ಆ್ಯಪ್ನಗರ

ಡೀಮ್ಡ್‌ ಫಾರೆಸ್ಟ್‌ ಸರ್ವೆಗೆ ವಿರೋಧ

ಸಾರ್ವಜನಿಕರಿಗೆ ಮಾಹಿತಿ ನೀಡಿ ನಂತರ ಡೀಮ್ಡ್‌ ಫಾರೆಸ್ಟ್‌ ಸರ್ವೆ ಕಾರ್ಯ ನಡೆಸಬೇಕು, ಅಲ್ಲಿವರೆಗೆ ಯಾವುದೇ ಕಾರಣಕ್ಕೂ ಸರ್ವೆಕಾರ್ಯ ನಡೆಸಬಾರದು ಎಂದು ಜೆಡಿಎಸ್‌ ಹೋಬಳಿ ಘಟಕ ಒತ್ತಾಯಿಸಿದೆ.

Vijaya Karnataka 11 May 2019, 5:00 am
ಕಳಸ : ಸಾರ್ವಜನಿಕರಿಗೆ ಮಾಹಿತಿ ನೀಡಿ ನಂತರ ಡೀಮ್ಡ್‌ ಫಾರೆಸ್ಟ್‌ ಸರ್ವೆ ಕಾರ್ಯ ನಡೆಸಬೇಕು, ಅಲ್ಲಿವರೆಗೆ ಯಾವುದೇ ಕಾರಣಕ್ಕೂ ಸರ್ವೆಕಾರ್ಯ ನಡೆಸಬಾರದು ಎಂದು ಜೆಡಿಎಸ್‌ ಹೋಬಳಿ ಘಟಕ ಒತ್ತಾಯಿಸಿದೆ.
Vijaya Karnataka Web CKM-10KLS1


ಶುಕ್ರವಾರ ಜೆಡಿಎಸ್‌ ಕಾರ್ಯಕರ್ತರು ಕಳಸ ನಾಡ ಕಚೇರಿಗೆ ತೆರಳಿ ಅಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್‌ ಹಾಗೂ ಉಪತಹಶಿಲ್ದಾರ್‌ ಜತೆ ಮಾತನಾಡಿದ ಜೆಡಿಎಸ್‌ ಮುಖಂಡರುಗಳು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಗ್ರಾಮಕ್ಕೆ ತೆರಳಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ.ಇಲ್ಲಿ ಗೋಮಾಳ ಪ್ರದೇಶವನ್ನೆಲ್ಲಾ ಅರಣ್ಯ ಇಲಾಖೆ ಡೀಮ್ಡ್‌ ಪಾರೆಸ್ಟ್‌ ಎಂದು ಸರ್ವೆ ಮಾಡುತ್ತಿದೆ.ಇದರಿಂದ ಅನೇಕ ಕುಟುಂಬಗಳಿಗೆ ತೊಂದರೆ ಆಗುತ್ತಿದೆ.ಈಗಾಗಲೇ ಇಲ್ಲಿ ಇನಾಂ ಭೂಮಿ ಸಮಸ್ಯೆಯಿಂದಲೇ ಹಲವಾರು ಕುಟುಂಬಗಳು ತೊಂದರೆ ಅನುಭವಿಸುತ್ತಿವೆ.ಇಲಾಖೆಗಳು ತಮಗೆ ಮನಬಂದಂತೆ ಸರ್ವೆ ನಡೆಸಿ ನಾಳೆ ಪಾಪದ ಕುಟುಂಬಗಳನ್ನು ಬೀದಿಗೆ ತಲ್ಲುವುದು ಬೇಡ.

ಎಷ್ಟೋ ಕುಟುಂಬಗಳು 94ಸಿ,53 ಗೆ ಅರ್ಜಿ ಸಲ್ಲಿಸಿ ದಾಖಲಾತಿಗಾಗಿ ಕಾಯುತ್ತಿದ್ದಾರೆ, ಅಂತವರಿಗೂ ತೊಂದರೆಯಾಗುತ್ತಿದೆ.ಬಡ ಕುಟುಂಬಗಳು ತಮ್ಮ ಜಿವನೋಪಯಾಕ್ಕಾಗಿ ಮಾಡಿರುವ ಭೂಮಿಯನ್ನು ಕೂಡ ಸರ್ವೆ ನಡೆಸುತ್ತಿದ್ದಾರೆ.ಜನರಿಗೆ ತೊಂದರೆ ಆದರೆ ನಾಳೆ ಯಾರಿಂದಲೂ ಪರಿಹಾರ ಕೊಡಲು ಸಾಧ್ಯವಿಲ್ಲ.ಸರಕಾರದ ಆದೇಶ ಎಂದು ನೀವು ಸರ್ವೆ ಕಾರ್ಯ ನಡೆಸಿದರೆ ನಾವು ಸುಮ್ಮನಿರುವುದಿಲ್ಲ.ಆದ್ದರಿಂದ ಕೂಡಲೇ ಸರ್ವೆ ಕಾರ್ಯವನ್ನು ನಿಲ್ಲಿಸಿ ಸಾರ್ವಜನಿಕ ಸಭೆಯನ್ನು ಕರೆದು ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ನೀಡಿ ನಂತರ ರೆವಿನ್ಯೂ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ತೆರಳಿ ಸರ್ವೆ ಕಾರ್ಯ ನಡೆಸಬೇಕು ಎಂದು ಕೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ರೆವಿನ್ಯೂ ಇನ್ಸ್‌ಪೆಕ್ಟರ್‌ ಅಜ್ಜೇಗೌಡ ಕೂಡಲೇ ನಾವು ಮೇಲಧಿಕಾರಿಗಳ ಗಮನಕ್ಕೆ ತಂದು ಕಳಸದಲ್ಲಿ ಸಭೆಯನ್ನು ಕರೆದು ಮಾಹಿತಿ ಕೊಡುತ್ತೇವೆ ಎಂದು ತಿಳಿಸಿದರು.ಅಲ್ಲದೆ ಇದೇ ಸಂದರ್ಭದಲ್ಲಿ ಕಳಸ ತಾಲ್ಲೂಕು ಕೇಂದ್ರವಾಗಿ ಘೋಷನೆಯಾಗಿರುವ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರದ ಕಟ್ಟಡಗಳು,ಇತರೆ ಇಲಾಖೆಗಳು ಕಳಸಕ್ಕೆ ಬರುವುದರಿಂದ ಕಳಸ ಪಟ್ಟಣಕ್ಕೆ ಹೊಂದಿಕೊಂಡಿರುವ ಮಾವಿನಕೆರೆ ಗ್ರಾಮದ ಸರ್ವೆ ನಂ 434,85,641 ರಲ್ಲಿ ಗೋಮಾಳ ಪ್ರದೇಶವನ್ನು ಡೀಮ್ಡ್‌ ಫಾರೆಸ್ಟ್‌ ಎಂದು ಪರಿಗಣಿಸದೆ ಕಂದಾಯ ಇಲಾಖೆಯಲ್ಲಿಯೇ ಮೀಸಲಿಡಬೇಕೆಂಬ ಮನವಿಯನ್ನು ಇಲಾಖೆಗೆ ಸಲ್ಲಿಸಲಾಯಿತು. ಜೆಡಿಎಸ್‌ ಮುಖಂಡ ಜಿ.ಕೆ.ಮಂಜಪ್ಪಯ್ಯ,ಮಹಮ್ಮದ್‌ ರಫೀಕ್‌,ಜ್ವಾಲನಯ್ಯ,ಬ್ರಹ್ಮದೇವ,ರವಿ ರೈ,ರುದ್ರಯ್ಯ ಆಚಾರ್‌,ಅವಿನಾಶ್‌,ಕೆ.ಜೆ ಧರಣೇಂದ್ರ,ಅನಿಲ್‌ ಡಿಸೋಜಾ,ಸದಾನಂದ ಭಟ್‌,ಸುಜಿತ್‌,ಪದ್ಮಪ್ರಸಾದ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ