ಆ್ಯಪ್ನಗರ

ಅರಣ್ಯ ರಕ್ಷ ಕನ ಮೇಲೆ ಅಧಿಕಾರಿ ಹಲ್ಲೆ

ಕಡತವೊಂದಕ್ಕೆ ಸಹಿ ಹಾಕುವಂತೆ ಪೀಡಿಸಿ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಅರಣ್ಯ ರಕ್ಷ ಕನಿಗೆ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Vijaya Karnataka 15 Feb 2019, 5:00 am
ಕಳಸ (ಚಿಕ್ಕಮಗಳೂರು): ಕಡತವೊಂದಕ್ಕೆ ಸಹಿ ಹಾಕುವಂತೆ ಪೀಡಿಸಿ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಅರಣ್ಯ ರಕ್ಷ ಕನಿಗೆ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Vijaya Karnataka Web CKM-14KLS1


ಕಳಸ ಅರಣ್ಯ ಇಲಾಖೆ ಬಾಳೆಹೊಳೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಎಂ.ವೀರಭದ್ರ ಎಂಬುವವರು ಅರಣ್ಯ ರಕ್ಷಕ ಕೀರ್ತನ್‌ ಅವರನ್ನು ಕಡತಕ್ಕೆ ಸಹಿ ಹಾಕುವಂತೆ ಬಲವಂತ ಮಾಡುತ್ತಿರುವುದು ಹಾಗೂ ಕೈ ದೂಡುತ್ತಿರುವುದು ವಿಡಿಯೊದಲ್ಲಿ ಬಹಿರಂಗವಾಗಿದೆ. ಕಳಸ ಅರಣ್ಯ ಇಲಾಖೆ ಕಚೇರಿಯ ಕೊಠಡಿಯಲ್ಲೇ ಈ ಘಟನೆ ನಡೆದಿದೆ.

ಸರಕಾರಿ ಜಮೀನು ಅಕ್ರಮ ಸಕ್ರಮ ಕುರಿತು 94ಸಿ ಪ್ರಕರಣದಡಿ ಇಲಾಖೆ ಅಭಿಪ್ರಾಯಗಳ ಕುರಿತ ಪಂಚನಾಮೆ, ನಾಕಾಶೆಗಳನ್ನು ಹಿರಿಯ ಅರಣ್ಯ ಅಧಿಕಾರಿ ತಾವೇ ತಯಾರಿಸಿ, ದಾಖಲೆಗಳನ್ನು ಮುಚ್ಚಿಟ್ಟು ಅರಣ್ಯ ರಕ್ಷ ಕ, ತೋಟದೂರ್‌ ಬೀಟ್‌ ಬಾಳೆಹೊಳೆ ಶಾಖೆಯ ಕೀರ್ತನ್‌ ಅವರಿಗೆ ಸಹಿ ಮಾಡಲು ಒತ್ತಾಯಿಸಿದ್ದಾರೆ. ಆದರೆ ಕಡತಗಳನ್ನು ನೋಡದೆ ಅದಕ್ಕೆ ಸಹಿ ಹಾಕಲು ಅರಣ್ಯ ರಕ್ಷ ಕ ಒಪ್ಪಿಲ್ಲ. ಅರಣ್ಯಾಧಿಕಾರಿಯವರು, ಕಡತಗಳನ್ನಿಟ್ಟು ಕೀರ್ತನ್‌ಗೆ ಸಹಿ ಹಾಕುವಂತೆ ಪೀಡಿಸಿ, ಹಲ್ಲೆ ಮಾಡುತ್ತಿರುವುದು ವಿಡಿಯೊದಲ್ಲಿದೆ. ಈ ಪ್ರಕರಣ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ