ಆ್ಯಪ್ನಗರ

ಮೂರನೇ ದಿನವೂ ಯಶಸ್ಸು ಕಾಣದ ಆಪರೇಷನ್‌ ಪುಂಡಾನೆ

ಮಲೆಮನೆ ಮೇಗೂರಿನಲ್ಲಿ ಪುಂಡಾನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ, 3ನೇ ದಿನವಾದ ಸೋಮವಾರವೂ ಕೂಡ ಕಾರ್ಯಚರಣೆಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.

Vijaya Karnataka 11 Dec 2018, 5:00 am
ಕೊಟ್ಟಿಗೆಹಾರ : ಮಲೆಮನೆ ಮೇಗೂರಿನಲ್ಲಿ ಪುಂಡಾನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ, 3ನೇ ದಿನವಾದ ಸೋಮವಾರವೂ ಕೂಡ ಕಾರ್ಯಚರಣೆಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.
Vijaya Karnataka Web operation of forest officials
ಮೂರನೇ ದಿನವೂ ಯಶಸ್ಸು ಕಾಣದ ಆಪರೇಷನ್‌ ಪುಂಡಾನೆ


ಶನಿವಾರ ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ, ಅಂದು ಒಂಟಿ ಸಲಗ ಬೀಡು ಬಿಟ್ಟ ಪ್ರದೇಶವನ್ನು ಗುರುತಿಸಿ ಕಾರ್ಯಾಚರಣೆ ಆರಂಭಿಸಿತ್ತಾದರೂ ಒಂಟಿಸಲಗವೂ ಇಳಿಜಾರು ಮತ್ತು ದಟ್ಟ ಅರಣ್ಯದ ನಡುವೆ ಇರುವುದರಿಂದ ಸಾಕಾನೆಗಳು ಅರಣ್ಯದೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಭಾನುವಾರ ಮತ್ತು ಸೋಮವಾರ ಕಾರ್ಯಾಚರಣೆಗಿಳಿದ 2 ಸಾಕಾನೆಗಳಲ್ಲಿ ಗಂಡಾನೆ ರಂಗ ಮೇಗೂರು ಮಲೆಮನೆ ಭಾಗದ ಅರಣ್ಯ ಪ್ರದೇಶದಲ್ಲಿ ಮತ್ತು ಹೆಣ್ಣಾನೆ ಗಂಗೆ, ಆಲೇಕಾನ್‌ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಗಿಳಿದಿವೆ.

ಮೂರು ದಿನಗಳಿಂದ ಮಾವುತರು, ವೈದ್ಯರು, ಕಾವಾಡಿಗರು ಮತ್ತು ಅರಣ್ಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ದಟ್ಟ ಹಾಗೂ ಕಡಿದಾದ ಅರಣ್ಯ ಸವಾಲಾಗಿ ಪರಿಣಮಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ