ಆ್ಯಪ್ನಗರ

'ತೆರಿಗೆ ಹಣ ಕೆಲವೇ ರಾಜ್ಯಕ್ಕೆ ಹಂಚಿಕೆ': ಕೆಪಿಸಿಸಿ ಕಿಸಾನ್‌ ಸೆಲ್‌ ಕಾರ್ಯಾಧ್ಯಕ್ಷರ ಟೀಕೆ

ಚುನಾವಣೆ ಅಜೆಂಡಾ ಇಟ್ಟುಕೊಂಡು ಜನರ ಕ್ರೂಡೀಕೃತ ತೆರಿಗೆ ಹಣವನ್ನು ಕೆಲವೇ ರಾಜ್ಯಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಬೆಜೆಟ್‌ನಲ್ಲಿ ನೀಡಿರುವುದು ಈ ದೇಶದ ದುರಂತ ಎಂದು ಕೆಪಿಸಿಸಿ ಕಿಸಾನ್‌ ಸೆಲ್‌ ಕಾರ್ಯಾಧ್ಯಕ್ಷ ಡಿ.ಎಂ.ವಿಜಯ್‌ ಟೀಕಿಸಿದರು.

Vijaya Karnataka Web 2 Feb 2021, 7:38 pm
ಚಿಕ್ಕಮಗಳೂರು: ಚುನಾವಣೆ ಅಜೆಂಡಾ ಇಟ್ಟುಕೊಂಡು ಜನರ ಕ್ರೂಡೀಕೃತ ತೆರಿಗೆ ಹಣವನ್ನು ಕೆಲವೇ ರಾಜ್ಯಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಬೆಜೆಟ್‌ನಲ್ಲಿ ನೀಡಿರುವುದು ಈ ದೇಶದ ದುರಂತ ಎಂದು ಕೆಪಿಸಿಸಿ ಕಿಸಾನ್‌ ಸೆಲ್‌ ಕಾರ್ಯಾಧ್ಯಕ್ಷ ಡಿ.ಎಂ.ವಿಜಯ್‌ ಟೀಕಿಸಿದರು.
Vijaya Karnataka Web money33-getty
Contribution to NPS has lately become one of the favored options to save taxes.


ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರ ತೆರಿಗೆ ಹಣ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿ ವಿನಿಯೋಗವಾಗಬೇಕಿತ್ತು. ಆದರೆ, ಚುನಾಚಣೆ ನಡೆಯುವ 4 ರಾಜ್ಯಗಳಿಗೆ ಹೆಚ್ಚು ಅನುದಾನ ಘೋಷಿಸಿ, ಕೇವಲ ಹೆದ್ದಾರಿಗಳಿಗೆ ಹಣ ಇಟ್ಟು ಅದರಲ್ಲಿ ಕಮಿಷನ್‌ ದಂಧೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದರು.

ಈ ಬಜೆಟ್‌ ರೈತ, ಕಾರ್ಮಿಕ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದೆ. ದೇಶದ ರೈತರು ತಾವು ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲ ತೀರಿಸಲಾಗದೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು ಅವರಿಗೆ ಯಾವುದೇ ನೆರವು ಘೋಷಿಸಿಲ್ಲ. ಮತ್ತೆ 16.50 ಲಕ್ಷ ಕೋಟಿ ರೈತರಿಗೆ ಸಾಲ ನೀಡುವುದಾಗಿ ಹೇಳಿದ್ದಾರೆ. ಇವರೇನು ಪಾಕಿಸ್ತಾನದಿಂದ ರೈತರನ್ನು ಕರೆತಂದು ಸಾಲ ಕೊಡುತ್ತಾರೆಯೇ ಎಂದು ಪ್ರಶ್ನೆ ಮಾಡಿದರು.

ಆನ್‌ಲೈನ್‌ ಮದ್ಯ ಮಾರಾಟಕ್ಕೆ ಮದ್ಯ ಮಾರಾಟಗಾರರಿಂದ ತೀವ್ರ ವಿರೋಧ!

ಕಾಳು ಮೆಣಸು ಆಮದು ಮಾಡಿ ದೇಶದ ಬೆಳೆಗಾರರನ್ನು ಅತಂತ್ರ ಮಾಡಿದ್ದಾರೆ. ದೇಶದ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರಕಾರದ ನೀತಿ ಸರಿಯಿಲ್ಲ. ಕಾಫಿ ಬೆಳೆಗಾರರು ಈ ದೇಶಕ್ಕೆ ವಿದೇಶಿ ವಿನಿಮಯದ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ. 50 ಲಕ್ಷ ಕೋಟಿ ರೂ. ಹೂಡಿಕೆ ಮಾಡಿರಬಹುದು. ಬೆಳೆಗಾರರಿಂದ ಅತಿ ಹೆಚ್ಚು ತೆರಿಗೆ ಪಡೆಯಲಾಗುತ್ತಿದೆ. ಆದರೆ, ರಸಗೊಬ್ಬರ ಬೆಲೆ ದುಬಾರಿ ಆಗಿದೆ. ಇವರ ರಾಜಕೀಯ ಓಟ್‌ ಬ್ಯಾಂಕ್‌ ಗಟ್ಟಿಮಾಡಿಕೊಳ್ಳಲು ಜನಸಾಮಾನ್ಯರ, ಕಾರ್ಮಿಕರ, ರೈತ ಬೆಳೆಗಾರರ ಹಿತ ಮರೆತು ತೆರಿಗೆ ಹಣವನ್ನು ಬೇಕಾಬಿಟ್ಟಿ ವಿನಿಯೋಗ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕಿಸಾನ್‌ ಘಟಕದ ನರೇಂದ್ರ, ಕಿರಣ್‌, ವಿನಯ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ