ಆ್ಯಪ್ನಗರ

ಜನ ಸ್ನೇಹಿ ವಾತಾವರಣ ನಿರ್ಮಾಣ

ಕಾವೇರಿ ಗ್ರಾಮೀಣ ಬ್ಯಾಂಕ್‌ ಸರಕಾರದ ನೆರವಿನೊಂದಿಗೆ ಜನ ಸ್ನೇಹಿ ವಾತಾವರಣ ನಿರ್ಮಾಣವಾಗಿದೆ ಎಂದು ಕಾವೇರಿ ಗ್ರಾಮೀಣ ಬ್ಯಾಂಕಿನ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ಕೆ.ಜಿ.ನಾಗರಾಜ್‌ ಹೇಳಿದರು.

Vijaya Karnataka 31 Oct 2018, 5:00 am
ನರಸಿಂಹರಾಜಪುರ : ಕಾವೇರಿ ಗ್ರಾಮೀಣ ಬ್ಯಾಂಕ್‌ ಸರಕಾರದ ನೆರವಿನೊಂದಿಗೆ ಜನ ಸ್ನೇಹಿ ವಾತಾವರಣ ನಿರ್ಮಾಣವಾಗಿದೆ ಎಂದು ಕಾವೇರಿ ಗ್ರಾಮೀಣ ಬ್ಯಾಂಕಿನ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ಕೆ.ಜಿ.ನಾಗರಾಜ್‌ ಹೇಳಿದರು.
Vijaya Karnataka Web CKM-30nrp2


ಅವರು ರಾವೂರು ಗ್ರಾಮದ ಮೀನು ಕ್ಯಾಂಪಿನ ಸಮುದಾಯ ಭವನದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌ ಹಾಗೂ ನಬಾರ್ಡ್‌ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರ್ಥಿಕ ಸಾಕ್ಷ ರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾವೇರಿ ಗ್ರಾಮೀಣ ಬ್ಯಾಂಕ್‌ ಶೇ 100 ರಷ್ಟು ರಾಷ್ಟೀಕೃತ ಬ್ಯಾಂಕ್‌ ಆಗಿದೆ.ಕೇಂದ್ರ ಸರಕಾರದ ಶೇ. 50 ರಷ್ಟು ಷೇರು ಬಂಡವಾಳ,ರಾಜ್ಯ ಸರಕಾರದ ಶೇ 15 ರಷ್ಟು ಹಾಗೂ ಎಸ್‌ಬಿಐನ ಶೇ 35 ರಷ್ಟು ಬಂಡವಾಳ ಹೊಂದಿದೆ.ಖಾಸಗಿ ಬ್ಯಾಂಕಿಗಿಂತ ರಾಷ್ಟೀಕೃತ ಬ್ಯಾಂಕಿನಲ್ಲಿ ಮಾತ್ರ ವಿಮೆ ಸಿಗಲಿದೆ.ಠೇವಣಿ, ಖಾತೆಯಲ್ಲಿರುವ ಹಣಕ್ಕೆ ಭದ್ರತೆ ಇರಲಿದೆ ಎಂದರು.

ಬ್ಯಾಂಕುಗಳ ಆರ್ಥಿಕ ಸಾಕ್ಷ ರತಾ ಸಂಯೋಜಕ ಸುರೇಶ್‌ ಮಾತನಾಡಿ, ಕಾವೇರಿ ಗ್ರಾಮೀಣ ಬ್ಯಾಂಕಿನಿಂದ ರಾವೂರು ಗ್ರಾಮದ ಜನರಿಗಾಗಿ ಜಂಟಿ ಬಾಧÜ್ಯತಾ ಗುಂಪು ಪ್ರಾರಂಭಿಸಲಾಗಿದ್ದು, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದೇವೆ.ಖಾಸಗಿ ಹಣಕಾಸು ಸಂಸ್ಥೆಗಳು ಹೆಚ್ಚು ಬಡ್ಡಿ ವಿಧಿಸುತ್ತಿರುವುದರಿಂದ ಜನರು ಸಾಧ್ಯವಾದಷ್ಟು ಬ್ಯಾಂಕಿನಲ್ಲೇ ವ್ಯವಹಾರ ಮಾಡುವುದು ಒಳ್ಳೆಯದು ಎಂದರು.

ನರಸಿಂಹರಾಜಪುರ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ರಾಮಪ್ಪ ಮಾತನಾಡಿ, ಸುಸ್ತಿದಾರರಾಗಿರುವ ಗ್ರಾಹಕರು ಸಾಲವನ್ನು ಮರು ಪಾವತಿ ಮಾಡಿದರೆ ಸಾಲವನ್ನು ನವೀಕರಣ ಮಾಡಿಕೊಡುತ್ತೇವೆ.ಕಾವೇರಿ ಗ್ರಾಮೀಣ ಬ್ಯಾಂಕ್‌ ಎಲ್ಲ ಗ್ರಾಹಕರೊಂದಿಗೆ ಸೌಹಾರ್ದತವಾಗಿ ನಡೆದುಕೊಳ್ಳುತ್ತಿದೆ ಎಂದರು.

ನಬಾರ್ಡನ ಡಿ.ಡಿ.ಎಂ. ಪ್ರತಾಪ್‌ ಮಾತನಾಡಿ,ನಬಾರ್ಡನಿಂದ ಹಸು, ಕುರಿ,ಕೋಳಿ ಸಾಕಾಣಿಕೆಗೆ ಸಹಾಯಧನ ನೀಡುತ್ತೇವೆ. ಎಸ್‌.ಸಿ.ಎಸ್‌.ಟಿ ಫಲಾನುಭವಿಗಳಿಗೆ ಶೇ 33 ರಷ್ಟು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ 25 ರಷ್ಟ ಸಹಾಯಧನ ಸಿಗಲಿದೆ ಎಂದರು.

ಗ್ರಾಮೀಣ ಬ್ಯಾಂಕಿನ ಜಿಲ್ಲಾ ಸೀನಿಯರ್‌ ವ್ಯವಸ್ಥಾಪಕ ಗಣಪತಿ ಶೆಣೈ,ಮುಖಂಡರಾದ ನ.ರಾ.ಪುರದ ಶಿವಪ್ಪ ಗೌಡ,ಸ್ಥಳೀಯ ಮುಖಂಡ ಗುಂಡಪ್ಪ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಮೀನು ಕ್ಯಾಂಪಿನ ರೇಣುಕ ದೇವಿ ಜಂಟಿ ಬಾದ್ಯತಾ ಗುಂಪಿನ 5 ಸದಸ್ಯಣಿಯರಿಗೆ ತಲಾ 50 ಸಾವಿರ ರುಪಾಯಿಯಂತೆ 2.50 ಲಕ್ಷ ರುಪಾಯಿ ಚೆಕ್‌ ವಿತರಿಸಲಾಯಿತು. ಕಾವೇರಿ ಗ್ರಾಮೀಣ ಬ್ಯಾಂಕಿನ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ಕೆ.ಜಿ.ನಾಗರಾಜ್‌, ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಸಂಗೀತ ಪ್ರಾರ್ಥಿಸಿದರು. ಬ್ಯಾಂಕಿನ ಕ್ಯಾಶಿಯರ್‌ ವಿಶ್ವನಾಥ್‌ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ