ಆ್ಯಪ್ನಗರ

ಪ್ರಕೃತಿಗೆ ವಿರುದ್ಧ್ದ ನಡೆ ಸಲ್ಲ : ಶಾಸಕ ಸಿ.ಟಿ.ರವಿ

ಕರಗಡ ಯೋಜನೆಯಿಂದ ಕೆರೆಗಳಿಗೆ ನೀರುಣಿಸುವ ಮತ್ತು ಹಬ್ಬೆ ಅಥವಾ ಭದ್ರಾ ಜಲಾಶಯದಿಂದ ನೀರು ತರುವುದಕ್ಕೆ ಡಿಪಿಆರ್‌ ಸಿದ್ಧವಾಗಿದೆ ಎಂದು ಶಾಸಕ ಸಿ.ಟಿ ರವಿ ಹೇಳಿದರು.

Vijaya Karnataka 20 Aug 2018, 5:00 am
ಸಖರಾಯಪಟ್ಟಣ : ಕರಗಡ ಯೋಜನೆಯಿಂದ ಕೆರೆಗಳಿಗೆ ನೀರುಣಿಸುವ ಮತ್ತು ಹಬ್ಬೆ ಅಥವಾ ಭದ್ರಾ ಜಲಾಶಯದಿಂದ ನೀರು ತರುವುದಕ್ಕೆ ಡಿಪಿಆರ್‌ ಸಿದ್ಧವಾಗಿದೆ ಎಂದು ಶಾಸಕ ಸಿ.ಟಿ ರವಿ ಹೇಳಿದರು.
Vijaya Karnataka Web not against nature mla ct ravi
ಪ್ರಕೃತಿಗೆ ವಿರುದ್ಧ್ದ ನಡೆ ಸಲ್ಲ : ಶಾಸಕ ಸಿ.ಟಿ.ರವಿ


ಪಟ್ಟಣದ ಸಮೀಪದ ಗುಣಸಾಗರದಲ್ಲಿ ಭಾನುವಾರ ಜೀರ್ಣೋದ್ಧ್ದಾರಗೊಂಡ ನೂತನ ಆಂಜನೇಯಸ್ವಾಮಿ ದೇವಾಲಯದ ಪ್ರಾರಂಭೋತ್ಸವದಲ್ಲಿ ಮಾತನಾಡಿ, ಎರಡು ಮೂರು ವರ್ಷಗಳಿಂದ ಬರಗಾಲದ ಛಾಯೆಯಲ್ಲಿ ಬೆಂದು ಅನುಭವಿಸಿದ ಕಷ್ಟ ಹೇಳತೀರದು. ಪ್ರಕೃತಿಗೆ ವಿರುದ್ಧ್ದವಾಗಿ ನಡೆಯುತ್ತಿರುವುದೇ ಇದಕ್ಕೆಲ್ಲ ಕಾರಣ ಎಂದರು.

ಆಂಜನೇಯ ಸ್ವಾಮಿ ದೇವಾಲಯವು ಭಕ್ತಿಯ ಪ್ರತೀಕವಾಗಿದ್ದು ಗ್ರಾಮೀಣ ಬಾಗದಲ್ಲಿ ಶಾಂತಿ ಮತ್ತು ನೆಮ್ಮದಿಯ ತಾಣವಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಗ್ರಾಮದ ಅನಂತ್‌ ಮಾತನಾಡಿ, ಈ ದೇವಾಲಯಕ್ಕೆ ದೊಡ್ಡ ಇತಿಹಾಸವಿದ್ದು ಮೊದಲು ಮಾಡಾಳಿನಿಂದ ಬಂದ ಕುಟುಂಬ 1926ರಲ್ಲಿ ದೇವಾಲಯವನ್ನು ಕಲ್ಲಿನಿಂದ ನಿರ್ಮಿಸಿದೆ. ಈಗ ಗ್ರಾಮಸ್ಥರ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಸುಮಾರು 65 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು ದೇವಾಲಯದಲ್ಲಿ ಆಂಜನೇಯ ಸ್ವಾಮಿ, ರಂಗನಾಥ ಸ್ವಾಮಿ ಮತ್ತು ಶನೇಶ್ವರ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ. ಮುಂಭಾಗದಲ್ಲಿ ಗರುಡುಗಂಭದೊಂದಿಗೆ ನವಗ್ರಹ ದೇವತೆಗಳನ್ನು ಸಹ ಸ್ಥಾಪಿಸಲಾಗಿದೆ ಎಂದರು

ಶಾಸಕ ಬೆಳ್ಳಿ ಪ್ರಕಾಶ್‌ ಮಾತನಾಡಿ, ದೇವರನ್ನು ನಂಬಿ ಕೆಟ್ಟವರಿಲ್ಲ, ಒಳ್ಳೆ ಗುಣವಿರುವ ಗುಣಸಾಗರದ ಜನ ಇಂತಹ ದೇವಾಲಯವನ್ನು ನಿರ್ಮಿಸಿ ಮಾದರಿಯಾಗಿದ್ದಾರೆ ಎಂದರು.

ಹಳೇಬೀಡಿನ ಪುಷ್ಪಗಿರಿ ಸಂಸ್ಥಾನದ ಶ್ರೀಗಳಾದ ಶ್ರೀ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಂಜನೇಯ ಸ್ವಾಮಿ ದೇವಾಲಯವೆಂದರೆ ಸತ್ಯ, ನಿಷ್ಠೆ, ಕಾಯಕದ ಪ್ರತೀಕ ಇಂದು ಮನುಷ್ಯ ಮನುಷ್ಯರಲ್ಲಿ ನಂಬಿಕೆಯಿಲ್ಲ. ವಸ್ತುವಿಗೆ ಕೊಡುವ ಬೆಲೆ ಮನುಷ್ಯನಿಗಿಲ್ಲ. ಇಂದು ಎಲ್ಲಾ ಪದವಿಗಳನ್ನು ತೆಗೆದುಕೊಂಡರೂ ಮನೆಯಲ್ಲಿ ಶಾಂತಿಯಿಲ್ಲ. ರಾಜಕೀಯ ದೊಂಬರಾಟದಲ್ಲಿ ಗ್ರಾಮ ಗ್ರಾಮಗಳ ಮಧ್ಯೆ ವೈಶಮ್ಯ ಹೆಚ್ಚಾಗಿ ಗ್ರಾಮಗಳ ಅಬಿವೃದ್ಧಿ ಕುಂಟಿತವಾಗಿದೆ ಎಂದರು.

ಸಾನಿಧ್ಯವನ್ನು ಯಳನಾಡು ಮಠದ ಶ್ರೀಗಳಾದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮಿಜಿ,ಕೋಳಗುಂದ ಕೇದಿಗೆರೆ ಮಠದ ಶ್ರೀ ಜಯಚಂದ್ರ ಸ್ವಾಮೀಜಿ ಮಾತನಾಡಿದರು.

ಈ ಸಂದರ್ಭ ವಿದಾನ ಪರಿಷತ್‌ ಸದಸ್ಯ ಎಂ ಕೆ ಪ್ರಾಣೇಶ್‌, ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಉಪಾದ್ಯಕ್ಷ ಆನಂದಪ್ಪ, ಸದಸ್ಯರಾದ ವಿಜಯಕುಮಾರ್‌ ಮಾತನಾಡಿದರು.ತಾಪಂ ಸದಸ್ಯ ಜಿಗಣೆಹಳ್ಳಿ ಮಂಜು , ನಾಗರಾಳು ಗ್ರಾಪಂ ಅಧ್ಯಕ್ಷೆ ಕುಮಾರಿಮಹೇದ್ರ ಸದಸ್ಯರಾದ ಆಶಾವಿಜಯಕುಮಾರ್‌. ನಳೀನಾಮೂರ್ತಿ, ಮನೋರಂಜನಿ ರಮೇಶ್‌ ಗ್ರಾಮಸ್ಥರು ಭಾಗವಹಿಸಿದ್ದರು. ವಸಂತ ಕುಮಾರ್‌ ಸ್ವಾಗತಿಸಿ ಉದಯಕುಮಾರ್‌ ನಿರೂಪಿಸಿ ಮಧು ವಂದಿಸಿದರು .


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ