ್ದರು.
----------
ಅಹಿಂಸೆಯೇ ಧರ್ಮ, ಹಿಂಸೆಯನ್ನು ದೂರಮಾಡಿ ಬದುಕಬೇಕು. ಯಾವ ಪ್ರಾಣಿಗೂ ಹಿಂಸೆ ಮಾಡಬಾರದು. ಅಹಿಂಸಾ ಧರ್ಮವೇ ಶಾಶ್ವತ ಧರ್ಮ.ಯಾವುದೇ ವ್ಯವಹಾರ ಮಾಡುವಾಗಲೂ ಕೂಡ ಅಹಿಂಸಾ ಮಾರ್ಗವನ್ನೇ ಅನುಸರಿಸಬೇಕು. ನನಗೆ ಬಂದ ಕಷ್ಟ , ನನಗಾದ ಅಪಮಾನ, ಇನ್ನೊಬ್ಬರಿಗೂ ಬರುತ್ತದೆ ಎಂದು ತಿಳಿಯಬೇಕು. ಮನುಷ್ಯ ಪ್ರಾಣಿಗಳನ್ನು ಒಂದೇ ರೀತಿಯಲ್ಲಿನೋಡಿ ಆತ್ಮ ಚೇತನಗೊಳಿಸಿಕೊಳ್ಳಬೇಕು.
ಶ್ರೀ ಮಹಾಶ್ರಮಣ್‌ಜೀ,ಜೈನತೇರಾಪಂಥ್‌ ಸಂಘದ 11 ನೇ ಆಚಾರ್ಯರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ