ಆ್ಯಪ್ನಗರ

ನಾಳೆ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಪರ್ಜನ್ಯಜಪ

ಶ್ರೀ ಕ್ಷೇತ್ರ ಹೊರನಾಡಿನ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಡಿಗೆ ಉತ್ತಮ ಮಳೆಗಾಗಿ ಜಪ, ಹೋಮ, ಪ್ರಾರ್ಥನೆಯನ್ನು ಜು.6ರಿಂದ 8ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.

Vijaya Karnataka 5 Jul 2019, 5:00 am
ಮೂಡಿಗೆರೆ : ಶ್ರೀ ಕ್ಷೇತ್ರ ಹೊರನಾಡಿನ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಡಿಗೆ ಉತ್ತಮ ಮಳೆಗಾಗಿ ಜಪ, ಹೋಮ, ಪ್ರಾರ್ಥನೆಯನ್ನು ಜು.6ರಿಂದ 8ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
Vijaya Karnataka Web CKM-4MDG-P3 BHEEMESHWARA JOSHI


ಈ ವರ್ಷದ ಮಳೆ ಆರಂಭವು ಆತಂಕ ಸೃಷ್ಟಿಸಿದ್ದು, ಮಲೆನಾಡು ಭಾಗಕ್ಕೆ ಬರುವಂತಹ ಮಾರುತಗಳು ಉತ್ತರ ಕರ್ನಾಟಕ ಭಾಗದಲ್ಲಿ ಬಂದು ತೀವ್ರ ಹಾನಿಯನ್ನುಂಟು ಮಾಡುತ್ತಿದೆ. ಮಳೆಯು ಮಲೆನಾಡಿನಲ್ಲಿ ತೀವ್ರ ಕಾಡುತ್ತಿದ್ದು ಇಡೀ ರಾಜ್ಯಕ್ಕೆ ಡ್ಯಾಂಗಳಲ್ಲಿ ಸಿಗಬೇಕಾದ ನೀರಿನ ಸಂಗ್ರಹ ಇಲ್ಲದಂತಾಗಿದೆ. ಸರಕಾರ ಕೂಡ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಮೋಡ ಬಿತ್ತನೆ ಕಾರ್ಯಕ್ಕೆ ಕೈ ಹಾಕಿದ್ದರೂ ಮಳೆಯಾಗುತ್ತಿಲ್ಲ. ಈಗಾಗಲೇ ಉತ್ತಮ ಮಳೆಗಾಗಿ ಮಳೆಯ ಅಧಿದೇವತೆ ಕಿಗ್ಗಾ ವೃಷ್ಯಶೃಂಗೇಶ್ವರ ಸನ್ನಿಧಿಯಲ್ಲಿ ಮತ್ತು ಧಾರ್ಮಿಕ ದತ್ತಿ ದೇವಸ್ಥಾನಗಳಲ್ಲಿ ಪರ್ಜನ್ಯ ಜಪ ಹಾಗೂ ಹೋಮ ಅಭಿಷೇಕ ನಡೆಸಲಾಗಿದæ. ಕೆಲವು ದೇವಸ್ಥಾನಗಳಲ್ಲಿ ಈ ಪ್ರಕ್ರಿಯೆ ಇನ್ನೂ ಮುಂದುವರಿಯುತ್ತಿದೆ.

ಇಷ್ಟಾದರೂ ಇಡೀ ರಾಜ್ಯದಲ್ಲಿ ಕುಡಿಯುವ ನೀರಿಗೆ ಮತ್ತು ಕೃಷಿಗೆ ನೀರಿನ ಅಭಾವ ಕಂಡು ಬರುತ್ತಿದೆ. ಅಣೆಕಟ್ಟೆಗಳಲ್ಲಿ ಶೇಖರಣಾ ಮಟ್ಟ ಅಧೋಗತಿಗೆ ಇಳಿದಿದೆ. ಕಳೆದ ವರ್ಷ ಮಳೆಯು ಮಲೆನಾಡಿನಲ್ಲಿ ಉಗ್ರರೂಪ ತಾಳಿ ಅನೇಕ ಅನಾಹುತಕ್ಕೆ ಕಾರಣವಾಗಿತ್ತು. ಶ್ರೀ ಕ್ಷೇತ್ರದ ತಪ್ಪಲಿನ ಭದ್ರಾ ನದಿ ಅಪಾಯ ಮಟ್ಟವನ್ನು ಮೀರಿ ಹರಿದಿತ್ತು. ಈ ವರ್ಷದ ಆತಂಕಕಾರಿ ಅಭಾವ ಗಮನಿಸಿ ದೈವಶಕ್ತಿಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ. ಹಾಗಾಗಿ ಜಗನ್ಮಾತೆ ಸನ್ನಿಧಿಯಲ್ಲಿ ಶ್ರೀ ವಿಕಾರಿ ನಾಮ ಸಂವತ್ಸರದ ಉತ್ತರಾಯಣ ಆಷಾಢ ಮಾಸದ ಶುಕ್ಲ ಪಕ್ಷ ಶನಿವಾರ ಬೆಳಗ್ಗೆ ಭದ್ರಾ ನದಿಯಲ್ಲಿ ಪರ್ಜನ್ಯ ಜಪ ಪ್ರಾರ್ಥನೆ ನಡೆಸಲಾಗುವುದು. ನಂತರ ಶ್ರೀ ಕ್ಷೇತ್ರದಲ್ಲಿ 1,08,000(ಒಂದು ಲಕ್ಷ ದ ಎಂಟು ಸಾವಿರ) ಜಪ ನಡೆಸಿ, ಸೋಮವಾರ ಬೆಳಗ್ಗೆ 10ಗಂಟೆಗೆ ಹೋಮದ ಪೂರ್ಣಾಹುತಿಯೊಂದಿಗೆ ಸ್ಥಾಪಿಸಿದ 108 ಕಳಶ ಅಭಿಷೇಕವನ್ನು ಶ್ರೀಮಾತೆಗೆ ಸಮರ್ಪಿಸಲಾಗುತ್ತದೆ. ಭಕ್ತಾದಿಗಳು ಅಭಿಷೇಕದ ದ್ರವ್ಯಗಳನ್ನು ಸಮರ್ಪಿಸಬಹುದಾಗಿದೆ. ಬೆಳಗ್ಗೆ 10ಗಂಟೆಯೊಳಗೆ ತಲುಪಿಸಬೇಕು. ಮಹಾಭೀಷೇಕದ ನಂತರ ಮಹಾಮಂಗಳಾರತಿ ವಿಶೇಷ ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಸಾದ ವಿತರಿಸಲಾಗುವುದು. ರೈತರು, ನಾಗರಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಪೂಜಾ ಕಾರ್ಯವನ್ನು ಯಶಸ್ವಿಗೊಳಿಸಿಕೊಡಬೇಕೆಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ