ಆ್ಯಪ್ನಗರ

ಭುವನೇಂದ್ರ ಶಾಲೆಯಲ್ಲಿ ಹೆತ್ತವರ ಪಾದ ಪೂಜೆ

ನಗರದ ಭುವನೇಂದ್ರ ವಿದ್ಯಾಸಂಸ್ಥೆಯ ಶಾಲೆಯಲ್ಲಿಮಾತಾಪಿತರ ಪಾದಪೂಜೆ ಮತ್ತು ಮಾತೃಭೋಜನ ಹೃದಯಸ್ಪರ್ಶಿ ಕಾರ‍್ಯಕ್ರಮ ಬುಧವಾರ ನಡೆಯಿತು.

Vijaya Karnataka 13 Dec 2019, 5:00 am
ಚಿಕ್ಕಮಗಳೂರು : ನಗರದ ಭುವನೇಂದ್ರ ವಿದ್ಯಾಸಂಸ್ಥೆಯ ಶಾಲೆಯಲ್ಲಿಮಾತಾಪಿತರ ಪಾದಪೂಜೆ ಮತ್ತು ಮಾತೃಭೋಜನ ಹೃದಯಸ್ಪರ್ಶಿ ಕಾರ‍್ಯಕ್ರಮ ಬುಧವಾರ ನಡೆಯಿತು.
Vijaya Karnataka Web 12SHIVUP4_35


ಎಸ್‌ಎಸ್‌ಎಲ್‌ಸಿ ಯ ಸುಮಾರು 50ವಿದ್ಯಾರ್ಥಿಗಳು ಪೂಜಾ ಸಾಮಗ್ರಿಗಳೊಂದಿಗೆ ಶಾಲೆಗೆ ಬರುವಾಗ ತಂದೆ, ತಾಯಿಯನ್ನು ಕರೆ ತಂದಿದ್ದರು. ಸಾಮೂಹಿಕ ಪ್ರಾರ್ಥನೆ, ಶಾರದಾಮಾತೆಯ ಪೂಜೆಯ ನಂತರ ಪತಂಜಲಿ ಯೋಗಶಿಕ್ಷಣ ಪದಾಧಿಕಾರಿಗಳು ಈ ದಿನದ ಮಹತ್ವ ಮನವರಿಕೆ ಮಾಡಿಕೊಟ್ಟರು.ಮಾತಾ, ಪಿತರ ಕಾಲಬುಡದಲ್ಲಿಕುಳಿತ ವಿದ್ಯಾರ್ಥಿಗಳು ಅವರ ಪಾದಗಳನ್ನು ನೀರಿನಿಂದ ತೊಳೆದು ವಸ್ತ್ರದಿಂದ ಒರೆಸಿ, ಆ ಪಾದೋದಕವನ್ನು ತಮ್ಮ ತಲೆಯಮೇಲೆ ಭಕ್ತಿಯಿಂದ ಪ್ರೋಕ್ಷಿಸಿಕೊಂಡರು. ತಟ್ಟೆಯೊಳಗಿರಿಸಿದ ಪಾದಗಳಿಗೆ ಅರಿಶಿನ, ಕುಂಕುಮ, ವಿಭೂತಿ ಧರಿಸಿ ಹೂವು ಅಕ್ಷತೆಗಳಿಂದ ಅರ್ಚಿಸಿದರು. ಕರ್ಪೂರ, ತುಪ್ಪದ ದೀಪದಾರತಿಯಿಂದ ಬೆಳಗಿ ಪ್ರೀತಿ,ಗೌರವ,ಭಕ್ತಿಯಿಂದ ಹರಸುವಂತೆ ಸಾಷ್ಟಾಂಗ ನಮಸ್ಕಾರದೊಂದಿಗೆ ಪ್ರಾರ್ಥಿಸಿದರು. ಹಿರಿಯರು ತಲೆಯಮೇಲೆ ಪುಷ್ಪಾಕ್ಷತೆಯೊಂದಿಗೆ ಮನತುಂಬಿ ಹರಸಿದಾಗ ಹಲವರ ಕಣ್ಣಾಲಿಗಳು ತೇವಗೊಂಡವು.

ಆನಂತರ ತಾಯಂದಿರು ತಂದಿದ್ದ ವಿವಿಧ ಬಗೆಯ ಖಾದ್ಯಗಳನ್ನು ಕೈತುತ್ತಿನ ಮೂಲಕ ತಮ್ಮ ಮಕ್ಕಳಿಗೆ ಪ್ರೀತಿಯಿಂದ ನೀಡಿದರು. ಪತಂಜಲಿ ಯೋಗಶಿಕ್ಷಣ ಸಂಸ್ಥೆಯ ಜಿಲ್ಲಾಸಂಚಾಲಕ ಗೌತಮಪ್ರಭು, ಮಹಿಳಾಘಟಕದ ಪುಷ್ಪಾಮೋಹನ್‌ ಮಾತನಾಡಿದರು. ಪೋಷಕರು ತಮ್ಮ ಅನಿಸಿಕೆ ಹಂಚಿಕೊಂಡರು. ಭುವನೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಚ್‌.ನರೇಂದ್ರಪೈ, ಜ್ಯೋತಿಪೈ ಹಾಜರಿದ್ದರು.ಅನಿತಾಎನ್‌.ಪೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ದೇವರಾಜ್‌ ಸ್ವಾಗತಿಸಿ, ಶೈಲಜಾ ನಿರೂಪಿಸಿದರು. ಮುಖ್ಯಶಿಕ್ಷಕಿ ಜಮೀಲಾಖಾನಂ ವಂದಿಸಿ, ಮಮತಾಬಾಳಿಗ ಪ್ರಾರ್ಥಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ