ಚಿಕ್ಕಮಗಳೂರು: ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಇದೀಗ ಜಿಲ್ಲೆಗಳಲ್ಲೂ ತನ್ನ ಕಬಂಧಬಾಹು ಚಾಚಿದೆ. ಇದೀಗ ಕಾಫಿನಾಡಿನಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಗೌರಿ ಕಾಲುವೆ ನಿವಾಸಿಯಾಗಿರುವ 56 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದಾಗಿ ಸಾವನಪ್ಪಿದ್ದಾರೆ.
ಅಸ್ತಮಾ ಸೇರಿದಂತೆ ವಿವಿಧ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಜು.13ರಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿಯೇ ಅವರು ಸಾವನಪ್ಪಿದ್ದಾರೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಸಾವಿನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ದಿನ ನಿತ್ಯ ಕೊರೊನಾ ಕೇಸ್ ದೃಢಪಡುತ್ತಲೇ ಇದೆ. ನಿನ್ನೆ ಒಟ್ಟು 10 ಮಂದಿಗೆ ಕೊರೊನಾ ಸೋಂಕು ತಗಲುವ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 154ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಕೊರೊನಾದಿಂದಾಗಿ ಸಾವನಪ್ಪುವವರ ಪೈಕಿ ಹೆಚ್ಚಿನವರು ತಡವಾಗಿ ಆಸ್ಪತ್ರೆಗೆ ದಾಖಲಾಗುವುದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕೋವಿಡ್ ಸಂಕಷ್ಟದಲ್ಲಿ ಶಿಕ್ಷಕನ ಕೈಹಿಡಿದ ಕೃಷಿ, ಕುರಿ ಮೇಯಿಸುವುದರಲ್ಲೂ ಖುಷಿ
ಕೊರೊನಾ ಲಕ್ಷಣಗಳಿದ್ದರು ಟೆಸ್ಟ್ ಮಾಡದೆ ನಿರ್ಲಕ್ಷ್ಯ ತೋರುವುದು. ಒಂದೇ ಸಲ ಸೋಂಕಿನ ಲಕ್ಷಣ ಜಾಸ್ತಿಯಾದಾಗ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ . ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನಪ್ಪುತ್ತಿದ್ದಾರೆ ಎನ್ನುವ ವಾದವೂ ನಡೆಯುತ್ತಿದೆ.
ಅಸ್ತಮಾ ಸೇರಿದಂತೆ ವಿವಿಧ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಜು.13ರಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿಯೇ ಅವರು ಸಾವನಪ್ಪಿದ್ದಾರೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಸಾವಿನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ದಿನ ನಿತ್ಯ ಕೊರೊನಾ ಕೇಸ್ ದೃಢಪಡುತ್ತಲೇ ಇದೆ. ನಿನ್ನೆ ಒಟ್ಟು 10 ಮಂದಿಗೆ ಕೊರೊನಾ ಸೋಂಕು ತಗಲುವ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 154ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಕೊರೊನಾದಿಂದಾಗಿ ಸಾವನಪ್ಪುವವರ ಪೈಕಿ ಹೆಚ್ಚಿನವರು ತಡವಾಗಿ ಆಸ್ಪತ್ರೆಗೆ ದಾಖಲಾಗುವುದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕೋವಿಡ್ ಸಂಕಷ್ಟದಲ್ಲಿ ಶಿಕ್ಷಕನ ಕೈಹಿಡಿದ ಕೃಷಿ, ಕುರಿ ಮೇಯಿಸುವುದರಲ್ಲೂ ಖುಷಿ
ಕೊರೊನಾ ಲಕ್ಷಣಗಳಿದ್ದರು ಟೆಸ್ಟ್ ಮಾಡದೆ ನಿರ್ಲಕ್ಷ್ಯ ತೋರುವುದು. ಒಂದೇ ಸಲ ಸೋಂಕಿನ ಲಕ್ಷಣ ಜಾಸ್ತಿಯಾದಾಗ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ . ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನಪ್ಪುತ್ತಿದ್ದಾರೆ ಎನ್ನುವ ವಾದವೂ ನಡೆಯುತ್ತಿದೆ.