ಆ್ಯಪ್ನಗರ

ಮತ್ತೆ ಎದುರಾದ ಒಂಟಿ ಸಲಗ..!

ತರೀಕೆರೆ ತಾಲೂಕಿನ ಸಂತೆವೇರಿ ಸುತ್ತಮುತ್ತ ಬೀಡುಬಿಟ್ಟಿರುವ ಒಂಟಿ ಸಲಗ, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಆಗಾಗ್ಗೆ ಎದುರಾಗುತ್ತಿದೆ. ಇತ್ತೀಚೆಗೆ ರಸ್ತೆ ಮಧ್ಯೆ ವಿರಾಜಮಾನವಾಗಿ ಬರುತ್ತಿದ್ದ ಸಲಗನ ನೋಡಿದ ಬೈಕ್‌ ಸವಾರರು ತಕ್ಷಣ ವಾಹನ ತಿರುಗಿಸಿಕೊಂಡು ಸಾಗಿ ಬಚಾವಾಗಿದ್ದಾರೆ.

Vijaya Karnataka 27 May 2019, 5:00 am
ಚಿಕ್ಕಮಗಳೂರು : ತರೀಕೆರೆ ತಾಲೂಕಿನ ಸಂತೆವೇರಿ ಸುತ್ತಮುತ್ತ ಬೀಡುಬಿಟ್ಟಿರುವ ಒಂಟಿ ಸಲಗ, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಆಗಾಗ್ಗೆ ಎದುರಾಗುತ್ತಿದೆ. ಇತ್ತೀಚೆಗೆ ರಸ್ತೆ ಮಧ್ಯೆ ವಿರಾಜಮಾನವಾಗಿ ಬರುತ್ತಿದ್ದ ಸಲಗನ ನೋಡಿದ ಬೈಕ್‌ ಸವಾರರು ತಕ್ಷಣ ವಾಹನ ತಿರುಗಿಸಿಕೊಂಡು ಸಾಗಿ ಬಚಾವಾಗಿದ್ದಾರೆ.
Vijaya Karnataka Web CKM-26RUDRAP7


ತರೀಕೆರೆಗೆ ತೆರಳುತ್ತಿದ್ದ ಬೈಕ್‌ ಸವಾರರು ದೂರದಲ್ಲಿ ಆನೆ ಬರುತ್ತಿರುವುದನ್ನು ನೋಡಿದ ತಕ್ಷಣ ಬೈಕ್‌ ತಿರುಗಿಸಿಕೊಂಡು ಜೀವಭಯದಿಂದ ಹಿಂದಕ್ಕೋಡಿ ತಪ್ಪಿಸಿಕೊಂಡಿದ್ದಾರೆ. ಸಂತೆವೇರಿ ರಸ್ತೆ ಅನೇಕ ತಿರುವಿನಿಂದ ಕೂಡಿದ್ದು, ವಿಶಾಲ ಅರಣ್ಯ ಪ್ರದೇಶವಾಗಿರುವುದರಿಂದ ಒಂಟಿ ಸಲಗ ಎಲ್ಲಿರುತ್ತೆ, ಯಾವ ವೇಳೆ ದಾಳಿ ಮಾಡಲಿದೆ ಎಂಬುದನ್ನು ಊಹಿಸಲೂ ಅಸಾಧ್ಯವಾಗಿದೆ. ಹಗಲಿರಲಿ , ರಾತ್ರಿ ಇರಲಿ ಈ ರಸ್ತೆಯಲ್ಲಿ ಜೀವ ಬಿಗಿಹಿಡಿದು ಓಡಾಡಬೇಕಿದೆ. ದ್ವಿಚಕ್ರ ವಾಹನಗಳಾದರೆ ಕೂಡಲೇ ತಿರುಗಿಸಿಕೊಂಡು ಹೋಗಬಹುದು. ಘಾಟಿ ರಸ್ತೆಯಲ್ಲಿ ನಾಲ್ಕು ಚಕ್ರ ವಾಹನಗಳನ್ನು ತಿರುಗಿಸುವುದಾದರೂ ಹೇಗೆ ಎಂಬ ಭಯ ಚಾಲಕರನ್ನು ಕಾಡುತ್ತಿದೆ. ಅರಣ್ಯ ಇಲಾಖೆ ಕೂಡಲೇ ಕ್ರಮಕೈಗೊಂಡು ಸಲಗವನ್ನು ಕಾಡಿಗೆ ಅಟ್ಟಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇದೇ ಜಾಗದಲ್ಲಿ ಇತ್ತೀಚೆಗೆ ಸರಕಾರಿ ಬಸ್‌ನ ಚಾಲಕ ಆನೆ ಕಂಡು ಬಸ್ಸನ್ನು 1 ಕಿ.ಮೀ. ಹಿಮ್ಮುಖವಾಗಿ ಚಲಿಸಿ ಪ್ರಯಾಣಿಕರನ್ನು ಪಾರು ಮಾಡಿದ್ದರು. ಇದೇ ಜಾಗದಲ್ಲಿ ಹಣ್ಣಿನ ಲಾರಿಯನ್ನು ಅಡ್ಡಗಟ್ಟಿದ್ದ ಒಂಟಿ ಸಲಗ, ಹಣ್ಣನ್ನು ತಿಂದು ಟೆಂಪೊವನ್ನು ರಸ್ತೆ ಬದಿಗೆ ನೂಕಿತ್ತು. ಹೀಗೆ ಅನೇಕ ವಾಹನ ಸವಾರರು ಆನೆ ಕಂಡು ಭಯಭೀತರಾಗಿ ಓಡಿ ಹೋಗಿರುವ ಘಟನೆಗಳು ಸಾಕಷ್ಟಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ