ಆ್ಯಪ್ನಗರ

ಕಾಫಿ ತೋಟದಲ್ಲಿ ಟ್ರಂಚ್‌ಗೆ ವಿರೋಧ

ತಾಲೂಕಿನ ನುಗ್ಗಿ ಗ್ರಾ.ಪಂ.ಯ ಹೂವಿನ ಹೊಸೂರು ಗ್ರಾಮದಲ್ಲಿ ಕೃಷಿಕರೊಬ್ಬರ ಒತ್ತುವರಿ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ಟ್ರಂಚ್‌ ನಿರ್ಮಿಸಿದ್ದು, ಕೃಷಿ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ

Vijaya Karnataka 26 Apr 2019, 5:00 am
ಕೊಪ್ಪ: ತಾಲೂಕಿನ ನುಗ್ಗಿ ಗ್ರಾ.ಪಂ.ಯ ಹೂವಿನ ಹೊಸೂರು ಗ್ರಾಮದಲ್ಲಿ ಕೃಷಿಕರೊಬ್ಬರ ಒತ್ತುವರಿ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ಟ್ರಂಚ್‌ ನಿರ್ಮಿಸಿದ್ದು, ಕೃಷಿ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
Vijaya Karnataka Web ckm-25kph1


ಗಿಡ್ಡೇಗೌಡ ನಷ್ಟಕ್ಕೊಳಗಾದ ರೈತ.ಹೂವಿನ ಹೊಸೂರು ಗ್ರಾಮದ ಸರ್ವೆ ನಂ.59ರಲ್ಲಿ ಗಿಡ್ಡೇಗೌಡರ ಕುಟುಂಬ ಸುಮಾರು 1978ರಿಂದ ಒತ್ತುವರಿ ಮಾಡಿದ್ದ ಮುಕ್ಕಾಲು ಎಕರೆ ಜಾಗಕ್ಕೆ ಸಕ್ರಮಕ್ಕಾಗಿ ಅರ್ಜಿ ನೀಡುತ್ತಲೆ ಬಂದಿದೆ. 1992ರಲ್ಲಿ ಅರ್ಜಿ ಸಂಖ್ಯೆ 50, 53 ಪ್ರಸ್ತುತ 57ರಲ್ಲಿ ಅರ್ಜಿ ನೀಡಿದೆ. ಆದರೆ ಆಡಳಿತ ಅದನ್ನು ಪರಿಗಣಿಸಿಲ್ಲ ಎಂಬುದು ನಷ್ಟಕ್ಕೊಳಗಾದ ರೈತರ ಆರೋಪ.

ಇಲಾಖೆ ಸುಮಾರು 50 ಮೀ.ನಷ್ಟು ಉದ್ದ ಟ್ರೆಂಚ್‌ ಹೊಡೆದಿದ್ದು, 25ಕ್ಕೂ ಹೆಚ್ಚು ಕಾಫಿ ಗಿಡವನ್ನು ತೆರವು ಮಾಡಿದೆ. ಈ ಜಾಗವು ಮೀಸಲು ಅರಣ್ಯವಲ್ಲ. ಸರಕಾರಿ ಅರಣ್ಯವಲ್ಲ. ಇದು ಕಾಫಿ ಖರಾಬು ಪ್ರದೇಶವಾಗಿದೆ. ಇಲಾಖೆ ಸಿಬ್ಬಂದಿಯು ಇದನ್ನು ಸೆಕ್ಷ ನ್‌ 4ಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದ್ದರೆನ್ನಲಾಗಿದೆ. ಆದರೆ ಸೆಕ್ಷ ನ್‌ 4ರ ಜಾಗದ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಿದ್ದರೂ ಇಲಾಖೆ ಏಕಾಏಕಿ ಟ್ರಂಚ್‌ ನಿರ್ಮಿಸಿದ್ದು ದುರುದ್ದೇಶದಿಂದ ಕೂಡಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಸ್ಥಳಕ್ಕೆ ಭೇಟಿ : ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೊಸೂರು ದಿನೇಶ್‌, ನುಗ್ಗಿ ಗ್ರಾ.ಪಂ.ಅಧ್ಯಕ್ಷ ಜಗದೀಶ್‌ ಭೇಟಿ ನೀಡಿದರು. ಗ್ರಾಮಸ್ಥರಾದ ನಂದೀಶ್‌, ಕಾಂತರಾಜು, ಸುರೇಶ್‌, ಶಾಶ್ವತ್‌, ಸಂತೋಷ್‌, ವಿವೇಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ