ಆ್ಯಪ್ನಗರ

ಸಮುದಾಯ ಅಭಿವೃದ್ಧಿಗೆ ಸಂಘಟಿತರಾಗಿ

ಸಮುದಾಯದ ಅಭಿವೃದ್ಧಿಗೆ ಸಂಘಟನೆ ಅನಿವಾರ್ಯವಾಗಿದ್ದು ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಕೆ.ಪಿ.ರಾಜರತ್ನಂ ತಿಳಿಸಿದರು.

Vijaya Karnataka 12 Feb 2019, 5:00 am
ಬಾಳೆಹೊನ್ನೂರು: ಸಮುದಾಯದ ಅಭಿವೃದ್ಧಿಗೆ ಸಂಘಟನೆ ಅನಿವಾರ್ಯವಾಗಿದ್ದು ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಕೆ.ಪಿ.ರಾಜರತ್ನಂ ತಿಳಿಸಿದರು.
Vijaya Karnataka Web CKM-11BRR1


ಅವರು ಕರ್ಕೇಶ್ವರ ಗ್ರಾ.ಪಂ. ವ್ಯಾಪ್ತಿಯ ಮೇಲ್ಪಾಲ್‌ನಲ್ಲಿ ದಸಂಸ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಗ್ರಾಮ ಶಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದೀನದಲಿತರ ಉದ್ಧಾರಕ್ಕಾಗಿ ಸಂವಿಧಾನದಲ್ಲಿ ಹಲವಾರು ಮಾರ್ಗ ಸೂಚಿಗಳನ್ನು ಅಳವಡಿಸಿದ್ದರೂ ಸಹ ಅನುಷ್ಟಾನಗೊಳಿಸುವಲ್ಲಿ ಎಲ್ಲಾ ಸರಕಾರಗಳು ಜನಪ್ರತಿನಿಧಿಗಳು ವಿಫಲಗೊಂಡಿದ್ದಾರೆ. ಮೂಲ ಸೌಕರ್ಯ, ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಹೋರಾಡಬೇಕಾದ ಪರಿಸ್ಥಿತಿ ಉಂಟಾಗಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಸಮಿತಿ ಸಂಘಟನಾ ಸಂಚಾಲಕ ಕಡ್ಲೆಮಕ್ಕಿ ಕುಮಾರ್‌ ಮಾತನಾಡಿ, ಅಧಿಕಾರಿಗಳು ಹಕ್ಕು ಪತ್ರ ವಿತರಣೆ ವಿಳಂಬಮಾಡಿದಲ್ಲಿ ನಾಡಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಪುಟ್ಟಸ್ವಾಮಿ ಹಾದಳ್ಳಿ (ಜಿಲ್ಲಾ ಸಮಿತಿ ನೂತನ ಸಂಘಟನಾ ಸಂಚಾಲಕ), ಜ್ಯೋತಿ ಮೇಲ್ಪಾಲ್‌ (ಮಹಿಳಾ ಸಂಚಾಲಕಿ), ಬಿ.ದಿನೇಶ್‌ (ಎನ್‌.ಆರ್‌.ಪುರ ತಾಲೂಕು ಸಂಚಾಲಕ), ಶಿವಣ್ಣ ಮೇಲ್ಪಾಲ್‌ ಮತ್ತು ಪಾಪಣ್ಣ ಮೇಲ್ಪಾಲ್‌ (ಸಹ ಸಂಚಾಲಕ), ಶಂಕರ್‌ (ಗ್ರಾಮ ಶಾಖೆಯ ಸಂಚಾಲಕ), ಸಹ ಸಂಚಾಲಕರಾಗಿ ಮಂಜುನಾಥ್‌, ಸುರೇಶ್‌, ರತೀಶ್‌, ಸಂದೇಶ್‌, ರಮೇಶ್‌ ಆಯ್ಕೆಯಾಗಿದ್ದಾರೆ.

ಮೂಡಿಗೆರೆ ತಾಲೂಕು ನೂತನ ಸಂಚಾಲಕರಾಗಿ ಕೆ.ಮಂಜುನಾಥ್‌ ಹಾಗೂ ಕಳಸ ಸಂಚಾಲಕರಾಗಿ ಹೂವಯ್ಯ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತೆಂಗಿನಮನೆ ಸುರೇಶ್‌, ಜಿಲ್ಲಾ ವಿಭಾಗೀಯ ಸಂಚಾಲಕರಾದ ಸಂಜೀವ ಮೇಲ್ಪಾಲ್‌, ಕೊಪ್ಪ ತಾಲೂಕು ಸಂಚಾಲಕ ಗೋಪಾಲ್‌ ಹೊಸೂರು, ಮತ್ತು ಮೇಲ್ಪಾಲ್‌ ಗ್ರಾಮಸ್ಥರು ಮತ್ತು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ