ಆ್ಯಪ್ನಗರ

ನಿರ್ಲಕ್ಷ್ಯತನದ ಗುತ್ತಿಗೆದಾರನಿಗೆ ದಂಡ ವಿಧಿಸಿ

ಅಮೃತ್‌ ಯೋಜನೆಯಡಿ ಅವಧಿ ಮೀರಿದ್ದರೂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರನಿಗೆ ದಂಡ ವಿಧಿಸುವಂತೆ ಶಾಸಕ ಸಿ.ಟಿ.ರವಿ ಹೇಳಿದರು.

Vijaya Karnataka 4 Jun 2019, 5:00 am
ಚಿಕ್ಕಮಗಳೂರು: ಅಮೃತ್‌ ಯೋಜನೆಯಡಿ ಅವಧಿ ಮೀರಿದ್ದರೂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರನಿಗೆ ದಂಡ ವಿಧಿಸುವಂತೆ ಶಾಸಕ ಸಿ.ಟಿ.ರವಿ ಹೇಳಿದರು.
Vijaya Karnataka Web 220px-CT_Ravi,_Ex_Minister_For_Higher_Education,_Government_of_Karnataka


ಸಭೆಯಲ್ಲಿ ಮಾತನಾಡಿದ ಅವರು, ಅಮೃತ್‌ ಯೋಜನೆಯಡಿ ನಗರಕ್ಕೆ ದಿನದ 24 ಗಂಟೆ ನೀರು ಪೂರೈಸುವ ಕಾಮಗಾರಿಯನ್ನು ಮೇ ಅಂತ್ಯಕ್ಕೆ ಪೂರ್ಣಗೊಳಿಸಬೇಕಿತ್ತು. ಇದರಿಂದ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿದೆ. ಕೆಲಸ ಪೂರ್ಣಗೊಳಿಸದ ಗುತ್ತಿಗೆದಾರನಿಗೆ ದಂಡ ವಿಧಿಸಿ ಎಂದು ಸಲಹೆ ನೀಡಿದರು.

ರಾಮನಹಳ್ಳಿ ನೀರು ಶುದ್ದೀಕರಣ ಘಟಕದಲ್ಲಿ ಕೇವಲ 5-6 ಜನ ಕೆಲಸ ಮಾಡುತ್ತಿದ್ದಾರೆ. ಇಷ್ಟು ಜನ ಕೆಲಸ ಮಾಡಿದರೆ ಕಾಮಗಾರಿ ಪೂರ್ಣಗೊಳ್ಳುವುದಾದರೂ ಹೇಗೆ. ನಗರದ ವಿವಿದೆಡೆ ಪೈಪ್‌ಲೈನ್‌ ಅಳವಡಿಸಲು ರಸ್ತೆ ಅಗೆಯಲಾಗಿದೆ. ಗುತ್ತಿಗೆ ಕರಾರಿನಂತೆ ರಸ್ತೆ ಅಗೆದು ಪೈಪ್‌ಲೈನ್‌ ಅಳವಡಿಸಿದ ನಂತರ ಅದನ್ನು ಮುಚ್ಚಿ ಮೊದಲಿದ್ದ ರೀತಿಯಲ್ಲಿಯೇ ರಸ್ತೆ ಮಾಡಬೇಕು. ಆದರೆ, ನಗರದ ಯಾವುದೇ ಭಾಗದಲ್ಲಿಯೂ ಈ ಕೆಲಸ ಆಗಿಲ್ಲ ಎಂದು ದೂರಿದರು.

ನಾಳೆಯೇ ಗುತ್ತಿಗೆದಾರರನ್ನು ಕರೆಸಿ ಅವರೊಂದಿಗೆ ಚರ್ಚಿಸಿ. ಮತ್ತೊಮ್ಮೆ ಎಷ್ಟು ದಿನದಲ್ಲಿ ಯಾವ ಯಾವ ಕೆಲಸ ಮಾಡಬೇಕೆಂಬ ಬಗ್ಗೆ ನಿರ್ಧರಿಸಿ. ಅಷ್ಟು ಕೆಲಸ ಪೂರ್ಣಗೊಳಿಸಲು ಬೇಕಿರುವಷ್ಟು ಕೆಲಸಗಾರರನ್ನು ಪೂರೈಸಲು ಗುತ್ತಿಗೆದಾರರಿಗೆ ಸಾಧ್ಯವಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಕಾಲವನ್ನು ವಿಸ್ತರಿಸಿಕೊಡಿ ಎಂದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, 154 ಕೋಟಿ ರೂ. ವೆಚ್ಚದ ವಾಟರ್‌ ಫಿಲ್ಟರ್‌ ಬೆಡ್‌ ಕಾಮಗಾರಿಯನ್ನು ಕೇವಲ 5-10 ಜನ ಕೆಲಸಗಾರರು ಮಾಡಿದರೆ ಎಷ್ಟು ವರ್ಷವಾದರೂ ಕಾಮಗಾರಿ ಮುಗಿಯುವುದಿಲ್ಲ. ಆಗುವುದಿಲ್ಲ ಎಂದಾದರೆ ಬರೆದುಕೊಡಿ. ನಗರಸಭೆ, ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ಕೊಟ್ಟರೂ ಕೆಲಸ ಮಾಡಲು ಏನು ತೊಂದರೆ ಎಂದು ಪ್ರಶ್ನಿಸಿದರು.

ಕೋಟ್ಯಂತರ ರೂ. ಬಾಕಿ: ಪ್ರಸ್ತುತ ಸಾಲಿನಲ್ಲಿ 2.50 ಕೋಟಿ ರೂ. ಕಂದಾಯ ವಸೂಲಿ ಬಾಕಿ ಇದೆ. ಸರಕಾರಿ ಇಲಾಖೆಗಳಿಂದಲೇ ಹೆಚ್ಚಿನ ಕಂದಾಯ ಬಾಕಿ ಇದೆ ಎಂದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಇಷ್ಟೊಂದು ಕಂದಾಯ ಬಾಕಿ ಹೇಗೆ ಉಳಿಯಿತು. ಸಂಬಂಧಪಟ್ಟ ಕಚೇರಿಯೊಂದಿಗೆ ಮಾತನಾಡಿ ಕಂದಾಯ ಕಟ್ಟಿಸುವುದಾಗಿ ಡಿಸಿ ಭರವಸೆ ನೀಡಿದರು.

ಕಸ ಸಂಗ್ರಹಣೆ, ನಿರ್ವಹಣೆ ಬಗ್ಗೆ ಕಂದಾಯ ನಿರೀಕ್ಷ ಕರು, ತಾವು ಮತ್ತು ಶಾಸಕರುಗಳನ್ನೊಳಗೊಂಡ ವಾಟ್ಸ್‌ ಅಪ್‌ ಗ್ರೂಪ್‌ ಮಾಡಿ. ಆರೋಗ್ಯ ನಿರೀಕ್ಷ ಕರು ಪ್ರತಿನಿತ್ಯ ಹಾಜರಾತಿ ಪಡೆಯುವುದು, ಪ್ರತಿಯೊಂದು ವಾರ್ಡಿಗೆ ಭೇಟಿ ನೀಡಿ ಕೆಲಸ ಪರಿಶೀಲಿಸಿರುವ ಭಾವಚಿತ್ರಗಳನ್ನು ಗ್ರೂಪಿಗೆ ಹಾಕಬೇಕು ಎಂದು ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ