ಆ್ಯಪ್ನಗರ

ಪರಿವಾರ ದೇವತೆಗಳ ಸುಗ್ಗಿಹಬ್ಬ

ಸಮೀಪದ ಶ್ರೀ ಕ್ಷೇತ್ರ ತುಪ್ಪೂರು ಶ್ರೀ ಬಿರೆಕಲ್ಲು ಭೂತೇಶ್ವರ ಸ್ವಾಮಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಮತ್ತು ಪರಿವಾರ ದೇವತೆಗಳ ವಾರ್ಷಿಕ ಸುಗ್ಗಿಹಬ್ಬ ಭಾನುವಾರ ವಿಜೃಂಭಣೆಯಿಂದ ಜರುಗಿತು.

Vijaya Karnataka 20 May 2019, 5:00 am
ಬಾಳೆಹೊನ್ನೂರು : ಸಮೀಪದ ಶ್ರೀ ಕ್ಷೇತ್ರ ತುಪ್ಪೂರು ಶ್ರೀ ಬಿರೆಕಲ್ಲು ಭೂತೇಶ್ವರ ಸ್ವಾಮಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಮತ್ತು ಪರಿವಾರ ದೇವತೆಗಳ ವಾರ್ಷಿಕ ಸುಗ್ಗಿಹಬ್ಬ ಭಾನುವಾರ ವಿಜೃಂಭಣೆಯಿಂದ ಜರುಗಿತು.
Vijaya Karnataka Web CKM-19bhr1


ಸುತ್ತಮುತ್ತಲ ಗ್ರಾಮಸ್ಥರು ಚೌತ'ವ್ರತ' ಪ್ರಾರಂಭಿಸಿ ಪ್ರಧಾನ ದೇವತೆಗಳಿಗೆ ಫಲಸಮರ್ಪಣೆ ಹಾಗೂ ವಿವಿಧÜ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಂಭ್ರಮದಿಂದ ದೇವರ ಉತ್ಸವ ಮೂರ್ತಿಯೊಂದಿಗೆ ಭಕ್ತರು ಸುಗ್ಗಿಕುಣಿದು ಹಣ್ಣು ಕಾಯಿ ಸಮರ್ಪಿಸಿ ಪ್ರಸಾದ ಸ್ವೀಕರಿಸಿದರು. ಹಾಗೂ ಆಗಮಿಸಿದ ಎಲ್ಲ ಭಕ್ತರಿಗೆಅನ್ನಸಂತರ್ಪಣೆ ನಡೆಯಿತು.

ಮೇಲ್ಪಾಲ್‌, ಕರ್ಕೇಶ್ವರಕೈಮರ, ಕುಂಜಳ್ಳಿ, ಸಿಗಸೆ, ಅರಳೀಕೊಪ್ಪ, ಹೂವಿನಹಕ್ಲು, ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ