ಆ್ಯಪ್ನಗರ

ಅಬ್ಬರಕ್ಕೆ ತೆರೆ, ಇನ್ನೇನಿದ್ದರೂ ತೆರೆಮರೆ!

ವಿಧಾನಸಭೆ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ.

Vijaya Karnataka 11 May 2018, 5:00 am
ಚಿಕ್ಕಮಗಳೂರು : ವಿಧಾನಸಭೆ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ.
Vijaya Karnataka Web open to the bush look any further
ಅಬ್ಬರಕ್ಕೆ ತೆರೆ, ಇನ್ನೇನಿದ್ದರೂ ತೆರೆಮರೆ!


ಅಭ್ಯರ್ಥಿಗಳು ಹಾಗೂ ಕಾರ‍್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಕ್ಕೆ ಅವಕಾಶವಿದ್ದು, ತೆರೆಮರೆಯ ಚಟುವಟಿಕೆ ಚುರುಕುಗೊಳ್ಳುವ ಸಾಧ್ಯತೆ ಇದೆ.

ಚುನಾವಣೆ ಆಯೋಗ ವಿಧಿಸಿದ ಕಟ್ಟುಪಾಡುಗಳ ನಡುವೆಯೂ ರಾಜಕೀಯ ಪಕ್ಷಗಳು ಹಾಗೂ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರ ಮನಸ್ಸು ಗೆಲ್ಲಲು ಒಂದು ತಿಂಗಳ ಕಾಲ ಸಾಕಷ್ಟು ಸರ್ಕಸ್‌ ಮಾಡಿದ್ದರು. ಬಿರು ಬಿಸಿಲಲ್ಲೂ ಹಳ್ಳಿ ಹಳ್ಳಿಗಳಿಗೂ ತೆರಳಿ, ಗುಡ್ಡಬೆಟ್ಟ ಹತ್ತಿಳಿದು ಕೈ ಮುಗಿದು ವೋಟು ಕೇಳಿದ್ದರು.

ಪಾದಯಾತ್ರೆ, ರೋಡ್‌ ಷೋ, ರಾರ‍ಯಲಿ, ಎತ್ತಿನ ಗಾಡಿಗಳ ರಾರ‍ಯಲಿ, ಬೈಕ್‌ ರಾರ‍ಯಲಿ, ಬಹಿರಂಗ ಪ್ರಚಾರ ಸಭೆಗಳು, ವಾಹನಗಳಲ್ಲಿ ಧ್ವನಿವರ್ಧಕ ಅಳವಡಿಸಿ ಪ್ರಚಾರ, ಬಗೆ ಬಗೆಯ ಕರಪತ್ರಗಳು, ಕೈಪಿಡಿಗಳು, ವೈಯಕ್ತಿಕವಾಗಿ ಮನವಿ ಮಾಡುವ ಪತ್ರಗಳು... ಹೀಗೆ ಮತದಾರರನ್ನು ತಲುಪಲು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು, ಕಾರ‍್ಯಕರ್ತರು ಹಲವು ಪ್ರಯತ್ನಗಳನ್ನು ಮಾಡಿದ್ದಾರೆ.

ರಾಜ್ಯ,ರಾಷ್ಟ್ರ ಮಟ್ಟದ ನಾಯಕರು, ಸಿನೆಮಾ ನಟರು, ಕಲಾವಿದರನ್ನೂ ಕರೆತಂದು ಪ್ರಚಾರ ಮಾಡಿಸಿದ್ದು, ಮತದಾರರನ್ನು ಹೇಗೆಲ್ಲ ಒಲಿಸಿಕೊಳ್ಳಬಹುದು ಎಂಬುದನ್ನು ಅರಿತು ಸರ್ವಪ್ರಯತ್ನವನ್ನೂ ಮಾಡಿದ್ದಾರೆ. ಇಷ್ಟಾದರೂ ಮತದಾರರ ನಿಲುವೇನು ಎಂಬುದನ್ನು ಅರಿಯುವುದು ಅಭ್ಯರ್ಥಿಗಳಿಗೆ ಸಾಧ್ಯವಾಗಿಲ್ಲ.ರಾಷ್ಟ್ರ ಮಟ್ಟದ ನಾಯಕರು ಪ್ರಚಾರಕ್ಕೆ ಬಂದಾಗ ಸಹಸ್ರಾರು ಜನ ಸೇರಿದರೂ ಅವರೆಲ್ಲರೂ ತಮ್ಮದೇ ಪಕ್ಷಕ್ಕೆ ವೋಟು ಹಾಕುವ ಯಾವ ಖಾತ್ರಿಯೂ 'ಕರೆ ತಂದವರಿಗೆ' ಇಲ್ಲವಾಗಿದೆ. ಒಂದು ಪಕ್ಷಕ್ಕೆ ಬಂದವರೇ ಮತ್ತೊಂದು ಪಕ್ಷದ ಸಮಾವೇಶಕ್ಕೂ ಪ್ರೇಕ್ಷಕರಾಗಿದ್ದು ವಿಶೇಷ! ಹಾಗೆ ಸೇರುತ್ತಿದ್ದ ಸಹಸ್ರಾರು ಜನ ನಾಯಕರ ಭಾಷಣಕ್ಕೆ ಕಿವಿಗೊಟ್ಟಿದ್ದು ಅಷ್ಟಕ್ಕಷ್ಟೆ. ನಾಯಕರು ಆರ್ಭಟದ ಭಾಷಣ ಮಾಡುತ್ತಿದ್ದರೆ ಸೇರಿದ್ದ ಜನರ ಚಿತ್ತ 'ಮತ್ತೆಲ್ಲೋ' ಸುತ್ತುತ್ತಿತ್ತು.ಹೀಗಾಗಿ ಜನ ಸೇರಿಸಿದ ಮಾತ್ರಕ್ಕೆ ಗೆದ್ದೇ ಬಿಡುತ್ತೇವೆ ಎಂಬ ನಂಬಿಕೆ ಯಾವ ಪಕ್ಷದವರಿಗೂ ಇಲ್ಲವಾಗಿದೆ.

ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳೂ 'ಮತ್ತೊಂದು ಬಗೆಯ' ತಂತ್ರಗಾರಿಕೆಗೆ ಮುಂದಾಗುವ ಸಾಧ್ಯತೆ ಇದೆ. ಮನೆ ಮನೆಗೆ ತೆರಳಿ ಮತ ಯಾಚಿಸುವ ಜತೆಗೆ 'ರಾತ್ರಿ ಕಾರಾರ‍ಯಚರಣೆ' ವ್ಯಾಪಕವಾಗಲಿದ್ದು, ಫ್ಲೈಯಿಂಗ್‌ ಸ್ಕ್ವಾಡ್‌, ಪೊಲೀಸರು ಮುಂದಿನ 48 ಗಂಟೆ ಕಟ್ಟೆಚ್ಚರ ವಹಿಸುವ ಅನಿವಾರ‍್ಯತೆ ಇದೆ.

ಅಬ್ಬರದ ಪ್ರಚಾರಕ್ಕಿಂತ ತೆರೆ ಮರೆಯ ಪ್ರಚಾರವೇ ಹೆಚ್ಚು ಲಾಭ ತಂದು ಕೊಡುವ ನಂಬಿಕೆ ಇರುವ ಅಭ್ಯರ್ಥಿಗಳು ಅದಕ್ಕಾಗಿ ವ್ಯವಸ್ಥಿತ ನೆಟ್‌ವರ್ಕ್‌ ಮಾಡಿಕೊಂಡು ಜನರನ್ನು ತಲುಪುವ ಗುರಿ ಹೊಂದಿದ್ದಾರೆ. ಪಕ್ಷಗಳ ಪರ ಅಲೆಯೆಬ್ಬಿಸಲು ಬಂದಿದ್ದ ಸ್ಟಾರ್‌ ಪ್ರಚಾರಕರೆಲ್ಲ ಸ್ವಸ್ಥಾನಕ್ಕೆ ವಾಪಸ್ಸಾಗಿ ವಿಶ್ರಾಂತಿ ಪಡೆಯುವತ್ತ ಗಮನಹರಿಸಿದ್ದು, ಅಭ್ಯರ್ಥಿಗಳು ತಮ್ಮ ಮುಂದಿನ ಕಾರ‍್ಯತಂತ್ರ ರೂಪಿಸುತ್ತಿದ್ದಾರೆ.

---------------

1.59 ಲಕ್ಷ ನಗದು ವಶ

ಚಿಕ್ಕಮಗಳೂರು ತಾಲೂಕಿನ ಕುರುಬರಬೂದಿಹಾಳ್‌ (ಕೆ.ಬಿ.ಹಾಳ್‌)ನ ಚೆಕ್‌ಪೋಸ್ಟ್‌ನಲ್ಲಿ ಗುರುವಾರ 1.59 ಲಕ್ಷ ರೂ.ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಯಾರಿಗೆ ಸೇರಿದ ಹಣ ಎಂಬ ಬಗ್ಗೆ ತನಿಖೆಯನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ