ಆ್ಯಪ್ನಗರ

ಸಮ್ಮೇಳನಾಧ್ಯಕ್ಷ ರಿಗೆ ಅಧಿಕೃತ ಆಹ್ವಾನ

ಕೊಪ್ಪ ತಾಲೂಕಿನ ಕಮ್ಮರಡಿಯಲ್ಲಿ ಜ. 12, 13 ರಂದು ನಡೆಯಲಿರುವ ಒಂಭತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿ ಖ್ಯಾತ ನುಡಿಚಿತ್ರ ಸಂಗ್ರಾಹಕ ಜಯಪುರದ ಶಂ.ನ.ಶೇಷಗಿರಿ ಸರ್ವಾನುಮತದಿಂದ ಆಯ್ಕೆಯಾಗಿದ್ದು, ತಾಲೂಕು ಕಸಾಪ ವತಿಯಿಂದ ಶುಕ್ರವಾರ ಅಧಿಕೃತ ಆಹ್ವಾನ ನೀಡಲಾಯಿತು.

Vijaya Karnataka 15 Dec 2018, 5:00 am
ಜಯಪುರ :ಕೊಪ್ಪ ತಾಲೂಕಿನ ಕಮ್ಮರಡಿಯಲ್ಲಿ ಜ. 12, 13 ರಂದು ನಡೆಯಲಿರುವ ಒಂಭತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿ ಖ್ಯಾತ ನುಡಿಚಿತ್ರ ಸಂಗ್ರಾಹಕ ಜಯಪುರದ ಶಂ.ನ.ಶೇಷಗಿರಿ ಸರ್ವಾನುಮತದಿಂದ ಆಯ್ಕೆಯಾಗಿದ್ದು, ತಾಲೂಕು ಕಸಾಪ ವತಿಯಿಂದ ಶುಕ್ರವಾರ ಅಧಿಕೃತ ಆಹ್ವಾನ ನೀಡಲಾಯಿತು.
Vijaya Karnataka Web CKM-14jpr1


ಕಸಾಪ ತಾಲೂಕು ನಿಕಟ ಪೂರ್ವ ಅಧ್ಯಕ್ಷ ಜಿ.ಎಸ್‌.ನಟರಾಜ್‌ ಮಾತನಾಡಿ, ಕನ್ನಡ ನಾಡು, ನುಡಿಯ ಬಗ್ಗೆ ಶೇಷಗಿರಿಯವರು ಪ್ರತಿಫಲಾಪೇಕ್ಷೆ ಬಯಸದೆ ಸಲ್ಲಿಸಿದ ಸೇವೆ ಇತರರಿಗೆ ಮಾದರಿ. ಹೆಚ್ಚು ಚರ್ಚೆಗಳೇ ನಡೆಯದೆ ಇವರ ಆಯ್ಕೆಗೆ ಸಮ್ಮತಿ ದೊರೆತಿರುವುದು ಸಾಧನೆಗೆ ಸಿಕ್ಕ ಜಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಎಸ್‌.ಎನ್‌.ರಾಮಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಇನೇಶ್‌, ಪತ್ರಕರ್ತ ಎಚ್‌.ಎಂ.ರವಿಕಾಂತ್‌ ಮಾತನಾಡಿದರು.

ಪರಿಷತ್ತಿನ ತಾಲೂಕು ಕಾರ್ಯದರ್ಶಿಗಳಾದ ಅಣ್ಣಯ್ಯ, ಜಗದೀಶ್‌, ಕೋಶಾಧ್ಯಕ್ಷ ಎಂ.ಆರ್‌.ರಮೇಶ್‌, ಮೇಗುಂದಾ ಹೋಬಳಿ ಘಟಕದ ಅಧ್ಯಕ್ಷ ಬಿ.ಎಸ್‌.ವಿವೇಕಾನಂದ ರಾವ್‌, ಸದಸ್ಯ ಶಬರೀಶ್‌, ಹರಿಹರಪುರ ಹೋಬಳಿ ಘಟಕದ ಅಧ್ಯಕ್ಷ ದುರ್ಗೇಶ್‌, ಸಹಕಾರ ಸಾರಿಗೆ ಸಂಸ್ಥೆ ಅಧ್ಯಕ್ಷ ಧರ್ಮಪ್ಪ, ಕಸಾಪ ಜಿಲ್ಲಾ ಸಂಚಾಲಕ ನೆ.ಲ.ಸುಬ್ರಹ್ಮಣ್ಯ, ಜಯಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ.ರಾಜೇಂದ್ರ, ತಾ.ಪಂ. ಸದಸ್ಯ ಕಿರಣ್‌ ಮತ್ತಿತರರು ಉಪಸ್ಥಿತರಿದ್ದರು.

ಕಣ್ಣಾಲಿಗಳಲ್ಲಿ ನೀರು : ಶಂ.ನ. ಶೇಷಗಿರಿ ದಂಪತಿಗಳನ್ನು ಗೌರವಿಸಿ, ಆಹ್ವಾನಿಸಿದ ಬಳಿಕ ಅನಿಸಿಕೆ ವ್ಯಕ್ತಪಡಿಸಲು ಕೋರಿಕೊಂಡಾಗ, ಶೇಷಗಿರಿಯವರು ಕ್ಷ ಣಕಾಲ ಭಾವುಕರಾಗಿ ಮಾತನಾಡಲಾಗದೆ ಮೌನಕ್ಕೆ ಶರಣಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ