ಆ್ಯಪ್ನಗರ

ಕಾಯಂ, ವೇತನ ನೇರ ಪಾವತಿಗೆ ಆಗ್ರಹ

ಕಳೆದ 19 ವರ್ಷದಿಂದ ಹೊರ ಗುತ್ತಿಗೆ ಪೌರ ಕಾರ್ಮಿಕರಾಗಿ ಪ.ಪಂ.ಯಲ್ಲಿ ಸೇವೆ ಸಲ್ಲಿಸುತ್ತಿದ್ದು, ನಮ್ಮನ್ನು ಸರಕಾರ ಕಾಯಂಗೊಳಿಸಿ ವೇತನವನ್ನು ನೇರ ಪಾವತಿ ಮಾಡಬೇಕು ಎಂದು ಹೊರ ಗುತ್ತಿಗೆ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ರಮೇಶ್‌ ಹೇಳಿದರು.

Vijaya Karnataka 11 Jun 2019, 5:00 am
ಶೃಂಗೇರಿ : ಕಳೆದ 19 ವರ್ಷದಿಂದ ಹೊರ ಗುತ್ತಿಗೆ ಪೌರ ಕಾರ್ಮಿಕರಾಗಿ ಪ.ಪಂ.ಯಲ್ಲಿ ಸೇವೆ ಸಲ್ಲಿಸುತ್ತಿದ್ದು, ನಮ್ಮನ್ನು ಸರಕಾರ ಕಾಯಂಗೊಳಿಸಿ ವೇತನವನ್ನು ನೇರ ಪಾವತಿ ಮಾಡಬೇಕು ಎಂದು ಹೊರ ಗುತ್ತಿಗೆ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ರಮೇಶ್‌ ಹೇಳಿದರು.
Vijaya Karnataka Web CKM-10SRI4


ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಸೋಮವಾರ ಹೊರ ಗುತ್ತಿಗೆ ಪೌರ ಕಾರ್ಮಿಕರು ನೇರ ಪಾವತಿ ಮತ್ತು ನೌಕರಿ ಕಾಯಂಗೊಳಿಸುವ ಬಗ್ಗೆ ಹೊರ ಗುತ್ತಿಗೆ ಪೌರ ಕಾರ್ಮಿಕ ಸಂಘ ಕೈಗೊಂಡ ಅನಿರ್ಧಿಷ್ಠಾವಧಿ ಮುಷ್ಕರ ಕೈಗೊಂಡ ಸಂದರ್ಭ ಮಾತನಾಡಿದರು.

ಸರಕಾರ 700 ಜನರಿಗೆ ಒಬ್ಬರಂತೆ ಪೌರ ಕಾರ್ಮಿಕರನ್ನು ನಿಯೋಜಿಸಿದ್ದು, ಇದರಂತೆ ಪಟ್ಟಣದ ಜನ ಸಂಖ್ಯೆ ಕೇವಲ 3925 ಇದೆ. ನಿಯಮದಂತೆ 5 ಕಾಯಂ ಪೌರ ಕಾರ್ಮಿಕರಿದ್ದಾರೆ. ಆದರೆ ಶ್ರೀ ಶಾರದಾ ಪೀಠಕ್ಕೆ ಸಾವಿರಾರು ಪ್ರವಾಸಿಗರು ಬರುವುದರಿಂದ ಕೇವಲ 5 ಕಾರ್ಮಿಕರಿಂದ ಪಟ್ಟಣದ ಸ್ವಚ್ಛತೆ ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ತೀರ್ಮಾನಿಸಿ, ಹೆಚ್ಚುವರಿ ನೌಕರರನ್ನು ಪಡೆದುಕೊಂಡಿದೆ. ಆದರೆ ನಿರಂತರವಾಗಿ ನಾವು ಸೇವೆ ಸಲ್ಲಿಸುತ್ತಾ ಬಂದಿದ್ದರೂ, ನಮ್ಮನ್ನು ಸರಕಾರ ಕಾಯಂಗೊಳಿಸಿಲ್ಲ. ಶೃಂಗೇರಿ ಪಟ್ಟಣವನ್ನು ಪ.ಪಂ. ಎಂದು ಸರಕಾರ ಘೋಷಿಸುವಾಗ ಕಡಿಮೆ ಜನ ಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ಶ್ರೀಮಠವಿರುವ ಹಿನ್ನೆಲೆಯಲ್ಲಿ ಪ.ಪಂ.ಯಾಗಿ ಘೋಷಿಸಿದೆ ಎಂದರು.

ಸಂಘದ ಕಾರ್ಯದರ್ಶಿ ಸುಖೇಶ್‌ ಮಾತನಾಡಿ, ಹೊರ ಗುತ್ತಿಗೆ ನೌಕರರು ಕಾಯಂ ನೌಕರರಂತೆ ಸೇವೆ ಸಲ್ಲಿಸುತ್ತಿದ್ದೇವೆ. ಪ.ಪಂ. ಎಂದು ಘೋಷಿಸಿದಂತೆ ನಮ್ಮನ್ನು ಕೂಡ ವಿಶೇಷ ಪ್ರಕರಣ ಎಂದು ಪರಿಗಣಿಸಿ ನೇರ ಪಾವತಿ ಮತ್ತು ಕಾಯಂಗೊಳಿಸಿ ಸರಕಾರ ಆದೇಶ ನೀಡಬೇಕು ಎಂದರು.

ಧರಣಿ ಸತ್ಯಾಗ್ರಹದಲ್ಲಿ ಪ.ಪಂ. ಸದಸ್ಯ ರಫೀಕ್‌ ಅಹಮದ್‌, ನಿವೃತ್ತ ನೌಕರ ವಿಜೇಂದ್ರ, ಸಂಘದ ಸದಸ್ಯರಾದ ಕುಮಾರ್‌, ಲಕ್ಷ್ಮೀ, ನಾಗೇಶ್‌, ಶ್ರೀನಿವಾಸ್‌, ಅಂಜಲಿ, ಸುಜಾತ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ