ಕಡೂರು : ಶಾಶ್ವತ ನೀರಾವರಿ ಕುರಿತಂತೆ ಜಿಲ್ಲೆಯಲ್ಲಿ ಸಕಾರಾತ್ಮಕ ಚಿಂತನೆ ಆರಂಭವಾಗಬೇಕು ಎಂದು ಶಾಸಕ ಬೆಳ್ಳಿಪ್ರಕಾಶ್ ಅಭಿಪ್ರಾಯಪಟ್ಟರು.
ತಾಲೂಕಿನ ಸಿದ್ರಾಮನಹಳ್ಳಿ ಗ್ರಾಮದ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ವಿ.ಉಮಾಪತಿ ಅವರ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಭರವಸೆ ಬೆಳಕು ನೀರಾವರಿ ಆಶಯ ಎಂಬ ಶ್ರಾವಣ ಸಂಜೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.
ತಾಲೂಕಿಗೆ ಶಾಶ್ವತ ನೀರಾವರಿಯ ಯೋಜನೆಯ ಕನಸಿಗೆ ಹಲವು ವರ್ಷದ ಇತಿಹಾಸವಿದೆ. ಈ ತಾಲೂಕಿಗೆ ಹಂಚಿಕೆಯಾಗಿರುವ 1.538 ಟಿಎಂಸಿ ನೀರಿನ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ತಾವು ಕಾರ್ಯಪ್ರವೃತ್ತನಾಗುತ್ತೇನೆ. ಜತೆಗೆ ಹಿಂದಿನ ಶಾಸಕರುಗಳು ಈ ಕುರಿತಂತೆ ಹಾಕಿರುವ ಶ್ರಮವನ್ನು ಸ್ಮರಿಸುತ್ತೇನೆ ಎಂದರು.
ರಾಜ್ಯದಲ್ಲಿ ಅತೀವೃಷ್ಟಿಯಿಂದ ಬಹುತೇಕ ಎಲ್ಲಾ ಜಲಾಶಯಗಳು ತುಂಬಿ ಹರಿಯುತ್ತಿವೆ. ಕಡೂರು ತಾಲೂಕಿನ ಕೆರೆಗಳು ಈಗಲೂ ಬರಿದಾಗಿವೆ. ನದಿಗಳು ಹುಟ್ಟುವ ಜಿಲ್ಲೆ ಇದಾದರೂ ನೀರಾವರಿ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಇನ್ನೂ ಇಚ್ಛಾಶಕ್ತಿಯ ಕೊರತೆಯಿದೆ ಎಂದು ಹೇಳಿದರು.
ಕಡೂರು ತಾಲೂಕಿನ ಮದಗದಕೆರೆ, ಅಯ್ಯನಕೆರೆ ಹಾಗೂ ವಿಷ್ಣುಸಮುದ್ರ ಕೆರೆಗಳನ್ನು ಭರ್ತಿ ಮಾಡುವ ಗೊಂದಿ ಅಣೆಕಟ್ಟು ಯೋಜನೆ ಅನುಷ್ಟಾನ ಕುರಿತಂತೆ ತಾವು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಈಗಾಗಲೇ ಚರ್ಚಿಸಿದ್ದೇನೆ. ಅಲ್ಲದೇ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಸಂಸದರ ಜತೆ ಮುಖ್ಯಮಂತ್ರಿ ಬಳಿಗೆ ನಿಯೋಗವನ್ನೂ ಕೊಂಡೊಯ್ಯಲಾಗಿತ್ತು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಅತಿವೃಷ್ಟಿ ಅಬ್ಬರದಲ್ಲಿ ನಾಡಿನ ಬದುಕು ಬರ್ಬರವಾಗಿರುವಾಗ ತಾಲೂಕಿನ ಸಿದ್ರಾಮನಹಳ್ಳಿಯಲ್ಲಿ ಶಾಶ್ವತ ನೀರಾವರಿ ಕಲ್ಪಿಸುವ ಕುರಿತಂತೆ ಸಂವಾದ ನಡೆಯುತ್ತಿರುವುದು ಸಾಹಿತ್ಯ ಪರಿಷತ್ತಿನ ಜನಪರ ಕಾಳಜಿಗೆ ಉದಾಹರಣೆ ಎಂದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ವಕೀಲ ಕೆ.ಎನ್.ಬೊಮ್ಮಣ್ಣ ಮಾತನಾಡಿ, ಹೆಬ್ಬೆ ತಿರುವು ಯೋಜನೆ ಮತ್ತು ಗೊಂದಿ ಅಣೆಕಟ್ಟು ಯೋಜನೆ ಸಾಕಾರವಾದಲ್ಲಿ ಕಡೂರು ತಾಲೂಕಿನ ನೀರಾವರಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ. ಶಾಸಕರ ಒತ್ತಾಸೆಯೊಂದಿಗೆ ಸಮಿತಿಯೂ ಬೆಂಬಲಕ್ಕೆ ನಿಲ್ಲಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಜಿ.ಪಂ. ಸದಸ್ಯ ಜಿ.ಎನ್.ವಿಜಯ್ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ವೈ.ಎಸ್. ರವಿಪ್ರಕಾಶ್, ಉಮಾಪತಿ, ಅರಣ್ಯಾಧಿಕಾರಿ ಬಸವರಾಜ್, ಕೆ.ಹೆಚ್. ಶಂಕರ್, ಸಿ.ಪಿ. ಪ್ರಕಾಶ್ ಮುಂತಾದವರು ಹಾಜರಿದ್ದರು.
ತಾಲೂಕಿನ ಸಿದ್ರಾಮನಹಳ್ಳಿ ಗ್ರಾಮದ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ವಿ.ಉಮಾಪತಿ ಅವರ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಭರವಸೆ ಬೆಳಕು ನೀರಾವರಿ ಆಶಯ ಎಂಬ ಶ್ರಾವಣ ಸಂಜೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.
ತಾಲೂಕಿಗೆ ಶಾಶ್ವತ ನೀರಾವರಿಯ ಯೋಜನೆಯ ಕನಸಿಗೆ ಹಲವು ವರ್ಷದ ಇತಿಹಾಸವಿದೆ. ಈ ತಾಲೂಕಿಗೆ ಹಂಚಿಕೆಯಾಗಿರುವ 1.538 ಟಿಎಂಸಿ ನೀರಿನ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ತಾವು ಕಾರ್ಯಪ್ರವೃತ್ತನಾಗುತ್ತೇನೆ. ಜತೆಗೆ ಹಿಂದಿನ ಶಾಸಕರುಗಳು ಈ ಕುರಿತಂತೆ ಹಾಕಿರುವ ಶ್ರಮವನ್ನು ಸ್ಮರಿಸುತ್ತೇನೆ ಎಂದರು.
ರಾಜ್ಯದಲ್ಲಿ ಅತೀವೃಷ್ಟಿಯಿಂದ ಬಹುತೇಕ ಎಲ್ಲಾ ಜಲಾಶಯಗಳು ತುಂಬಿ ಹರಿಯುತ್ತಿವೆ. ಕಡೂರು ತಾಲೂಕಿನ ಕೆರೆಗಳು ಈಗಲೂ ಬರಿದಾಗಿವೆ. ನದಿಗಳು ಹುಟ್ಟುವ ಜಿಲ್ಲೆ ಇದಾದರೂ ನೀರಾವರಿ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಇನ್ನೂ ಇಚ್ಛಾಶಕ್ತಿಯ ಕೊರತೆಯಿದೆ ಎಂದು ಹೇಳಿದರು.
ಕಡೂರು ತಾಲೂಕಿನ ಮದಗದಕೆರೆ, ಅಯ್ಯನಕೆರೆ ಹಾಗೂ ವಿಷ್ಣುಸಮುದ್ರ ಕೆರೆಗಳನ್ನು ಭರ್ತಿ ಮಾಡುವ ಗೊಂದಿ ಅಣೆಕಟ್ಟು ಯೋಜನೆ ಅನುಷ್ಟಾನ ಕುರಿತಂತೆ ತಾವು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಈಗಾಗಲೇ ಚರ್ಚಿಸಿದ್ದೇನೆ. ಅಲ್ಲದೇ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಸಂಸದರ ಜತೆ ಮುಖ್ಯಮಂತ್ರಿ ಬಳಿಗೆ ನಿಯೋಗವನ್ನೂ ಕೊಂಡೊಯ್ಯಲಾಗಿತ್ತು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಅತಿವೃಷ್ಟಿ ಅಬ್ಬರದಲ್ಲಿ ನಾಡಿನ ಬದುಕು ಬರ್ಬರವಾಗಿರುವಾಗ ತಾಲೂಕಿನ ಸಿದ್ರಾಮನಹಳ್ಳಿಯಲ್ಲಿ ಶಾಶ್ವತ ನೀರಾವರಿ ಕಲ್ಪಿಸುವ ಕುರಿತಂತೆ ಸಂವಾದ ನಡೆಯುತ್ತಿರುವುದು ಸಾಹಿತ್ಯ ಪರಿಷತ್ತಿನ ಜನಪರ ಕಾಳಜಿಗೆ ಉದಾಹರಣೆ ಎಂದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ವಕೀಲ ಕೆ.ಎನ್.ಬೊಮ್ಮಣ್ಣ ಮಾತನಾಡಿ, ಹೆಬ್ಬೆ ತಿರುವು ಯೋಜನೆ ಮತ್ತು ಗೊಂದಿ ಅಣೆಕಟ್ಟು ಯೋಜನೆ ಸಾಕಾರವಾದಲ್ಲಿ ಕಡೂರು ತಾಲೂಕಿನ ನೀರಾವರಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ. ಶಾಸಕರ ಒತ್ತಾಸೆಯೊಂದಿಗೆ ಸಮಿತಿಯೂ ಬೆಂಬಲಕ್ಕೆ ನಿಲ್ಲಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಜಿ.ಪಂ. ಸದಸ್ಯ ಜಿ.ಎನ್.ವಿಜಯ್ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ವೈ.ಎಸ್. ರವಿಪ್ರಕಾಶ್, ಉಮಾಪತಿ, ಅರಣ್ಯಾಧಿಕಾರಿ ಬಸವರಾಜ್, ಕೆ.ಹೆಚ್. ಶಂಕರ್, ಸಿ.ಪಿ. ಪ್ರಕಾಶ್ ಮುಂತಾದವರು ಹಾಜರಿದ್ದರು.