ಆ್ಯಪ್ನಗರ

ಸರಕಾರದ ಯೋಜನೆ ಮಾಹಿತಿಯಿದ್ದಾಗ ಮಾತ್ರ ಯಶಸ್ಸು

ಸರಕಾರದ ವಿವಿಧ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಯ ಸಮಗ್ರ ಮಾಹಿತಿ ಹೋದಿದಾಗ ಮಾತ್ರ ಜನಪ್ರತಿನಿಧಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

Vijaya Karnataka 21 Jul 2018, 5:00 am
ಕೊಪ್ಪ : ಸರಕಾರದ ವಿವಿಧ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಯ ಸಮಗ್ರ ಮಾಹಿತಿ ಹೋದಿದಾಗ ಮಾತ್ರ ಜನಪ್ರತಿನಿಧಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
Vijaya Karnataka Web CKM-20KPH2


ಪುರಭವನದಲ್ಲಿ ಶುಕ್ರವಾರ ಜಿ.ಪಂ. ಮತ್ತು ತಾ.ಪಂ.ವತಿಯಿಂದ ಆಯೋಜಿಸಿದ್ದ ಜನಪ್ರತಿನಿಧಿಗಳಿಗೆ ವಿವಿಧ ಇಲಾಖೆ ಕಾರ್ಯಕ್ರಮ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಆಯ್ಕೆಯಾದವರಿಗೆ ಪಕ್ಷ ದ ಚಿಹ್ನೆಯಿಲ್ಲ. ಆದ್ದರಿಂದ ಅವರು ತಾ.ಪಂ., ಜಿ.ಪಂ. ಸದಸ್ಯರೊಡನೆ ಸಮನ್ವಯತೆ ಕಾಯ್ದುಕೊಂಡು ವಿವಿಧ ಇಲಾಖೆ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಅವರು ಪಕ್ಷಾತೀತವಾಗಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿ, ಜಾರಿಗೊಳಿಸಬೇಕು. ಗ್ರಾ.ಪಂ.ಮಟ್ಟದಲ್ಲಿ ನಿವೇಶನ ಹಂಚಿಕೆ ಬಗ್ಗೆ ಮಾಡಬೇಕಿರುವ ಕಾನೂನಾತ್ಮಕ ಬದಲಾವಣೆ ಮಾಹಿತಿ ನೀಡಿದಲ್ಲಿ ಸದನದಲ್ಲಿ ಚರ್ಚಿಸುತ್ತೇನೆ ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಜಿ.ಪಂ.ಅಧ್ಯಕ್ಷೆ ಸುಜಾತ ಮಾತನಾಡಿ, ಅಗತ್ಯ ಮಾಹಿತಿ ಹೊಂದಿದಾಗ ಮಾತ್ರ ಸಮರ್ಪಕ ಉತ್ತರ ಮತ್ತು ಅನುಷ್ಠಾನ ಸಾಧ್ಯ ಎಂದರು.

ಜಿ.ಪಂ.ಸದಸ್ಯ ಎಸ್‌.ಎನ್‌.ರಾಮಸ್ವಾಮಿ ಮಾತನಾಡಿ, ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೆ ಒಂದು ಹೆಸರಿದೆ. ನರೇಗಾ ಮಾನದಂಡದಂತೆ ಇಲ್ಲಿ ಅಭಿವೃದ್ಧಿ ಸಾಧಿಸಲು ಕಷ್ಟವಾಗುತ್ತದೆ. ಆದ್ದರಿಂದ ಯೋಜನೆ ಅನುಷ್ಠಾನ ಮಾಡುವಾಗ ಇಂತಹ ವಿಷಯ ಗಮನಿಸಬೇಕು ಮತ್ತು ಸಮಗ್ರವಾಗಿ ತಿಳಿದಿರಬೇಕು ಎಂದರು.

ತಾ.ಪಂ.ಅಧ್ಯಕ್ಷೆ ಜಯಂತಿ ಅಧ್ಯಕ್ಷ ತೆ ವಹಿಸಿದ್ದರು.

ಜಿ.ಪಂ.ಉಪಾಧ್ಯಕ್ಷ ಆನಂದಪ್ಪ, ಸದಸ್ಯೆ ದಿವ್ಯಾ, ತಾ.ಪಂ.ಉಪಾಧ್ಯಕ್ಷೆ ಲಲಿತಾ, ಸದಸ್ಯೆ ಭವಾನಿ ಹೆಬ್ಬಾರ್‌, ಕಿರಣ್‌, ಜಿ.ಪಂ.ಉಪಕಾರ್ಯದರ್ಶಿ ರಾಜಗೋಪಾಲ್‌, ಯೋಜನಾ ನಿರ್ದೇಶಕ ವಿಠಲ್‌, ಇಒ ಸುಬ್ರಹ್ಮಣ್ಯ ಮತ್ತಿತರರು ಹಾಜರಿದ್ದರು.

ಕಾರ್ಯಾಗಾರದಲ್ಲಿ ನರೇಗಾ, ವಸತಿ ಯೋಜನೆ, ಸ್ವಚ್ಛ್‌ ಭಾರತ ಮಿಷನ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷ ಣ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನಾ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಗ್ರಾಮೀಣ ಕೈಗಾರಿಕೆ, ರೇಶ್ಮೆ, ಕೈಮಗ್ಗ ಮತ್ತು ಜವಳಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತಿತರ ಇಲಾಖೆಯ ಸಮಗ್ರ ಮಾಹಿತಿ ಗಣಕ ಯಂತ್ರದ ಪರದೆ ಮೇಲೆ ನೀಡಲಾಯಿತು.

ಚೇತನ್‌ ಸ್ವಾಗತಿಸಿ, ಸ್ನೇಹ ನಿರೂಪಿಸಿದರು. ಮಹೇಶ್‌ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ