ಆ್ಯಪ್ನಗರ

ಕೊಟ್ಟಿಗೆಹಾರ ಸುತ್ತಮುತ್ತ ಜನ ಅತಂತ್ರ

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತಲಿನ ಗ್ರಾಮಗಳ ಜನ ಅಕ್ಷರಶಃ ಅತಂತ್ರವಾಗಿದ್ದಾರೆ. ಭಾರಿ ಪ್ರಮಾಣದಲ್ಲಿ ಗುಡ್ಡಗಳು ಕುಸಿಯುತ್ತಿದ್ದು, ಕೊಟ್ಟಿಗೆಹಾರದ ಕಾಳಜಿ ಕೇಂದ್ರಕ್ಕೆ ಬರುವುದಕ್ಕೂ ದಾರಿಯಿಲ್ಲದೆ ಗೋಳಾಡುತ್ತಿದ್ದಾರೆ.

Vijaya Karnataka 10 Aug 2019, 5:00 am
ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತಲಿನ ಗ್ರಾಮಗಳ ಜನ ಅಕ್ಷರಶಃ ಅತಂತ್ರವಾಗಿದ್ದಾರೆ. ಭಾರಿ ಪ್ರಮಾಣದಲ್ಲಿ ಗುಡ್ಡಗಳು ಕುಸಿಯುತ್ತಿದ್ದು, ಕೊಟ್ಟಿಗೆಹಾರದ ಕಾಳಜಿ ಕೇಂದ್ರಕ್ಕೆ ಬರುವುದಕ್ಕೂ ದಾರಿಯಿಲ್ಲದೆ ಗೋಳಾಡುತ್ತಿದ್ದಾರೆ.
Vijaya Karnataka Web CKM-9ARAGAP3


ಹೇಮಾವತಿ ನದಿ ಉಗಮ ಸ್ಥಾನ ಜಾವಳಿಯಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಕೊಟ್ಟಿಗೆಹಾರ ಸುತ್ತಮುತ್ತ ಹತ್ತಾರು ಕಿಲೋಮೀಟರ್‌ ದೂರದಲ್ಲಿರುವ ಗ್ರಾಮಗಳ ಜನ ನಡೆದುಕೊಂಡೇ ಕಾಳಜಿ ಕೇಂದ್ರಕ್ಕೆ ಬಂದಿದ್ದಾರೆ. ಜಾವಳಿ, ಮಲೆಮನೆ ಮತ್ತಿತರ ಗ್ರಾಮಗಳಿಂದ 150ಕ್ಕೂ ಹೆಚ್ಚು ಮಂದಿ ಕೊಟ್ಟಿಗೆಹಾರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ನಡೆದುಕೊಂಡು ಬಂದು ಆಶ್ರಯ ಪಡೆದಿದ್ದಾರೆ.

ಹೀಗೆ ಬಂದ ಜನರಿಗೆ ಕೊಟ್ಟಿಗೆಹಾರದ ವರ್ತಕರು ಉಚಿತವಾಗಿ ಊಟ, ಉಪಹಾರ ನೀಡಿ ಸತ್ಕರಿಸುತ್ತಿದ್ದಾರೆ. ಕಾಳಜಿ ಕೇಂದ್ರದ ಬಳಿ ಉಪ ವಿಭಾಗಾಧಿಕಾರಿ ಕೆ.ಎಚ್‌.ಶಿವಕುಮಾರ್‌, ತಹಸೀಲ್ದಾರ್‌, ತಾ.ಪಂ. ಕಾರ‍್ಯ ನಿರ್ವಹಣಾಧಿಕಾರಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಮಾಡಿದ್ದಾರೆ.ಕೊಟ್ಟಿಗೆಹಾರಕ್ಕೆ ತೆರಳಲು ಪ್ರಯತ್ನಿಸಿದ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಹೊರಟ್ಟಿವರೆಗೂ ತೆರಳಿ ಮುಂದಕ್ಕೆ ಹೋಗಲು ದಾರಿ ಇಲ್ಲದೆ ಮೂಡಿಗೆರೆಗೆ ವಾಪಸ್ಸಾಗಿದ್ದಾರೆ. ಜಡಿಮಳೆ, ಚಳಿ, ಗಾಳಿಯಲ್ಲಿ ವಯೋವೃದ್ಧರು, ಮಕ್ಕಳು, ಮಹಿಳೆಯರು ನಡೆದುಕೊಂಡು ಬರಲು ಆಗದೆ ನಿತ್ರಾಣಗೊಂಡಿದ್ದರೂ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮನೆಯಲ್ಲಿದ್ದ ದನಕರುಗಳ ಜೀವ ಉಳಿದಿದೆಯೋ ಇಲ್ಲವೋ ಎಂದು ಜನ ಕಣ್ಣೀರಿಡುತ್ತಿದ್ದಾರೆ. ರಸ್ತೆಗಳ ಮೇಲೆ ಕುಸಿದು ಬಿದ್ದಿರುವ ಅಪಾರ ಪ್ರಮಾಣದ ಮಣ್ಣು ತೆರವು ಮಾಡಲು ಜೆಸಿಬಿಯವರು ಮುಂದೆ ಬರುತ್ತಿಲ್ಲ. ಹಣ ಕೊಡದೆ ಬರಿಗೈಯಲ್ಲಿ ಬಂದು ಕೆಲಸ ಮಾಡಿ ಎಂದರೆ ಜೆಸಿಬಿಯವರು ಬರುವುದಿಲ್ಲ. ನೀವು ಹಣ ಕೊಟ್ಟು ಕೆಲಸ ಮಾಡಿಸಿ. ನಮ್ಮ ಹೆಂಡತಿ ಮಕ್ಕಳು ಪ್ರಾಣಾಪಾಯದಲ್ಲಿದ್ದಾರೆ ಎಂದು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ