ಆ್ಯಪ್ನಗರ

ಅತಿವೃಷ್ಟಿ ಪರಿಹಾರ, ತಾರತಮ್ಯ ನಿವಾರಣೆಗೆ ಆಗ್ರಹ

ಅತಿವೃಷ್ಟಿಯಿಂದ ಕಳೆದ ಬಾರಿ ಬೆಳೆಹಾನಿ ಅನುಭವಿಸಿದ ರೈತರಿಗೆ ಸರಕಾರದಿಂದ ಪರಿಹಾರ ಹಣ ಮಂಜೂರಾಗಿದ್ದು, ರೈತರ ಖಾತೆಗಳಿಗೆ ಹಣ ಜಮಾ ಆಗುತ್ತಿದೆ. ಆದರೆ ರೈತರಿಗೆ ಮಂಜೂರಾಗಿರುವ ಹಣದಲ್ಲಿ ತಾರತಮ್ಯ ಉಂಟಾಗಿದ್ದು ಒಬ್ಬೊಬ್ಬ ರೈತರಿಗೆ ಒಂದೊಂದು ರೀತಿಯಲ್ಲಿ ಹಣ ಬಿಡುಗಡೆಯಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಯವರು ಗಮನಹರಿಸಿ ಸರಿಪಡಿಸಿಕೊಡಬೇಕೆಂದು ಊರುಬಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಲಕ್ಷ ್ಮಣಕುಮಾರ್‌ ಆಗ್ರಹಿಸಿದ್ದಾರೆ.

Vijaya Karnataka 17 May 2019, 5:00 am
ಮೂಡಿಗೆರೆ : ಅತಿವೃಷ್ಟಿಯಿಂದ ಕಳೆದ ಬಾರಿ ಬೆಳೆಹಾನಿ ಅನುಭವಿಸಿದ ರೈತರಿಗೆ ಸರಕಾರದಿಂದ ಪರಿಹಾರ ಹಣ ಮಂಜೂರಾಗಿದ್ದು, ರೈತರ ಖಾತೆಗಳಿಗೆ ಹಣ ಜಮಾ ಆಗುತ್ತಿದೆ. ಆದರೆ ರೈತರಿಗೆ ಮಂಜೂರಾಗಿರುವ ಹಣದಲ್ಲಿ ತಾರತಮ್ಯ ಉಂಟಾಗಿದ್ದು ಒಬ್ಬೊಬ್ಬ ರೈತರಿಗೆ ಒಂದೊಂದು ರೀತಿಯಲ್ಲಿ ಹಣ ಬಿಡುಗಡೆಯಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಯವರು ಗಮನಹರಿಸಿ ಸರಿಪಡಿಸಿಕೊಡಬೇಕೆಂದು ಊರುಬಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಲಕ್ಷ ್ಮಣಕುಮಾರ್‌ ಆಗ್ರಹಿಸಿದ್ದಾರೆ.
Vijaya Karnataka Web over the counter compensation demand for discrimination
ಅತಿವೃಷ್ಟಿ ಪರಿಹಾರ, ತಾರತಮ್ಯ ನಿವಾರಣೆಗೆ ಆಗ್ರಹ


ಅವರು ಪತ್ರಿಕೆ ಹೇಳಿಕೆ ನೀಡಿದ್ದು, 2018ರಲ್ಲಿ ಸತತ ಮೂರು ತಿಂಗಳು ಎಡಬಿಡದೆ ಸುರಿದ ಮಳೆಯಿಂದ ಮಲೆನಾಡು ಭಾಗದಲ್ಲಿ ಬಹಳಷ್ಟು ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಚಿಕ್ಕಮಗಳೂರು ಜಿಲ್ಲೆಯ ಹಲವು ಗ್ರಾಮಗಳ ರೈತರಿಗೆ ಅತಿವೃಷ್ಟಿ ಪರಿಹಾರಕ್ಕೆ ಅರ್ಜಿಗಳನ್ನು ಆಹ್ವಾನಿಸಿತ್ತು. ಅದರಂತೆ ಸರಕಾರ ಅತಿವೃಷ್ಟಿ ಹಣವನ್ನು ಮಂಜೂರು ಮಾಡಿತ್ತು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಬಹಿಷ್ಕಾರದ ತೀರ್ಮಾನಕ್ಕೆ ಬಂದಾಗ ಜಿಲ್ಲಾಡಳಿತ ನೀಡಿದ್ದ ಭರವಸೆಯಂತೆ ಈಗ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತಿದೆ. ನಿಯಮ ಪ್ರಕಾರ ಪ್ರತಿ ಹೆಕ್ಟೇರ್‌ಗೆ 18 ಸಾವಿರದಂತೆ ಒಬ್ಬ ಖಾತೆದಾರನಿಗೆ ಗರಿಷ್ಟ 2 ಹೆಕ್ಟೇರ್‌ ವರೆಗೆ ಹಣ ಮಂಜೂರು ಮಾಡಲು ಅವಕಾಶವಿತ್ತು. ಆದರೆ ಈಗ ಬಿಡುಗಡೆಯಾಗಿರುವ ಅತಿವೃಷ್ಟಿ ಪರಿಹಾರದಲ್ಲಿ ಬಹಳಷ್ಟು ಗೊಂದಲ ಮತ್ತು ತಾರತಮ್ಯ ಕಂಡುಬಂದಿದೆ. ಒಂದೇ ಗ್ರಾಮದ ಬೇರೆ ಬೇರೆ ರೈತರಿಗೆ ಬಿಡುಗಡೆಯಾಗಿರುವ ಅತಿವೃಷ್ಟಿ ಮೊತ್ತದಲ್ಲಿ ಬಹಳಷ್ಟು ವ್ಯತ್ಯಾಸ ಇದೆ. ಕೆಲವರಿಗೆ ಕೇವಲ ಐನೂರು, ಸಾವಿರ ರೂಪಾಯಿ ಹಣ ಬಿಡುಗಡೆಯಾಗಿದೆ. ಯಾವ ರೈತರಿಗೂ ಗರಿಷ್ಟ ಮೊತ್ತದ ಹಣ ಬಿಡುಗಡೆ ಮಾಡಿಲ್ಲ. ಇದು ಯಾರ ತಪ್ಪನಿಂದ ಆಗಿದೆ ಎಂಬುದು ಗೊತ್ತಿಲ್ಲ. ಅಧಿಕಾರಿಗಳು ತೋರಿರುವ ಬೇಜಾಬ್ದಾರಿಯಿಂದ ಈ ಲೋಪ ಉಂಟಾಗಿದೆ. ಇದರಿಂದ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ನೂರಾರು ಅರ್ಹ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಿ ಪರಿಹಾರದಲ್ಲಿ ತಾರತಮ್ಯಕ್ಕೊಳಗಾಗಿರುವ ರೈತರಿಗೆ ಸರಿಯಾದ ಮತ್ತು ಅವರು ನ್ಯಾಯಯುತವಾಗಿ ಪಡೆಯಬೇಕಾಗಿದ್ದ ಪರಿಹಾರವನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ